tag:blogger.com,1999:blog-3801145547574396252024-03-13T14:08:01.985-07:00ನಂಮನೆnagaraja raohttp://www.blogger.com/profile/09150767551244015450noreply@blogger.comBlogger18125tag:blogger.com,1999:blog-380114554757439625.post-68478899682756968322011-02-22T22:41:00.000-08:002011-02-22T22:41:14.603-08:00ಕೋರ್ಟಿನಲ್ಲಿ ಕಾಫ್ಕನ ನೆನಪುಕೋರ್ಟಿನಲ್ಲಿ ಕಾಫ್ಕನ ನೆನಪು<br />
<br />
ಇತ್ತೀಚಿನ ದಿನಗಳಲ್ಲಿ ಮಂಗಳೂರಿನತ್ತ ನನ್ನ ಪ್ರಯಾಣ ಹೆಚ್ಚಾಗುತ್ತಿದೆ. ಈ ಬಾರಿ ಮತ್ತೊಮ್ಮೆ ಅಲ್ಲಿಗೆ ಮನಸ್ಸಿಲ್ಲದಿದ್ದರೂ ಹೋಗಬೇಕಾಯಿತು. ನಕಲಿ ಅಂಕಪಟ್ಟಿ ತಯಾರಕರನ್ನು ೨೦೦೬ರಲ್ಲಿ ಪೋಲಿಸರು ಹಿಡಿದಿದ್ದರು. ಆ ನಕಲಿ ಅಂಕಪಟ್ಟಿಯಲ್ಲಿ ಮಂಗಳೂರಿನ ಎಲ್ಲಾ ಕಾಲೇಜಿನ ಮುದ್ರೆಗಳೂ ಇದ್ದವು. ಆ ಕುರಿತು ತನಿಖೆಗಾಗಿ ನನ್ನ ಕಾಲೇಜಿಗೆ ಬಂದಾಗ ನಾನು ಅದು ಹೇಗೆ ನಕಲಿ ಎಂದು ವಿವರಿಸಿ ಲಿಖಿತ ಹೇಳಿಕೆ ಕೊಟ್ಟಿದ್ದೆ. ಐದು ವರುಷಗಳ ನಂತರ ಆರೋಪಿಗಳೂ, ಹೇಳಿಕೆ ಕೊಟ್ಟ ನಾವು ಕೋರ್ಟಿಗೆ ಹಾಜರಾಗಬೇಕಾಗಿದೆ. ಈ ಸಂದರ್ಭದಲ್ಲಿ ಕಾಪ್ಕನ ನೆನಪು ತುಂಬಾ ಆಗುತ್ತದೆ. ಅವನ ಕಾದಂಬರಿಯ ನಾಯಕನೊಬ್ಬನಿಗೆ ಬೆಳಿಗ್ಯೆ ಅಕಾರಣವಾಗಿ ಪೋಲಿಸ್ ಸ್ಟೇಶನ್ ಗೆ ಕರೆಯಿಸಿ ಅಲ್ಲಿಯೇ ಕುಳ್ಳಿರಿಸುತ್ತಾರೆ. ಅವನ ಅಪರಾಧವನ್ನಾಗಲೀ, ಕರೆಯಿಸಿದ ಕಾರಣವನ್ನಾಗಲೀ ತಿಳಿಸುವುದೇ ಇಲ್ಲ. ಸಂಜೆಯವರೆಗೆ ಆತ ನರಕ ಯಾತನೆಯನ್ನು ಅನುಭವಿಸುತ್ತಾನೆ. ಅದನ್ನು ಓದುತ್ತಿರುವಾಗ ಕಥಾನಾಯಕನ ತೊಳಲಾಟ ಅರ್ಥವಾಗಿರಲಿಲ್ಲ. ಈಗ ಅನುಭವಕ್ಕೆ ಬಂದಿತು. ಹತ್ತೂವರೆಗೆ ಹಾಜರಾಗಬೇಕು-ಸರ್ಕಾರಿ ವಕೀಲರ ಬಳಿ. ಹನ್ನೊಂದು ಘಂಟೆಗೆ ಕೋರ್ಟ್ ಪ್ರಾರಂಭವಾದಾಗ ನಮ್ಮ ಹೆಸರನ್ನು ಕರೆದಾಗ ಹಾಜರಾತಿ ನೀಡಬೇಕು. ಮತ್ತೆ ಕಾಯಬೇಕು, ಕಾಯಬೇಕು. ಮೇರಾ ನಂಬರ್ ಕಬ್ ಆಯೇಗಾರೇ ಎಂದು. ಅದು ಘಂಟೆ ಒಂದೂ ಆಗಬಹುದು, ಎರಡೂ ಆಗಬಹುದು. ಈ ಬಾರಿ ಅದು ಹಾಗೆಯೇ ಆಯಿತು. ಈ ಬಾರಿಯೂ ಹೇಳಿಕೆ ನೀಡಲಾಗಲಿಲ್ಲ. ಮತ್ತೊಮ್ಮೆ ಕರೆಯಿಸಿಕೊಳ್ಳುತ್ತಾರಂತೆ. ಮೇಯಲ್ಲಿ. ಪ್ರಾಮಾಣಿಕವಾಗಿ ಹೇಳಿಕೆ ಕೊಟ್ಟು ಈಗ ಇದು ನನಗೆ ಬೇಕಾಗಿತ್ತಾ ಎಂದು ಪರಿತಪಿಸುತ್ತಿದ್ದೇನೆ. <br />
<br />
ಕಳೆದ ಶನಿವಾರ ತುಂಬಾ ದಿನಗಳಿಂದ ಕಾಯುತ್ತಿದ್ದ ದಿನ ಬಂದಿತು. ತುಂಗಾ ಮಹೋತ್ಸವ. ತೀರ್ಥಹಳ್ಳಿಯವನಾದ ಶ್ರೀ ಉದಯಕುಮಾರ್ ಶೆಟ್ಟಿ ಈಗ ಬೆಂಗಳೂರಿನಲ್ಲಿ ಕಲಾತೀರ ಎಂಬ ನಾಟ್ಯಾಲಯವನ್ನು ಸ್ಥಾಪಿಸಿ ನೃತ್ಯವನ್ನು ಕಲಿಸಿಕೊಡುತ್ತಿದ್ದಾನೆ. ದಿ.ಪ್ರೊತಿಮಾ ಬೇಡಿಯ ಶಿಷ್ಯನೀತ. ಊರಿನ ಬಗ್ಗೆ ಅತಿಯಾದ ಮೋಹ. ಹಾಗಾಗಿ ಎರಡು ವರ್ಷಕ್ಕೊಮ್ಮೆ ಊರಿನ ನದೀತೀರದಲ್ಲಿ ರಾತ್ರಿ ೭ರಿಂದ ಬೆಳಿಗ್ಯೆ ಆರರವರೆಗೆ ಸಂಗೀತ ನೃತ್ಯ ಕಾರ್ಯಕ್ರಮವನ್ನು ತುಂಗಾ ಮಹೋತ್ಸವವೆಂಬ ಹೆಸರಿನಲ್ಲಿ ನಡೆಸುತ್ತಿದ್ದಾನೆ. ಈ ಬಾರಿ ತುಂಗಾ ಕಾಲೇಜಿನಲ್ಲಿ ಒಂದು ವಿಚಾರ ಗೋಷ್ಟಿಯನ್ನೂ ಏರ್ಪಡಿಸಿದ್ದ. ಚರ್ಮವಾದ್ಯಗಳು ಮತ್ತು ಈಗ ಪ್ಲಾಸ್ಟಿಕ್ ವಾದ್ಯಗಳು, ನೃತ್ಯದ ಸಂಪ್ರದಾಯಿಕ ಶೈಲಿ ಮೊದಲಾದ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಇತ್ತು. ಶ್ರೀ. ಎಸ್.ಎಸ್.ಚಂದ್ರಶೇಖರ್, ಪ್ರೊ.ಕೆ.ರಾಮಮೂರ್ತಿರಾವ್, ಶ್ರೀಮತಿ ಪೂರ್ಣಿಮಾ ಗುರುರಾಜ್, ಮೊದಲಾದವರು ಭಾಗವಹಿಸಿದ್ದರು. ಶ್ರೀ ಸುಬ್ರಾಯ ಚೊಕ್ಕಾಡಿಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯೂ ಇತ್ತು. ಸಮಾರಂಭ ಗಂಟೆಯಷ್ಟು ತಡವಾಗಿ ಪ್ರಾರಂಭವಾದುದ್ದರಿಂದ ರೈಲು ಹಳಿತಪ್ಪಿದಂತಾಗಿತ್ತು. ಕಾರ್ಯಕ್ರಮಗಳಿಗೆ ವಿರಾಮ ನೀಡದೇ ಮೂರರವರೆಗೆ ನಡೆಸಿದರು. ಸಭೆಯಲ್ಲಿ ಜನರೂ ಕಡಮೆಯಿದ್ದರು. ಕಾಲೇಜಿನ ಮಕ್ಕಳೂ ರಜೆಯನ್ನು ಚೆನ್ನಾಗಿಯೇ ಅನುಭವಿಸಿದರು. ಈ ಹಿರಿಯರ ಮಾತುಗಳನ್ನು ಕೇಳುವ ಅವಕಾಶವನ್ನು ಕಳೆದುಕೊಂಡರು. <br />
<br />
ಸಂಜೆಯೆನ್ನುವಾಗ ನಮ್ಮ ರಥಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಬೀದಿಯೆಲ್ಲಾ ಗಲಗಲ. ಜನರ ಓಡಾಟ, ಸಂಭ್ರಮ. ರಾತ್ರಿಯಾಗುತ್ತಲೇ ಎಲ್ಲರ ಗಮನ ನದೀತೀರದತ್ತ. ಯಾರ ಮುಖ ನೋಡಿದರೂ ಗುರುತು ಸಿಗುತ್ತಿರಲಿಲ್ಲ. ರಾತ್ರಿಯ ಚಳಿಯನ್ನು ಎದುರಿಸಲು ಮೈತುಂಬಾ ಬಟ್ಟೆಗಳು, ಮಂಕಿಕ್ಯಾಪ್, ಇತ್ಯಾದಿ. ಮಂಗಳೂರಿನಿಂದ ನನ್ನ ಗೆಳೆಯರಾದ ಮಹಾಲಿಂಗಭಟ್ಟರು, ಅವರ ಗೆಳೆಯರಾದ ಶ್ರೀ ರೋಷನ್, ಮಹಾಲಿಂಗರ ಮಗ ಚಕಿತ ಬಂದಿದ್ದರು. ಕಳಸದಿಂದ ನನ್ನ ಶಿಷ್ಯ ಅರವಿಂದ ಬಂದಿದ್ದ. . ಮಾತುಕತೆಗೆ ಸುಬ್ರಾಯ ಚೊಕ್ಕಾಡಿಯವರೂ ಸಿಕ್ಕಿದ್ದರು, ಮನೆಯಲ್ಲಿ ಒಂದಿಷ್ಟು ಮಾತಾದ ನಂತರ, ಹೋಟೆಲಿನಲ್ಲಿ ಜತೆಯಲ್ಲಿ ಊಟ. ಒಟ್ಟಾಗಿ ಊಟಮಾಡಿದ ನಂತರ ರಾತ್ರಿಯ ಚಳಿಯನ್ನು ಎದುರಿಸಲು ಸರ್ವಸನ್ನದ್ಧರಾಗಿ ನದೀತೀರದತ್ತ ನಡೆದವು. ಬೀದಿತುಂಬಾ ಜನ. ಮರಳುಗುಡ್ಡೆಯಲ್ಲಿ ಕಿಕ್ಕಿರಿದ ಜನ. ಜಾತ್ರೆಯ ಹಾಗೆ ಅಲ್ಲಲ್ಲಿ ತಿಂಡಿತಿನಿಸುಗಳ ಅಂಗಡಿಗಳು. ತಂಪಾಗಿ ಬಹಳ ಸಂಭ್ರಮದಿಂದ ನದಿ ಹರಿಯುತ್ತಿತ್ತು ತನ್ನ ಪಾಡಿಗೆ. ಬಣ್ಣದ ಕಾಗದದ ದೋಣಿಗಳು ನದಿಯ ಮೇಲೆ ತೇಲುತ್ತಿದ್ದವು. ದಡದ ಎರಡೂ ಕಡೆಗಳಲ್ಲಿರುವ ಮರಗಿಡಗಳಿಗೆಲ್ಲಾ ಸೀರಿಯಲ್ ಲೈಟಿನ ಅಲಂಕಾರ. ಸೇತುವೆಯ ಕಮಾನುಗಳ ಮೇಲೂ ಅಲಂಕಾರ. ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾದಾಗ ಜನರ ಮಾತುಕತೆಯಿಂದಾಗಿ ಸಂಗೀತ ಕೇಳಲು ಕಷ್ಟವಾಗುತ್ತಿತ್ತು. ನಾವು ನಿಧಾನವಾಗಿ ರಂಗಸ್ಠಳದ ಹಿಂದೆ ಇರುವ ಬಂಡೆಯನ್ನು ಆಶ್ರಯಿಸಿದೆವು. ಅಲ್ಲಿಯೇ ಹಾಕಿದ್ದ ದೊಡ್ದ ಎಲ್ಸಿಡಿ ಸ್ಕ್ರೀನ್ ನಿಂದ ಎಲ್ಲವೂ ನೋಡಲು ಸಾಧ್ಯವಾಗುತ್ತಿತ್ತು. <br />
ಕಲಾತೀರದ ವಿದ್ಯಾರ್ಥಿಗಳಿಂದ ಓಡಿಸಿ ನೃತ್ಯದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ವೆಂಕಟೇಶ್ ಕುಮಾರ್ ರಿಂದ ಸುಗಮ ಸಂಗೀತ. ಹೊಸತೇನೂ ಇರಲಿಲ್ಲ. ಕೇಳಿದ ಹಾಡುಗಳೇ. ಪ್ರತಿಯೊಂದು ತಂಡಕ್ಕೂ ಸುಮಾರು ಅರ್ಧಗಂಟೆಯ ಕಾಲಾವಕಾಶ ದೊರೆಯುತ್ತಿತ್ತು. ಶ್ರೀಲಂಕಾ, ನೇಪಾಳದ ನೃತ್ಯ ಕಾರ್ಯಕ್ರಮವಿತ್ತು. ಇದರಲ್ಲೂ ವಿಶೇಷತೆ ಇರಲಿಲ್ಲ. ಅವರವರ ಭಾಷೆಗಳಲ್ಲಿ ಹಾಡುಗಳಿದ್ದವು. ಹೊರತು ನೃತ್ಯದ ಗತಿ ನಮ್ಮ ಹಾಗೆ. ನಮ್ಮ ಹುಡುಗರೂ ನೃತ್ಯ ಮಾಡಬಹುದು. ಮಂಗಳೂರಿನ ಉಲ್ಲಾಳ ಮೋಹನ್ ರವರ ತಂಡದವರ ಸಪ್ತ ಮಾತೃಕೆ ನೃತ್ಯ ರೂಪಕ ಚೆನ್ನಾಗಿಯೇ ಮೂಡಿಬಂದಿತು. ನಿಜವಾದ ರಂಗು ಏರಿದ್ದು ಗಂಟೆ ಒಂದರ ನಂತರ. ಆ ವೇಳೆಯಲ್ಲಿ ಚಳಿಯನ್ನು ಎದುರಿಸಲಾರದೇ ಊರಿನ ಜನ ಮನೆಗೆ ತೆರಳಿದ್ದ ಕಾರಣ ಮುಂದಿನ ಕುರ್ಚಿಗಳೆಲ್ಲಾ ಖಾಲಿ ಖಾಲಿ. ಮರಗಳ ಹತ್ತಿರ ಹೋದರೆ ಮಳೆಯ ಹಾಗೆ ತಲೆಯ ಮೇಲೆ ಬೀಳುವ ಇಬ್ಬನಿಯ ಹನಿಗಳು. ಕುರ್ಚಿಯ ಮೇಲೆ ನೀರು ಚೆಲ್ಲಿದಂತೆ ಇದ್ದ ಇಬ್ಬನಿಯ ನೀರು, ತಂಪಾಗಿ ಬೀಸುವ ಗಾಳಿ . ನಮಗೂ ಆ ಚಳಿಯನ್ನು ಎದುರಿಸಲು ಕಷ್ಟವಾಗುತ್ತಿತ್ತು. ಒಟ್ಟು ನಾಲ್ಕು ಬಾರಿ ಬಿಸಿ ಚಹಾ ಕುಡಿದು ಹಠಹಿಡಿದು ಕುಳಿತುಕೊಂಡಿದ್ದೆವು. ಬೆಂಗಳೂರಿನ ಮುದ್ದುಮೋಹನರ ಹಿಂದೂಸ್ತಾನಿ ಸಂಗೀತ, ಉನ್ನಿಕೃಷ್ಣನ್ ರ ಸಂಗೀತ ಬಹಳವಾಗಿ ಮನಸ್ಸಿಗೆ ಖುಶಿಯನ್ನು ತಂದುಕೊಟ್ಟಿತು. ಉನ್ನಿ ಹಾಡಲು ಕುಳಿತಾಗ ಗಂಟೆ ಮೂರು, ಚಳಿಯೂ ಜೋರು, ಮೂರು ಹಾಡನ್ನು ಹಾಡಿದ ಬಳಿಕ, ಮಪ್ಲರನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದರೂ ಸಹ, ನಾಲ್ಕನೆಯ ಹಾಡು ಹೇಳುವಾಗ, ಚಳಿಗಾಳಿಯನ್ನು ಕುಡಿದ ಉನ್ನಿಗೆ ಹಾಡು ಹೇಳಲು ಕಷ್ಟವಾಯಿತು. ಹೇಗೋ ಮುಗಿಸಿದರು. ಚೆನ್ನೈನ ಉಮಾಶಂಕರರ ಘಟವಾದ್ಯ ಮೇಳ ಮಾತ್ರ ಎಲ್ಲರನ್ನು ಬಡಿದೆಬ್ಬಿಸಿತು. ಈ ಮನುಷ್ಯನಿಗೆ ಮಾತ್ರ ಚಳಿ ತಾಗಲೇ ಇಲ್ಲ. ಘಟವನ್ನು ಎತ್ತಿ ಹಾರಿಸಿ, ಕುಟ್ಟಿ ಕುಟ್ಟಿ ಹೊಡೆಯುತ್ತಿದ್ದ ಈತ ಮುಂದಿನ ಸಾಲಿನ ಹುಡುಗರಿಗೆ ಕುಣಿಯುವಂತೆ ಮಾಡಿಬಿಟ್ಟ. ಒರಿಸ್ಸಾದ ಗೋಟ್ಟೀಪೋವಾ ನೃತ್ಯವೂ ಹೀಗೆ ಮನಸ್ಸನ್ನು ರಂಜಿಸುತ್ತಿತ್ತು. ಈ ನೃತ್ಯದ ವಿಶೇಷತೆ ಎಂದರೆ ನೃತ್ಯಮಾಡುವವರೆಲ್ಲರೂ ಹುಡುಗರೇ. ರಾತ್ರೆ ನಾಲ್ಕರವೇಳೆ ಕೂಚುಪುಡಿ ಯಕ್ಷಗಾನ ಪ್ರಾರಂಭವಾಯಿತು. ಭಾಷೆ ತೆಲಗುವಾದದ್ದರಿಂದ ಅರ್ಧ ಅರ್ಥವಾಗುತ್ತಿತ್ತು. ಸುಮ್ಮನೇ ನೃತ್ಯವನ್ನು ನೋಡುತ್ತಾ ಕುಳಿತೆವು. ಕೊನೆಯದಾಗಿ ಬೆಂಗಳೂರಿನ ಕೃಪಾಫಡ್ಕೆಯವರಿಂದ ವಂದೇ ಮಾತರಂ ರೂಪಕ. ಅದು ಮುಗಿಯುವಾಗ ಬೆಳಿಗ್ಯೆ ಆರೂ ಹತ್ತು. ನಿಧಾನವಾಗಿ ಬೆಳಕು ಮೂಡಲು ಪ್ರಾರಂಭವಾಗಿತು. ಕೊನೆಯ ಚಹಾವನ್ನು ಕುಡಿದು ನಿಧಾನವಾಗಿ ಮನೆಯತ್ತ ಹೊರಟೆವು. ನಾನು ಮತ್ತು ಶಿಷ್ಯ ಅರವಿಂದ ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ನಮ್ಮ ಮಹಾಲಿಂಗ ಮತ್ತು ಚಕಿತ ಬಂಡೆಯಮೇಲೆ ಒಂದುಗಂಟೆ ಮಲಗಿಕೊಂಡಿದ್ದರು. ಆದರೂ ಆಯಾಸವಿರಲಿಲ್ಲ.<br />
<br />
ಊರಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದು ಬಹಳ ವಿರಳ. ಆದ್ದರಿಂದ ಊರಿನ ಅಂಗಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣವಾಗಿ ದಕ್ಕಿಸಿಕೊಳ್ಳಬೇಕು ಎಂಬ ಹಟವಿದೆ ನನಗೆ. ಮೊನ್ನೆ ದಿನಾಂಕ ೧೪ರಂದು ಮಾರಿಗುಡಿಯ ಅಂಗಳದಲ್ಲಿ ಗದಾಯುದ್ಧವೆಂಬ ಯಕ್ಷಗಾನ ಪ್ರಸಂಗವಿತ್ತು. ಸಂಜೆ ಏಳಕ್ಕೆ ಎಂದು ಘೋಷಿಸಿದ್ದರೂ ಕೂಡ ಊರಿನ ಸಂಪ್ರದಾಯದಂತೆ ಒಂದು ಗಂಟೆ ಇಪ್ಪತ್ತು ನಿಮಿಷದಷ್ಟೇ ತಡವಾಗಿ ಪ್ರಾರಂಭವಾಯಿತು. ನಾವು ಶಿಸ್ತಾಗಿ ಏಳು ಗಂಟೆಗೆ ಸಭೆಯಲ್ಲಿ ಕುಳಿತಿದ್ದೆವು. ಯಕ್ಷಗಾನವೇನೊ ಚೆಂದವಾಗಿ ಬಂದಿತು. ಆದರೆ ಹೆಚ್ಚುಹೊತ್ತು ಕುಳಿತುಕೊಳ್ಳಲಾಗಲಿಲ್ಲ. ಇಂತಹದೇ ಅನುಭವ ಮೊನ್ನೆ ತಾ.೧೯ರಂದು ಆಯಿತು. ಉತ್ತರ ಕರ್ನಾಟಕದ ಲೇಖಕಿಯರ ಮತ್ತು ವಾಚಕಿಯರ ಸಂಘದವರು ತಮ್ಮ ಸಂಘದ ರಜತೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಅದರಂತೆ ಅವರು ಅಂದು ಕುಪ್ಪಳ್ಳಿಗೆ ಬಂದಿದ್ದರು. ಆದಿನ ಮಧ್ಯಾಹ್ನ ಕಾವ್ಯದ ಕುರಿತು ಚರ್ಚೆಯನ್ನು ಇಟ್ಟುಕೊಂಡಿದ್ದರು. ಶಿವಮೊಗ್ಗದಿಂದ ತೀ.ನಂ.ಶಂಕರನಾರಾಯಣರು ಮತ್ತು ಕುಮಾರ ಚಲ್ಯರೂ ಹನ್ನೊಂದು ಘಂಟೆಗೆ ಕುಪ್ಪಳಿಗೆ ಬಂದಿದ್ದರು. ನನಗೆ ಪ್ರೊ.ಎಲ್.ಸಿ.ಸುಮಿತ್ರಾ ಒತ್ತಾಯಪೂರ್ವಕ ಆಹ್ವಾನ ನೀಡಿದ್ದರಿಂದ ನಾನೂ ಅಲ್ಲಿಗೆ ಎರಡು ಗಂಟೆಗೆ ಹೋಗಿದ್ದೆ. ಆದರೆ ಧಾರವಾಡದಿಂದ ಹೊರಟ ಬಸ್ಸು ಮಾತ್ರ ಬಂದೇ ಇರಲಿಲ್ಲ. ಅವರಿಗೆ ಯಾರಿಗೆ ಫೋನ್ ಮಾಡಿದ್ದರೂ ಎಲ್ಲರೂ ಔಟ್ ಆಫ್ ರೀಚ್ ಎಂದೇ ಸಂದೇಶ ಬರುತ್ತಿತ್ತು. ಕೊನೆಗೆ ಅವರು ಬಂದಾಗ ಘಂಟೆ ನಾಲ್ಕು. ಅಂತೂ ಇಂತೂ ನಾಲ್ಕೂವರೆಗೆ ಕಾರ್ಯಕ್ರಮ ಪ್ರಾರಂಭವಾಯಿತು.ಪಂಚಾಕ್ಷರಿ ಹಿರೇಮಠ, ಮಾಲತಿ ಪಟ್ಟಣ ಶೆಟ್ಟಿ, ಸುನಂದ ಕಡಮೆ, ಗೀತಾ ನಾಗಭೂಷಣ, ಸುಮಿತ್ರಾ ಹಲವಾಯಿ ಮೊದಲಾದವರು ಬಂದಿದ್ದರು. ಯಾರ ಮಾತೂ ಕೇಳಲು ಸಾಧ್ಯವಾಗಲಿಲ್ಲ. ವಿಶೇಷ ಆಹ್ವಾನಿತರಾಗಿ ಬಂದಿದ್ದ ಪ್ರೊ.ತೀನಂಶಂಕರನಾರಯಣರು ಪ್ರಾರಂಭದಲ್ಲಿ ಮಾಡಿದ ಉಪನ್ಯಾಸ ಬಹಳ ದೀರ್ಘವಾಯಿತು. ಪಂಪನಿಂದ ಕುವೆಂಪುವರೆಗಿನ ಕಾವ್ಯದ ಕುರಿತು ಮಾತನಾಡುತ್ತಿದ್ದಂತೆ ಘಂಟೆ ಆರಾಗಿತ್ತು. ನಾನು ಅಲ್ಲಿಂದ ಹೊರಟೆ. ಮಾರನೇಯ ದಿನ ಕವಿಗೋಷ್ಠಿ ಇದ್ದರೂ ಹೋಗಲಿಲ್ಲ. <br />
<br />
ಮತ್ತೆ ಊರು ತಣ್ಣಗಾಗಿದೆ. ಎಡೆಬಿಡದೆ ನಡೆದ ಕಾರ್ಯಕ್ರಮಗಳಿಗೆ ಬಿಡವು ಸಿಕ್ಕಿದೆ. ಮತ್ತೆ ಯಾವ ಹೊಸ ಕಾರ್ಯಕ್ರಮನಡೆಯಬಹುದು ಎಂದು ಕಾಯುತ್ತಾ ಕುಳಿತಿದ್ದೇನೆ. ಮೈ ಕೊರೆಯುತ್ತಿದ್ದ ಚಳಿ ಶಿವರಾತ್ರಿ ಹತ್ತಿರ ಬರುತ್ತಿದ್ದಂತೆ ಕಡಮೆಯಾಗುತ್ತಿದೆ ಅಂದರೆ ತಡೆದುಕೊಳ್ಳಬಹುದಾದ ಚಳಿ ಇದೆ. <br />
<br />
ವಾರದ ಓದು:೧. ರಾಗ ವೈಭವ:ವಾಸುದೇವ ಮೂರ್ತಿ, ಅನು: ಲಲಿತಾ ಶಾಸ್ತ್ರಿ ಮತ್ತು ಸಾವಿತ್ರಿ ಭಾಸ್ಕರ್ (೧೦೮). ೨ ಕಿಲಿಮಂಜರೋ-ತಾಜಾ ತಾನ್ಜಾನಿಯಾ-ಪ್ರಶಾಂತ್ ಬೀಚಿ(೮೦), ೩. ಒಂದೊಂದು ಮುಖದ ಒಂದೊಂದು ಮುಖ- ನಾದಾ (೧೦೯), ೪. ತಂಪು ನೆಳಲು-ಛಾಯಾಪತಿ (೧೬೯).nagaraja raohttp://www.blogger.com/profile/09150767551244015450noreply@blogger.com1tag:blogger.com,1999:blog-380114554757439625.post-69584318141877620542011-02-07T17:36:00.000-08:002011-02-07T17:36:17.213-08:00ಸಂಗೀತ-ಸಾಹಿತ್ಯದ ಗುಂಗಿನಲ್ಲಿ.<b><b>ಸಂಗೀತ-ಸಾಹಿತ್ಯದ ಗುಂಗಿನಲ್ಲಿ. <br />
<br />
ಕಳೆದ ಶನಿ ಮತ್ತು ಭಾನುವಾರ ನನ್ನೂರಿನ ಸುಮುಖ ಸಂಗೀತ ಶಾಲೆಯವರ ವಾರ್ಷಿಕೋತ್ಸವ ವೆಂಕಟರಮಣ ದೇವಾಲಯದ ಅಂಗಳದಲ್ಲಿ ಮತ್ತು ಶ್ರೀ ರಾಮಮಂದಿರದ ಹತ್ತಿಲಲ್ಲಿ ನಡೆಯಿತು. ವರ್ಷಕ್ಕೊಮ್ಮೆ ತನ್ನೆಲ್ಲಾ ವಿದ್ಯಾರ್ಥಿಗಳಿಗೆ ಹಾಡಲು ಅವಕಾಶ ಮಾಡಿಕೊಡುವುದಲ್ಲದೆ ಕೆಲವು ನುರಿತ ಗಾಯಕರನ್ನು ಕರೆಯಿಸಿ ಅವರಿಂದ ಸಂಗೀತ ಕಚೇರಿ ಮಾಡಿಸುವುದು ಸಂಪ್ರದಾಯ. ಹೀಗಾಗಿ ಶನಿವಾರ ಸಂಜೆ ಪುದಿಕೋಟೆ ರಾಮನಾಥನ್ ರವರ ವಯೋಲಿನ್ ಕಚೇರಿ ಇತ್ತು. ಬಹಳ ದಿನಗಳನಂತರ ಒಂದು ಅದ್ಭುತವಾದ ಕಚೇರಿಯನ್ನು ಕೇಳಿದಂತಾಯಿತು. ಮಾರನೆಯದಿನ ಕೊಪ್ಪದ ಒಬ್ಬಳು ಸಣ್ಣ ಹುಡುಗಿ -ಸ್ವಾದಿನಿ-ಬಹಳ ಚೆನ್ನಾಗಿ ಹಾಡಿದಳು. ಪ್ರಾಯದಲ್ಲಿ ಬಹಳ ಸಣ್ಣವಳು. ಲಂಗ ಹಾಕಿಕೊಂಡಿದ್ದಳು. ಆದರೆ ನುರಿತ ಗಾಯಕಿಯಂತೆ ಬಹಳ ಚೆನ್ನಾಗಿಯೇ ಹಾಡಿದಳು. ಇವೆರೆಡೂ ಸಂಗೀತ ಕಚೇರಿಗಳಿಂದ ಮನಸ್ಸಿಗೆ ಬಹಳ ಸಂತೋಷವಾಯಿತು. <br />
ನನ್ನೂರಿನಲ್ಲಿ ಮಂಗಳವಾದ್ಯ ನುಡಿಸುವವರ ಸಂಘವೆಂಬ ಸಂಘವಿದೆ. ಇವರೆಲ್ಲರೂ ಕೂದಲು ಕತ್ತರಿಸುವ ವೃತ್ತಿಯನ್ನು ಮಾಡುವವರು. ಆದರೆ ನಾಗಸ್ವರ ನುಡಿಸುವುದರಲ್ಲಿ ತುಂಬಾ ಪರಿಣತಿಯನ್ನು ಪಡೆದಿದ್ದಾರೆ. ಇವತ್ತಿನ ದಿನಗಳಲ್ಲಿ ಶುದ್ಧ ನಾಗಸ್ವರವನ್ನು ಕೇಳುವ ಮತ್ತು ನುಡಿಸುವವರು ಬಹಳ ಕಡಮೆಯಾಗಿದ್ದಾರೆ . ವರ್ಷದಲ್ಲಿ ಒಂದು ದಿನ ಪುರಂದರ ಮತ್ತು ತ್ಯಾಗಾರಾಜರ ಸ್ಮರಣೆಯೆಂಬ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸುತ್ತಾರೆ. ಶುಭ್ರವಾದ ಬಿಳಿ ಬಟ್ಟೆಯನ್ನು ಹಾಕಿಕೊಂಡು ಸಂಭ್ರಮದಿಂದ ನಡೆಯುವ ಅವರನ್ನು ನೋಡುವುದೇ ಒಂದು ಸೊಗಸು. ಇವರೆಲ್ಲರೂ ನಮಗೆ ಚಿಕ್ಕಂದಿನಿಂದಲೇ ಪರಿಚಿತರು. ಪ್ರಾರಂಭದಲ್ಲಿ ಶುದ್ಧ ನಾಗಸ್ವರ ಕಚೇರಿ. ಸ್ಠಳೀಯ ಕಲಾವಿದರಿಂದ. ಹಿರಿಯರಿಂದ ಕಲಿತದ್ದನ್ನು ಕಿರಿಯರು ಪ್ರಸ್ತುತ ಪಡಿಸುತ್ತಾರೆ. ಒಂದು ರೀತಿಯ ಅರಂಗೇಟ್ರಂ ಇದ್ದಹಾಗೆ. ಪುರಂದರದಾಸರ ಮತ್ತು ತ್ಯ್ರಾಗರಾಜರ ಕೃತಿಯನ್ನು ಪ್ರಸ್ತುತ ಪಡಿಸುತ್ತಾರೆ. ಅನಂತರ ಅರ್ಧಗಂಟೆಯ ಸಭಾಕಾರ್ಯಕ್ರಮ. ತಮ್ಮವರೇ ಆದರೆ ಪರಸ್ಠಳ ದಲ್ಲಿರುವ ಒಬ್ಬ ಕಲಾವಿದನಿಗೆ ಅವರು ಗೌರವಿಸುತ್ತಾರೆ. ಮಾತುಗಳಿರುವುದಿಲ್ಲ. ಕೇವಲ ಗೌರವ ಅರ್ಪಣೆ. ಹಾರ, ಹಣ್ಣು, ಶಾಲು. ಬಂದ ಅತಿಥಿಗಳು ಮಾತ್ರ ಮಾತನಾಡುತ್ತಾರೆ. ಈ ಬಾರಿ ಸಾಲಿಗ್ರಾಮದ ಒಬ್ಬರನ್ನು ಗೌರವಿಸಿದರು. ಊರಿನ ಸಂಗೀತ ಶಾಲೆಯ ಶಿಕ್ಷಕರಾದ ಶ್ರೀ ಚಿಂತಾಮಣಿ ನಾಗರಾಜ್ ಅರ್ಧಗಂಟೆ ಕರ್ನಾಟಕ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಸನ್ಮಾನಿತರಾದವರಿಂದ ಸಂಗೀತ ಕಚೇರಿ. ಅವರು ಬಹಳ ಚೆನ್ನಾಗಿ ಸಾಕ್ಸೋಫೋನ್ ನ್ನು ನುಡಿಸಿದರಾದರೂ ಅಸಾಧ್ಯವಾದ ಚಳಿಯನ್ನು ತಡೆಯಲಾರದೇ ಮನೆಯಲ್ಲಿಯೇ ಕುಳಿತು ಕೇಳಬೇಕಾಯಿತು. ರಾಮೇಶ್ವರ ದೇವಸ್ಥಾನದ ರಥದಕೊಟ್ಟಿಗೆಯ ಅಂಗಳದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇದು ಮೊನ್ನೆ ಮಂಗಳವಾರದ ದಿನ ನಡೆಯಿತು. <br />
<br />
ನಿನ್ನೆ ಭಾನುವಾರ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರು ಊರಿಗೆ ಬಂದಿದ್ದರು ಮತ್ತು ಅವರೊಡನೆ ಒಂದು ಸಂವಾದ ಕಾರ್ಯಕ್ರಮ ಗಾಯತ್ರೀ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಸಿಕ್ಕ ಪ್ರಚಾರ ಕಡಮೆ. ಆದರೂ ಅಭೂತಪೂರ್ವವಾದ ಸ್ಪಂದನ ಕಾರ್ಯಕ್ರಮಕ್ಕೆ ಸಿಕ್ಕಿತು. ಅನುಮಾನದಿಂದಲೇ ಇನ್ನೂರಷ್ಟು ಹಾಕಿದ್ದ ಕುರ್ಚಿಗಳು ಸಾಲದೇ, ಅನಂತರ ಪೂರ್ಣ ಪ್ರಮಾಣದಲ್ಲಿ ಮತ್ತೆ ಕುರ್ಚಿಯನ್ನು ಹಾಕಬೇಕಾಯಿತು. ಸುಮಾರು ಆರು ನೂರು ಜನ ಸ್ವಯಂಪ್ರೇರಿತರಾಗಿ ಬಂದಿದ್ದರು. ಬಂದವರಿಗೆಲ್ಲರಿಗೂ, ಪ್ರಶ್ನೆಕೇಳಬಯಸುವವರೆಲ್ಲರಿಗೂ ಕಾಗದಗಳನ್ನು ಹಂಚಿ.ಅವುಗಳನ್ನು ಶಿಸ್ತಾಗಿ ಸಂಗ್ರಹಿಸುತ್ತಿದ್ದರು. ಶಿವಮೊಗ್ಗದ ನಿವೃತ್ತ ಪ್ರಾಚಾರ್ಯರಾದ ಪ್ರೊ.ಓಂಕಾರಪ್ಪನವರು ಪ್ರಸ್ತಾವಿಕ ಭಾಷಣವನ್ನು ಮಾಡಿ ಆದನಂತರ ಸುಮಾರು ಹತ್ತು ನಿಮಿಷ ಭೈರಪ್ಪನವರು ತಾನು ಪ್ರಶ್ನೆಗಳಿಗೆ ಉತ್ತರಿಸಲು ಹಾಕಿಕೊಂಡಿರುವ ನಿಬಂಧನೆಗಳನ್ನು ವಿವರಿಸಿದರು. ಒಂದೊಂದಾಗಿ ಪ್ರಶ್ನೆಗಳನ್ನು ಓದಿ ಉತ್ತರಿಸಲು ಪ್ರಾರಂಭಿಸಿದರು. ರಾಜಕೀಯದ ಪ್ರಶ್ನೆಗಳನ್ನು ಉತ್ತರಿಸಲು ಅವರು ನಿರಾಕರಿಸಿದರು. ಚರ್ಚಾಸ್ಪದವಾಗಬಹುದಾದ ಪ್ರಶ್ನೆಗಳನ್ನೂ ಅವರು ಉತ್ತರಿಸಲಿಲ್ಲ. ಉತ್ತರಗಳು ಸಂಕ್ಷಿಪ್ತವಾಗಿದ್ದವು. ನೇರವಾಗಿದ್ದವು. ಹಿತವಾಗಿದ್ದವು. ಕೇಳುಗರು ಅವರ ಉತ್ತರಗಳಿಗೆ ಸಮ್ಮತಿಸುವಂತೆ ಕರತಾಡನವನ್ನು ಮಾಡುತ್ತಿದ್ದರು. ನಿಶ್ಶಬ್ದವಾಗಿ ಸಭೆ ಸ್ಪಂದಿಸುತ್ತಿತ್ತು. ಒಂದು ಒಳ್ಳೆಯ ಕಾರ್ಯಕ್ರಮವನ್ನು ನೋಡುವ ಮತ್ತು ಕೇಳುವ ಅವಕಾಶ ಹೀಗೆ ಒದಗಿಬಂದಿತು. ಮೊನ್ನೆಮೊನ್ನೆ ನಡೆದ ಸಾಹಿತ್ಯಸಂಮೇಳನದಲ್ಲೂ ಸಂವಾದ ಕಾರ್ಯಕ್ರಮವಿತ್ತು. ಬೇಡವೆಂದರೂ ಹೋಲಿಕೆ ಮನಸ್ಸಿನಲ್ಲಿ ಇಣುಕಿತು. ಅಲ್ಲಿ ಪ್ರಶ್ನೆ ಹತ್ತು ನಿಮಿಷದದ್ದಾದರೆ, ಉತ್ತರ ಯಶೋದೆಗೆ ಕೃಷ್ಣ ಬಾಯಲ್ಲಿ ಬ್ರಹ್ಮಾಂಡ ತೋರಿಸಿದ ಹಾಗೆ ಉತ್ತರ ಮೂವತ್ತು ನಿಮಿಷದ್ದಾಗಿ ನಾವೆಲ್ಲಾ ದಿಗ್ಭ್ರಮೆಗೆ ಒಳಗಾಗಿದ್ದೆವು. ಇಲ್ಲಿ ಕೃತಿ ಮತ್ತು ಕೃತಿಗಳ ಕುರಿತಾಗಿದ್ದರೆ, ಅಲ್ಲಿ ಬಯಲೇ ಮಿತಿಯಾಗಿತ್ತು. ಸಾಹಿತ್ಯಿಕ ಕಾರ್ಯಕ್ರಮಗಳು ಬಹಳ ವಿರಳವಾಗಿ ನಡೆಯುವ ನನ್ನೂರಿನಲ್ಲಿ ನಡೆದ ಈ ಕಾರ್ಯಕ್ರಮಗಳು ಮನಸ್ಸಿಗೆ ಒಂದು ಉಲ್ಲಾಸವನ್ನೇ ತಂದುಕೊಟ್ಟಿವೆ. <br />
<br />
ಇನ್ನು ಬರುವ ಶನಿವಾರ ತುಂಗಾ ಮಹೋತ್ಸವ. ನದೀ ತೀರದಲ್ಲಿ . ರಾತ್ರಿ ಏಳರಿಂದ ಮಾರನೆಯ ದಿನ ಬೆಳಿಗ್ಯೆ ಆರರವರೆಗೆ. ಉಣ್ಣಿಕೃಷ್ಣನ್,ಮೊದಲಾದವರು ಬರುತ್ತಿದ್ದಾರೆ. ಚಳಿ ಎಷ್ಟೇ ಇರಲಿ. ಸರ್ವ ಸಿದ್ಧತೆಯಿಂದ ಹೋಗಿ ರಾತ್ರಿ ಹಗಲಾಗಿಸಬೇಕು. ಕಾಯುತ್ತಿದ್ದೇನೆ-ಶನಿವಾರಕ್ಕಾಗಿ. <br />
<br />
ವಾರದ ಓದು-ರೈತನಾಗುವ ಹಾದಿಯಲ್ಲಿ -ಎಸ್.ಎಂ.ಪೆಜತ್ತಾಯ(೧೧೪),Tell me why , mummy-David Thomas.(321) </b> </b>nagaraja raohttp://www.blogger.com/profile/09150767551244015450noreply@blogger.com0tag:blogger.com,1999:blog-380114554757439625.post-9566100214564747692011-02-01T22:15:00.000-08:002011-02-01T22:15:09.831-08:00ಮೀರಿದ ಮಾತುಮೀರಿದ ಮಾತು. <br />
<br />
ಕಳೆದ ವಾರ ಅನಿವಾರ್ಯವಾಗಿ ಮಂಗಳೂರಿನಲ್ಲಿ ಮೂರು ದಿನ ನಿಲ್ಲಬೇಕಾದ ಸಂದರ್ಭ ಒದಗಿಬಂದಿತು. ಈ ಹಿಂದೆ ಹಲವಾರು ಬಾರಿ ಅಲ್ಲಿಗೆ ಹೋಗಿಬಂದಿದ್ದೆನಾದರೂ ವಾಸ್ತವ್ಯ ಹೂಡದೇ ಎಂಟು ತಿಂಗಳ ಮೇಲಾಗಿತ್ತು. ಹೊರಡುವ ಮುನ್ನ ಏನೋ ಉತ್ಸಾಹ. ಬಿಟ್ಟನೆಂದರೂ ಬಿಡದ ವ್ಯಾಮೋಹ. ನನ್ನ ಕಾಲೇಜಿನ ಹಳೆಯ ವಿದ್ಯಾರ್ಥಿಸಂಘದ ಮೂವತ್ತನಾಲ್ಕನೆಯ ವಾರ್ಷಿಕ ದಿನಾಚರಣೆ. ಇಷ್ಟೂ ವರುಷ ಅವರು ಇದನ್ನು ನಡೆಸಿಕೊಂಡು ಬಂದಿದ್ದಾರೆ. ಬೆಳಿಗ್ಯೆ ಸರ್ವಸದಸ್ಯರ ಸಭೆ, ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಮತ್ತು ಆಟೋಟವಿರುತ್ತದೆ. ಸಂಜೆಯ ಸಭೆಯಲ್ಲಿ ಹಳೆಯ ವಿದ್ಯಾರ್ಥಿಯನ್ನೇ ಸಮಾರಂಭದ ಅಧ್ಯಕ್ಷನನ್ನಾಗಿಸಿ ಕಾರ್ಯಕ್ರಮ ನಡೆಸುತ್ತಾರೆ ಮತ್ತು ಕೊನೆಯಲ್ಲಿ ಊಟವಿರುತ್ತದೆ. ಮತ್ತು ನಿವೃತ್ತರಾದ ಅಧ್ಯಾಪಕರಿಗೆ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ. ಈ ಬಾರಿ ನನ್ನ ಕಾಲೇಜಿನ ಮೊತ್ತಮೊದಲ ಬ್ಯಾಚಿನ ವಿದ್ಯಾರ್ಥಿ ಶ್ರೀ ವಸಂತ ಶೆಣೈ ನಗರ್ ಅಧ್ಯಕ್ಷನಾಗಿದ್ದ. ತುಂಬಾ ಚೆನ್ನಾಗಿಯೇ ಮಾತನಾಡಿದ. ಈ ವರುಷ ನಿವೃತ್ತರಾದ ಪ್ರೊ.ಜಿ.ಜಿ.ಪ್ರಭು ಮತ್ತು ದೈಹಿಕ ಶಿಕ್ಷಣ ಅಧ್ಯಾಪಕರಾದ ಶ್ರೀ ದಾಮೋದರ ಗೌಡರನ್ನು ಮತ್ತು ಈ ಬಾರಿ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆದಿನ ಬೆಳಿಗ್ಯೆಯಿಂದ ರಾತ್ರಿಯವರೆಗೆ ಹಳೆಯ ವಿದ್ಯಾರ್ಥಿಗಳ ಜತೆ ಕಾಲ ಕಳೆದದ್ದು ಮನಸ್ಸಿಗೆ ತುಂಬಾ ಸಂತೋಷವನ್ನು ಕೊಟ್ಟಿತು.<br />
<br />
ಉಳಿದ ಎರಡು ದಿನಗಳಲ್ಲಿ ಬ್ಯಾಂಕಿಗೆ, ಎಲ್ಲೈಸಿ ಆಫೀಸಿಗೆ , ಪೋಸ್ಟ ಆಫೀಸಿಗೆ ಓಡುವದರಲ್ಲಿಯೇ ಕಳೆಯಿತು. ಬಾಕಿ ಉಳಿಸಿಕೊಂಡಿದ್ದ ಕೆಲಸಗಳೆಲ್ಲವನ್ನೂ ಮಾಡಿ ಮುಗಿಸಿದೆ. ಅತ್ರಿಗೆ ಭೇಟಿ ನೀಡಿ ಒಂದಿಷ್ಟು ಪುಸ್ತಕಗಳ ಖರೀದಿ ಮಾಡಿದೆ. ಅದೃಷ್ಟವಶಾತ್ ಅಲ್ಲಿ ಗೆಳೆಯ ಶ್ರೀ ನರೇಂದ್ರ ಪೈಯವರೂ ಸಿಕ್ಕಿದ್ದರು. ಅವರೊಡನೆ ಹೆಚ್ಚು ಮಾತನಾಡಲಾಗಲಿಲ್ಲ ಎಂಬ ಕೊರಗು ಕಾಡುತ್ತಿದೆ. ಮಾತನಾಡಲಿಕ್ಕೇನೂ ಇಲ್ಲದಿದ್ದರೂ ಸುಮ್ಮನೇ ಮೌನವಾಗಿ ಕುಳಿತುಕೊಳ್ಳಬಹುದಿತ್ತು ಎಂದು ಈಗ ಅನಿಸುತ್ತಿದೆ. ಪುಸ್ತಕಪ್ರೀತಿಯನ್ನು ಅಗಾಧವಾಗಿ ಬೆಳೆಯಿಸಿಕೊಂಡಿರುವ ಅವರೊಡನೆ ಮಾತನಾಡುವುದು ಎಂದರೆ ತುಂಬಾ ಖುಷಿಯನ್ನು ಕೊಡುತ್ತದೆ. ಇಂತಹವರು ಇಂದಿನ ದಿನದಲ್ಲಿ ತುಂಬಾ ವಿರಳರಾಗಿದ್ದಾರೆ. ಮತ್ತೊಮ್ಮೆ ಅಲ್ಲಿಗೆ ಹೋದಾಗ ಅವರೊಡನೆ ತುಂಬಾ ಮಾತನಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದೇನೆ. ನಿವೃತ್ತನಾದ ಮೇಲೆ ಒಂದು ತರಹದ ಕೀಳರಿಮೆ ಬಂದಿದೆ. ಮತ್ತೊಬ್ಬರ ಮೌನವನ್ನು ಕಲಕುವ ಮನಸ್ಸು ಆಗುತ್ತಿಲ್ಲ. ಅವರು ಏನು ತಿಳಿದುಕೊಳ್ಳುತ್ತಾರೋ ಎಂಬ ಯೋಚನೆ ಬರುತ್ತದೆ. ಹಾಗಾಗಿ ಒಂದು ವಾರದಲ್ಲಿ ನನ್ನ ಪ್ರೀತಿಯ ನೋಕಿಯಾ ೮ರಿಂದ ಮಾಡುವ ಪೋನ್ ಕರೆಗಳು ಮೂರು ಅಥವಾ ನಾಲ್ಕು ಮಾತ್ರ. ನನಗೆ ಬರುವ ಕರೆಗಳು ಅಷ್ಟೇ ಸಂಖ್ಯೆಯದು ಅಥವಾ ಕೆಲವು ವಾರ ಅದೂ ಕಡಮೆ- ಒಂದು, ಎರಡು. ಹಾಗಾಗಿ ಕನಸುಗಳು -ಮತ್ತೊಬ್ಬರ ಜತೆಯಲ್ಲಿ ಕುಳಿತು ಮಾತನಾಡುವ-ಹಾಗೇ ಉಳಿದುಕೊಳ್ಳುತ್ತಿವೆ. <br />
<br />
ಮೂರುದಿನಗಳ ನಂತರ ಊರಿಗೆ ಹೊರಟಾಗ ಉತ್ಸಾಹ. ಉಡುಪಿ ದಾಟಿ ಸೋಮೇಶ್ವರಕ್ಕೆ ಬಂದು ಘಟ್ಟದ ಒಂದೊಂದೇ ತಿರುವುಗಳನ್ನು ಏರುತ್ತಿರುವಾಗ ಊರು ಬಂದಿತು ಎಂಬ ಸಂತೋಷ. ಅಲ್ಲಿರುವಾಗ ಪಡೆದುಕೊಂಡಿರುವ ಸಂತೋಷವೇ ಬೇರೆ. ಇಲ್ಲಿ ನೆಮ್ಮದಿಯಿಂದ, ಗಲಾಟೆಯಿಲ್ಲದ ಈ ಊರಿನಲ್ಲಿ ಪಡೆಯುವ ಸಂತೋಷವೇ ಬೇರೆ. ಇದು ಮಿಗಿಲು. <br />
<br />
ಕಳೆದ ಶುಕ್ರ ಮತ್ತು ಶನಿವಾರ ತಾಲ್ಲೂಕು ಸಾಹಿತ್ಯ ಸಮ್ಮೇಲನ ನಡೆಯಿತು. ನಿವೃತ್ತ ಪ್ರಾಧ್ಯಾಪಕರಾದ ಡಾ. ಜೆ.ಕೆ.ರಮೇಶರವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಶುಕ್ರವಾರದ ದಿನ ಕುಶಾವತಿಯ ಉದ್ಯಾನವನದಿಂದ ಸಾಂಸ್ಕೃತಿಕ ನಡಿಗೆ ಪ್ರಾರಂಭವಾಯಿತು. ಊರಿನ ಎಲ್ಲಾ ಶಾಲಾಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಒಂದಿಷ್ಟು ವೇಷಗಳು-ಎರಡು ಹುಲಿ. ಅಧ್ಯಕ್ಷರೊಡನೆ ಸಾಗಿಬಂದ ಸಮೂಹಮಾತ್ರ ತೀರಾ ಸಣ್ಣಸಂಖ್ಯೆಯದು. ಸಂಸ್ಕೃತಿಮಂದಿರದ ಬಳಿ ಮೂರು ಧ್ವಜಗಳನ್ನು ಮೂವರು ಅರಳಿಸಿದರು. ಉದ್ಘಾಟನಾಸಮಾರಂಭಕ್ಕೆ ತುಂಬಾ ಜನ ಸೇರಿದ್ದರು. ನಿಕಟಪೂರ್ವ ಸಂಮೇಲನದ ಅಧ್ಯಕ್ಷರಾದ ಪ್ರೊ.ಶ್ರೀನಿವಾಸ ಉಡುಪರೂ ಬೆಂಗಳೂರಿನಿಂದ ಭಾಗವಹಿಸಲು ಬಂದಿದ್ದರು. ಹೆಚ್ಚಿನ ಆಕರ್ಷಣೆಯೆಂದರೆ ನಮ್ಮೂರಿನವರಾದ ಯು.ಆರ್.ಅನಂತಮೂರ್ತಿ ಭಾಗವಹಿಸಿದ್ದು. ಅವರೊಡನೆ ಅವರ ಶ್ರೀಮತಿ, ಮಗಳು ಮತ್ತು ತಮ್ಮ ಗುರುರಾಜನೂ ಬಂದಿದ್ದರು. ಬಹಳಕಾಲದ ನಂತರ ಬಂದಿದ್ದ ಅವರು ತುಂಬಾ ಲಹರಿಯಲ್ಲಿದ್ದರು. ಮತ್ತು ಅವರೇ ಸಂಮೇಲನದ ಮುಖ್ಯ ಆಕರ್ಷಣೆಯಾಗಿದ್ದರು. ಮಾರನೆಯ ದಿನ ಅವರೊಡನೆ ಸಂವಾದ ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ವೇದಿಕಮೇಲೆ ಹದಿನೈದು ಜನ. ಭಾಷಣಗಳ ಸುರಿಮಳೆ. ಅನಂತಮೂರ್ತಿಯ ಭಾಷಣವೂ ಎಂದಿನಂತೆ ಆಕರ್ಷಕವಾಗಿತ್ತು. ತೀರ್ಥಹಳ್ಳಿಯ ಸಾಂಸ್ಕೃತಿಕ ಮಹತ್ವವನ್ನು, ಅದರ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದ ಹಿರಿಯರನ್ನು ಸ್ಮರಿಸಿಕೊಂಡರು. ಮರೆತೇಹೋಗಿದ್ದ ಅವರೆಲ್ಲರನ್ನೂ ತೀರ್ಥಹಳ್ಳಿಯ ಜನ ಮತ್ತೊಮ್ಮೆ ನೆನಪಿಸಿಕೊಂಡಂತೆ ಆಯಿತು. <br />
ಮಧ್ಯಾಹ್ನದ ಊಟವಾದ ನಂತರ ಗೋಷ್ಟಿಗಳು ಪ್ರಾರಂಭವಾದವು. ಆದರೆ ಯಾವುದೂ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಲಿಲ್ಲ ಮತ್ತು ಕೊನೆಗೊಳ್ಳಲಿಲ್ಲ. ಎಂಸಿಗಳು ಮಾತುಗಳಂತೂ ಘನಘೋರವಾಗಿದ್ದವು. ಭಾಷಣಕಾರರು ತೆಗೆದುಕೊಂಡ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ಆವರು ತೆಗೆದುಕೊಂಡದ್ದೂ ಉಂಟು. ಸ್ವಾಗತ ಭಾಷಣ ಎರೆಡು ಬಾರಿ ನಡೆಯುತ್ತಿತ್ತು. ಒಮ್ಮೆ ಎಂಸಿ, ಮತ್ತೊಮ್ಮೆ ಸ್ವಾಗತ ಭಾಷಣಕಾರರಿಂದ. ಸಮಯ ವ್ಯರ್ಥವಾಯಿತಲ್ಲದೇ, ಪ್ರಧಾನ ಭಾಷಣಕಾರರಿಗೆ ಸಮಯ ಕಡಮೆಯಾಗುತ್ತಿತ್ತು. ಮೇಲಾಗಿ ಎರಡು ಕಡೆ ಗೋಷ್ಠಿಗಳು ನಡೆಯುತ್ತಿದ್ದವು. ಕೊನೆಕೊನೆಗೆ ಅಲ್ಲೂ ಜನವಿಲ್ಲ. ಇಲ್ಲೂ ಜನವಿಲ್ಲ. ಹಾಗಾಯಿತು. <br />
ಕಾರ್ಯಕರ್ತರ ಪಡೆಯೇ ಇರಲಿಲ್ಲ. ಬಂದ ಅತಿಥಿಗಳನ್ನು ಗುರುತಿಸುವುದಾಗಲೀ , ಅವರಿಗೆ ಮಾರ್ಗದರ್ಶನ ಮಾಡುವರಾಗಲೀ ಯಾರೂ ಕಾಣುತ್ತಿರಲಿಲ್ಲ. ನನ್ನ ಗುರುಗಳಾದ ಪ್ರೊ.ಶ್ರೀನಿವಾಸ ಉಡುಪರು ಉದ್ಘಾಟನಾ ಸಮಾರಂಭವಾದನಂತರ ತೀರಾ ಒಂಟಿಯಾಗಿ ಬಿಟ್ಟಿದ್ದರು. ಅವರನ್ನು ಊಟಕ್ಕೆ ಕರೆದುಕೊಂಡು ಹೋಗುವ ಅಗತ್ಯ ಯಾರಿಗೂ ಕಂಡುಬರಲಿಲ್ಲ. ಅವರನ್ನು ನಾನು ಕರೆದುಕೊಂಡು ಹೋಗಿದ್ದೆ. ಆಕ್ಸಿಡೆಂಟ್ ಆಗಿ ನಡೆಯಲು ಶ್ರಮ ಪಡುತ್ತಿದ್ದ ಅವರನ್ನು ಸರಿಯಾಗಿ ಯಾರೂ ನಡೆಸಿಕೊಳ್ಳಲಿಲ್ಲವೆಂದೇ ನನ್ನ ಭಾವನೆ. ಊಟ ಮಾತ್ರ ತುಂಬಾ ರುಚಿಕಟ್ಟಾಗಿ ಮಾಡಿದ್ದರು. ಇದಕ್ಕೆ ಕಾರಣ ನಮ್ಮ ಕಡಿದಾಳು ಪ್ರಕಾಶ್. ತನಗೆ ವಹಿಸಿದ ಹೊಣೆಯನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ ಅವರು ಎರಡೂ ದಿನ ತಮ್ಮ ಅಡುಗೆಕೋಣೆಯನ್ನು ಬಿಟ್ಟು ಹೊರಬರಲಿಲ್ಲ. ಯಾವ ಕೆಲಸಕೊಟ್ಟರೂ ಅತ್ಯಂತ ಪ್ರಾಮಾಣಿಕವಾಗಿ ಮಾಡುವ ಕಡಿದಾಳು ಪ್ರಕಾಶರನ್ನು ಎಷ್ಟು ಜನ ಗುರುತಿಸಿದ್ದಾರೊ ತಿಳಿಯಲಿಲ್ಲ. <br />
ಎರಡನೆಯ ದಿನದ ಕಾರ್ಯಕ್ರಮಗಳಂತೂ ಅಧ್ವಾನದ ಸಂತೆ. ಎರಡೂ ವೇದಿಕೆಯಲ್ಲಿ ನಡೆಯಬೇಕಾಗಿದ್ದ ಗೋಷ್ಠಿಗಳು ಒಂದು ಗಂಟೆ ತಡವಾಗಿ ಪ್ರಾರಂಭವಾದವು. ಪ್ರಧಾನ ವೇದಿಕೆಯಲ್ಲಿ (ವಿಶ್ವಮಾನವ ವೇದಿಕೆ) ಕವಿಗೋಷ್ಠಿ. ೩೯ ಜನ ಕವಿಗಳು. ಉಪವೇದಿಕೆಯಲ್ಲಿ (ಕಡಿದಾಳು ಮಂಜಪ್ಪ ವೇದಿಕೆ) ಎರಡು ಗೋಷ್ಟಿ- ನಮ್ಮ ಹಿರಿಯರ ಸಾಹಿತ್ಯ ಮತ್ತು ಅನಂತ ಸಂವಾದ. ನಾನು ಕವಿಗೋಷ್ಠಿಯ ಕೊರತಕ್ಕೆ ಹೆದರಿ ಇತ್ತ ಹಾಜರಾದೆ. ಕುವೆಂಪು ಮತ್ತು ಹಾಮಾನರ ಬಗ್ಗೆ ಪ್ರೊ.ಎಲ್.ಸಿ.ಸುಮಿತ್ರಾ ತುಂಬಾ ಚೆನ್ನಾಗಿಯೇ ಮಾತನಾಡಿದರು. ಆದರೆ ಅವರಿಗೆ ಕೊಟ್ಟ ಅವಧಿ ಮಾತ್ರ ತೀರಾ ಕಡಮೆಯಾಯಿತು ಎಂದೆನಿಸಿತು. ವಿದ್ಯಾರ್ಥಿಗಳೇ ಹೆಚ್ಚಾಗಿ ಭಾಗವಹಿಸಿದ್ದರು. ಆದರೂ ತಮಗೆ ಕೊಟ್ಟ ಅವಧಿಯಲ್ಲಿಯೇ ಸುಮಿತ್ರಾ ಚೆಂದವಾಗಿ ಈ ಹಿರಿಯರ ಪರಿಚಯವನ್ನು ಮಾಡಿಕೊಟ್ಟರು. ಅನಂತಮೂರ್ತಿ ಮತ್ತು ತೇಜಸ್ವಿಯಬಗ್ಗೆ ಡಾ. ಎಚ್.ಟಿ.ಕೃಷ್ಣಮೂರ್ತಿ ತುಂಬಾ ಚೆಂದವಾಗಿ ಮಾತನಾಡಿದರು. ಇಬ್ಬರಿಗೂ ಇರುವ ವ್ಯತ್ಯಾಸ ಮತ್ತು ಇವರಿಬ್ಬರೂ ಮಾಡಿದ ಸಾಧನೆಯನ್ನು ವಿವರಿಸಿದರು. ಎಂಕೆ.ಇಂದಿರಾ ಮತ್ತು ಎಸ್.ವಿ.ಪರಮೇಶ್ವರ ಭಟ್ಟರ ಬಗ್ಗೆ ಪ್ರೊ.ಕೆ.ಟಿ.ಪಾರ್ವತಮ್ಮ ಮಾತ್ರ ನೀರಸವಾಗಿ, ಪ್ರಬಂಧವನ್ನು ಮಂಡಿಸಿದರು. ಅವರ ಪ್ರಬಂಧ ಯಾರಮೇಲೂ ಪ್ರಭಾವ ಬೀರಲಿಲ್ಲ. ಎಂಸಿಯ ಹಾವಳಿಯಂತೂ ತೀರಾ ಇತ್ತು ಇಲ್ಲಿ. <br />
ನಂತರ ಹನ್ನೆರೆಡೂ ಮುಕ್ಕಾಲಿಗೆ (ತೊಂಭತ್ತು ನಿಮಿಷ ತಡವಾಗಿ) ಅನಂತ ಸಂವಾದ ನಡೆಯಿತು. ಸುಮಾರು ಇಪ್ಪತ್ತು ಜನರನ್ನು ಅವರಿಗೆ ಪ್ರಶ್ನೆ ಮಾಡಲು ಆಹ್ವಾನಿಸಿದ್ದರು. ಅವರೆಲ್ಲರನ್ನೂ ಪರಿಚಯಿಸಿ, ಕುಳ್ಳಿರಿಸಿದಮೇಲೆ ಪ್ರಶ್ನೆಗಳು ಪ್ರಾರಂಭವಾದವು. ಒಂದು ಪ್ರಶ್ನೆಗೆ ಹದಿನೈದು ನಿಮಿಷಗಳ ಉತ್ತರ. ಅನಂತಮೂರ್ತಿಯವರ ಮಾತಿನಲ್ಲಿ ಹೊಸತೇನೂ ಇರಲಿಲ್ಲ. ಅವರ ಎಂದಿನ ಲೇಖನಗಳ ಸಾರಾಂಶವೇ ಅಡಕವಾಗಿರುತ್ತಿತ್ತು. ಅವರ ಮಾತುಗಳನ್ನು ಒಮ್ಮೆ ಕೇಳಿದವರಿಗೆ ಹೊಸತೇನೂ ಇರಲಿಲ್ಲ. ಊರಿನ ಜನ ಮಾತ್ರ ಅಭಿಮಾನದಿಂದ, ಆಸಕ್ತಿಯಿಂದ ಅವರನ್ನು ಆರಾಧನಾಭಾವದಿಂದ ನೋಡುತ್ತಿದ್ದರು. <br />
ಮಧ್ಯಾಹ್ನ ವಿಶ್ವಮಾನವವೇದಿಕೆಯಲ್ಲಿ ನಡೆದ ಗೋಷ್ಠಿ ಗೊಂದಲದಿಂದ ಕೊನೆಗೊಂಡಿತು. ಸಮಕಾಲೀನ ಸವಾಲುಗಳು ಎಂಬ ವಿಷಯದ ಮೇಲೆ ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಪ್ರೊ.ವಿ.ಎಸ್.ಶ್ರೀಧರರ ಮಾತು ಮುಗಿದನಂತರ ನವವಸಾಹತುಶಾಹಿ ಮತ್ತು ದುಡಿವವರ್ಗವೆನ್ನುವ ವಿಷಯದಮೇಲೆ ಡಾ.ಎಂ.ವಿ.ವಸುರವರು ಪ್ರಾರಂಭದಲ್ಲಿಯೇ ಬಿಜೆಪಿ ಮತ್ತು ನರೇಂದ್ರಮೋದಿಯವರ ಪ್ರಸ್ತಾವವನ್ನು ಅನಗತ್ಯವಾಗಿ ಮಾಡುತ್ತಾ ಟೀಕೆಯನ್ನು ಪ್ರಾರಂಭಿಸಿದಾಗ ಸಭೆಯಲ್ಲಿ ಕುಳಿತಿದ್ದ ಮಾಜಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಸರಿಯಾಗಿ ಗದರಿಸಿದರು. ವಿಷಯವನ್ನು ಬಿಟ್ಟು ಮಾತನಾಡಬೇಡಿ ಎಂದರು. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಉತ್ತರ ಬಂದಿತು. ಅವರ ಪರವಾಗಿ ಕೆಲವರು ಸಂಯೋಜಕರೂ ಸೇರಿದಾಗ ಸಭೆಯಲ್ಲಿದ್ದವರೆಲ್ಲರೂ ಅದನ್ನು ವಿರೋಧಿಸಿದರು. ಆಗ ಹಾಲಿ ಶಾಸಕರಾದ ಕಿಮ್ಮನೆಯವರು ಮಧ್ಯೆ ಪ್ರವೇಶಿಸಿ ಇಲ್ಲೀಗ ವಿಷಯಾಂತರವಾಗಿದೆ ಎಂದು ಒಪ್ಪಿಕೊಂಡು ಎಲ್ಲರ ಕ್ಷಮೆಯಾಚಿಸಿ ಗೊಂದಲವನ್ನು ತಿಳಿಯಾಗಿಸಿದರು. ವಸುರವರ ಮಾತು ಇಲ್ಲಿಗೇ ನಿಂತಿತು. <br />
ಒಂದು ರೀತಿಯಲ್ಲಿ ಇಲ್ಲಿ ನಡೆದ ಸಾಹಿತ್ಯ ಸಂಮೇಲನ ಬಂಡಾಯ ಸಂಮೇಲನದ ಹಾಗೆ ಕಾಣಿಸಿತು. ಸಾಹಿತ್ಯದ ಕುರಿತಾಗಿರುವ ವಿಷಯಗಳಿಗೆ ಪ್ರಾಧಾನ್ಯ ಕೊಡುವುದಕ್ಕಿಂತ ಬೇರೆ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟಿರುವ ಹಾಗೆ ಅನಿಸುತ್ತಿತ್ತು. ;ಶಿಕ್ಷಣ, ಚಳುವಳಿಗಳು, ಕೃಷಿ, ಧರ್ಮ, ರಾಜಕಾರಣ ಹೀಗೆ ಇಂತಹ ವಿಷಯಗಳ ಕುರಿತು ಭಾಷಣಗಳು ನಡೆದಿವೆ. ಸಾಹಿತ್ಯಕ್ಕೂ ಇವುಗಳಿಗೂ ಇರುವ ಸಂಬಂಧವೇನು ನನಗೆ ತಿಳಿಯಲಿಲ್ಲ. ಸಾಹಿತ್ಯದ ಆಸಕ್ತಿಯನ್ನು ಮೂಡಿಸುವ , ಅಭಿರುಚಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳೇ ನಡೆದಿಲ್ಲ. ಭಾಷಣಕಾರರೆಲ್ಲಾ ಒಂದು ರೀತಿಯ ಫೈರ್ ಬ್ರಾಂಡ್ಗಳೇ. ಮಾತುಗಳೆಲ್ಲವೂ ಪ್ರಸ್ತುತ ರಾಜಕಾರಣದತ್ತ, ಬಿಜೆಪಿಯನ್ನು ನಿಂದಿಸುವತ್ತ ಗಿರಕಿಹೊಡೆಯುತ್ತಿದ್ದವು(ಬಿಜೆಪಿಯ ಕುರಿತು ನನಗೆ ಯಾವ ರೀತಿಯ ಅನುಕಂಪವೂ ಇಲ್ಲ). ಶುದ್ಧ ಸಾಹಿತ್ಯದತ್ತ , ಇತ್ತೀಚೆಗೆ ಬರುತ್ತಿರುವ ಪುಸ್ತಕಗಳ ಕುರಿತು ಮಾತುಗಳಿದ್ದರೆ ಚೆಂದವಿರುತ್ತಿತ್ತು ಎನ್ನುವ ಭಾವನೆ ನನ್ನ ಒಬ್ಬನದೇ ಅಲ್ಲ. ಹಲವರಿದ್ದಿತ್ತು. <br />
<br />
ಶನಿವಾರ ಮತ್ತು ಭಾನುವಾರ ಊರಿನ ಸಂಗೀತ ಶಾಲೆಯ -ಸುಮುಖ ಸಂಗೀತಶಾಲೆಯ ವಾರ್ಷಿಕೋತ್ಸವದ ಕಾರಣ ರಾಮಮಂದಿರದಲ್ಲಿ, ದೇವಸ್ಥಾನದ ಅಂಗಳದಲ್ಲಿ ಮಕ್ಕಳ ಮತ್ತು ಹಿರಿಯರ ಸಂಗೀತ ಕಚೇರಿ ಇತ್ತು. ಪುದುಕೋಟೆ ರಾಮನಾಥನ್ ರವರ ಪೀಟಿಲು ವಾದನ ಮನಸ್ಸನ್ನು ತೃಪ್ತಿಪಡಿಸಿತು. ಒಳ್ಳೆಯ ಸಂಗೀತಕ್ಕಾಗಿ ಹಪಹಪಿಸುತ್ತಿದ್ದ ಕಿವಿಗಳು ಈ ಕಾರ್ಯಕ್ರಮದಿಂದ ತುಂಬಾ ಖುಷಿಪಟ್ಟವು. <br />
<br />
ವಾರದ ಓದು. ೧. ಟಿಕ್ ಟಕ್ ಪೆನ್ನು-ನರೇಂದ್ರ ಪೈ (೧೧೦), ಹಿರಿಯರು ಹೇಳಿದ ಕೆಲವು ಕಥೆಗಳು(೧೧೯), ಈಸೋಫನ ಕಥೆಗಲು(೧೪೯) ಮತ್ತು ಅಕ್ಬರ್ ಬೀರಬಲರ ಕಥೆಗಳು (೨೦೬)- ಮೂರು ಪುಸ್ತಕಗಳ ಲೇಖಕರು-ಪ್ರೊ.ಎನ್.ಗೋಪಾಲಕೃಷ್ಣ ಉಡುಪ,nagaraja raohttp://www.blogger.com/profile/09150767551244015450noreply@blogger.com2tag:blogger.com,1999:blog-380114554757439625.post-19375941847929149812011-01-14T09:08:00.000-08:002011-01-14T09:08:03.459-08:00ಕಳೆದು ಹೋದ ವರುಷಕಳೆದು ಹೋದ ವರುಷ<br />
<br />
ಹೊಸ ವರುಷ ಪ್ರಾರಂಭವಾಯಿತು ಮತ್ತು ನಾವು ಮತ್ತೂ ಒಂದು ವರುಷವನ್ನು ನಮ್ಮ ಪ್ರಾಯಕ್ಕೆ ಸೇರಿಸಿಕೊಂಡೆವು. ಹೊಸ ವರುಷದ ಪ್ರಾರಂಭದಲ್ಲಿ ಹೊಸ ಪಾಪಗಳನ್ನು ಮಾಡುವುದಿಲ್ಲ ಎಂದು ಏನೇನೋ ನಿರ್ಥಾರಗಳನ್ನು ಮಾಡುತ್ತೇವೆ. ಒಂದೆರೆಡು ದಿನ ಅದರ ಅಮಲಿನಲ್ಲಿಯೇ ಇರುತ್ತೇವೆ. ದಿನ ಕಳೆದಂತೆ ಮತ್ತೆ ನಾಯಿಬಾಲ ಡೊಂಕೇ. ಹಾಗಾಗಿ ಹೊಸ ವರುಷಕ್ಕೆ ನನ್ನಿಂದ ಸಾಧ್ಯವಾಗದ ನಿರ್ಧಾರಗಳನ್ನು ಮಾಡುವುದನ್ನು ಬಿಟ್ಟಿದ್ದೇನೆ. ಇರುವಷ್ಟು ದಿನ ಅದೇ ಸಿಗರೇಟು ಮತ್ತು ಹೊಸ ಪುಸ್ತಕಗಳ ಸಂಗದಲ್ಲಿ ಕಳೆದರಾಯಿತು ಎನ್ನುವುದು ಸಧ್ಯದ ನಿರ್ಧಾರ. <br />
<br />
ಕಳೆದ ಹೋದ ವರುಷದಲ್ಲಿ ನಾನು ಓದಿದ ಪುಸ್ತಕಗಳ ಸಮಗ್ರ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದೇನೆ. ಆವರಣದಲ್ಲಿರುವ ಸಂಖ್ಯೆ ಆ ಪುಸ್ತಕಗಳ ಪುಟಗಳ ಸಂಖ್ಯೆ. ಕೆಲವೆಡೆ ಆವರಣದಲ್ಲಿ "ಎ" ಎಂದು ಗುರುತು ಹಾಕಿದ್ದೇನೆ. ಅಂದರೆ ಅವು ಯಾರಿಂದಲೋ ಎರವಲು ತಂದ ಪುಸ್ತಕಗಳು. ಸ್ನೇಹಿತರು ಕೊಟ್ಟ ಪುಸ್ತಕಗಳು. ಉಳಿದೆಲ್ಲಾ ಪುಸ್ತಕಗಳು ಸ್ವಂತದ್ದು. ಮತ್ತು ದಾನ ನೀಡಲು ನಿರ್ಧಾರ ಮಾಡಿದ ಪುಸ್ತಕಗಳು. ಯಾರಿಗೆ ಬೇಕಾದರೂ ಕೊಟ್ಟು ಬಿಡುತ್ತೇನೆ . ಆದರೆ ತೆಗೆದುಕೊಳ್ಳುವರು ಮತ್ತು ಅದನ್ನು ಆಸಕ್ತಿಯಿಂದ ಓದುವವರು ಯಾರು?<br />
<br />
ಪುಸ್ತಕಗಳ ಪಟ್ಟಿ.<br />
೧. ತೊತ್ತೋಚಾನ್ (೧೫೪) ೨, ಕಥಾಸಮಯ -ಜೋಗಿ (೧೪೭)<br />
೩. ಹೆಸರೇ ಬೇಡ -ಇಟ್ಟಿಗೆ ಸಿಮೆಂಟ್ ಪ್ರಕಾಶ ೪. ಜೋಗಿಮನೆ -ಜೋಗಿ (೨೨೪) ೫.ಆ ದಶಕ -ಶಾಮಣ್ಣ (೧೦೩) ೬. ಮಾಂಟೋ ಕಥೆಗಳು- ಜೆ.ಬಾಲಕೃಷ್ಣ (೧೦೭) ೭. ಮೋಹನ ಮುರಲಿ- ಎಸ್. ವಿದ್ಯಾಶಂಕರ್ (೨೮೪) ೮.ಮೃತ್ಯುಂಜಯ -ನಿರಂಜನ {೪೮೪(ಎ)} ೯. ಸಾಹಿತ್ಯಲೋಕದ ಸುತ್ತ ಮುತ್ತ -ಗಿರಡ್ಡಿ (೧೮೬) ೧೦. ಬದುಕು ಬದಲಿಸಿದ ಸ್ಕೂಟರ್ -ಗಣೇಶ್ ಅಮೀನಗಡ (೨೪೬) ೧೧ ಒಂದು ಸುಂದರ ಮನಸ್ಸು ಮತ್ತು ಇತರ ಬರಹಗಳು -ಅಲೂರು (೧೬೮) ೧೨. ಕೊಪೆನ್ ಹೇಗನ್ ಋತುಸಂಹಾರ -ನಾ.ಹೆಗಡೆ (೧೧೮) ೧೩. ಅಬಿವೃದ್ಧಿಯ ಅಂಧಯುಗ -ನಾ.ಹೆಗಡೆ (೧೫೬) ೧೪. ಟಿಪ್ಪು ಖಡ್ಗದ ನ್ಯಾನೊ ಕಾರ್ಬನ್-ನಾ.ಹೆಗಡೆ (೧೪೮) ೧೫. ನಾನು ಪಾಟೀಲ ಪುಟ್ಟಪ್ಪ (೨೬೬)-ಡಾ. ಸರಜೂ ಕಾಟ್ಕರ್ ೧೬.ಶಾಲ ಭಂಜಿಕೆ-ಗಣೇಶಯ್ಯ (೧೧೬)<br />
೧೭. ಚಂದ್ರಗಿರಿ-ಸಾರಾಬಿನಂದನ {ಎ(೪೫೬)} ೧೮.ಕನ್ನಡದ ಅತಿ ಸಣ್ಣ ಕತೆಗಳು -ಸಂ-ಎ.ದಿವಾಕರ. (೧೯೨) <br />
೧೯. ಧರ್ಮದ ಹೆಸರಿನಲ್ಲಿ -ಆರ್.ಬಿ.ಶ್ರೀಕುಮಾರ್/ಸಾರಾ (೮೮) ೨೦.ಝೆನ್- ಕೆ.ವಿ.ಸುಬ್ಬಣ್ಣ <br />
೨೧. ಕೋಮುವಾದ: ಒಂದು ದರ್ಶನ-ರಾಮ್ ಪುನಿಯಾನಿ (೧೧೩) <br />
೨೨. ಆರ್.ಕೆ.ನಾರಾಯಣ ಅವರ ಕತೆಗಳು:ಅನು.ಡಾ.ಆರ್ ಪೂರ್ಣಿಮಾ (೪೮) ೨೩. ನೆನಪುಗಳು-ಡಾ.ಪ್ರೊ.ವೈ.ಆರ್.ಮೋಹನ್ (೩೧೨)<br />
೨೪. ಹರಿವ ನದಿ-ನಾ.ಡಿಸೋಜ {ಎ(೧೫೯)} <br />
೨೫. ಸ್ವಾಮಿ ಮತ್ತು ಅವನ ಸ್ನೇಹಿತರು: ಅನು-ಹೆಚ್.ವೈ.ಶಾರದಾಪ್ರಸಾದ್ (೧೪೪) <br />
೨೬. ಅರಿವಿನ ಆಡುಂಬೊಲ- ಹೆಚ್.ವೈ.ಶಾರದಾಪ್ರಸಾದ್ (೧೦೧) ೨೭, ಬೊಕಾಷಿಯೋನ ರಸಿಕತೆಗಳು- (೯೩)<br />
೨೮. ಕರ್ವಾಲೋ-ತೇಜಸ್ವಿ. (೧೪೬) ೨೯. 11 minutes-Paulo Coelho (275)<br />
೩೦. ಪಂಡಿತ್ ಭೀಮಸೇನ ಜೋಷಿ-ಅರವಿಂದ ಮುಳಗುಂದ (೧೫೧) ೩೨, ಉಡುಪಿಯ ಸಾಂಸ್ಕೃತಿಕ ಕಥನ- ಮುರಾರಿ ಬಲ್ಲಾಳ (೧೪೮)<br />
೩೩. ೨೮ಹಣತೆಗಳು- ತೀರ್ಥರಾಮ ವಳಲಂಬೆ (೧೬೭) ೩೩. ೨೭ಹಣತೆಗಳು- ತೀರ್ಥರಾಮ ವಳಲಂಬೆ ೯೧೭೨)<br />
೩೪. ಧ್ಯಾನ-ತೀರ್ಥರಾಮ ವಳಲಂಬೆ (೧೬೮) ೩೫. ದೇಶಕಾಲ ಬದುಕು ಮತ್ತು ದೇವರು-ತೀರ್ಥರಾಮ ವಳಲಂಬೆ (೧೭೨)<br />
೩೬. ಪುನರ್ಜನ್ಮ ಮತ್ತು ಪುರುಷಾರ್ಥ -ತೀರ್ಥರಾಮ ವಳಲಂಬೆ (೧೭೬) ೩೭, ವಿಚಾರವಾದ ವಿಜ್ಞಾನ ಅಧ್ಯಾತ್ಮ -ತೀರ್ಥರಾಮ ವಳಲಂಬೆ (೧೭೨)<br />
೩೮. ಭಾವ -೩ - ಮಾಸ್ತಿ. (೫೦೦) ೩೯ ಕೇಂದ್ರ ವೃತ್ತಾಂತ- ಯಶವಂತ ಚಿತ್ತಾಲ (೨೨೪)<br />
೪೦. ರಕ್ಷಕ ಅನಾಥ- ವಸುದೇಂದ್ರ (೧೬೫) ೪೧. ಗೆರೆ ದಾಟಿದ ಮೇಲೆ-ಎಂ.ಎಸ್.ಪರಮಶಿವಮೂರ್ತಿ (೪೨೪)<br />
೪೨. ಮನೆಮನಮಾತು: ನಾ ಕಾರಂತ ಪೆರಾಜೆ-(೬೪) ೪೩. ಯಶವಂತ ಚಿತ್ತಾಲ ಸಮಗ್ರ ಕಥೆಗಳು-೧<br />
೪೪. ಯಶವಂತ ಚಿತ್ತಾಲ ಸಮಗ್ರ ಕಥೆಗಳು-೨ (೧೨೭೮) ೪೫. ಕವಲು- ಭೈರಪ್ಪ (೩೦೦)<br />
೪೬. ಭಿತ್ತಿ-ಭೈರಪ್ಪ (೬೨೦) ೪೭. ತಂತು- ಭೈರಪ್ಪ (೯೦೮)<br />
೪೮. ಸಾಕ್ಷಿ -ಭೈರಪ್ಪ (೪೧೪) 49. The music room- Namitha Devi Dayal {ಎ(310)}<br />
೫೦. ಮಂದ್ರ- ಭೈರಪ್ಪ (೫೯೬) 51 ಜೀವನರಾಗ- ಸುಮಂಗಲಾ (೩೫೨)<br />
೫೨.ದೂರ ಸರಿದರು- ಭೈರಪ್ಪ (೨೩೨) ೫೩. ತಲೆಗಳಿ- ವಿ.ಶಿ.ಶೀಗೆಹಳ್ಲಿ (೪೪೮)<br />
೫೪. ತುಂಗಾ- ವಿ.ಗಾಯತ್ರಿ (೧೭೪) ೫೫. ಗಾಂಧೀ ಕ್ಲಾಸ್-ಕುಂ.ವೀ. (೩೯೦)<br />
೫೬. ದೇವಕಾರು- ಸತೀಶ್ ಚಪ್ಪರಿಕೆ (೯೬) ೫೭. ಜನ್ನನ ಯಶೋಧರ ಚರಿತೆ ಪ್ರವೇಶ (೧೨೬)<br />
೫೮. ಸೋಲಿಸಬೇಡ ಗೆಲಿಸಯ್ಯಾ- ಪ್ರೇಮಾ ಕಾರಂತ (೨೫೨) ೫೯.Haroun and the sea of sotries- Salman Rushdie (211) .೬೦ ಬಾನಯಾನ- ಕ್ಯಾ.ಗೋಪಿನಾಥ್.<br />
೬೧ Absoulte Kushawant (186)<br />
೬೨ ನೆನಪಿನ ಚಿತ್ರಗಳು- ಎಂ.ವೈ.ಘೋರ್ಪಡೆ. (೨೧೨)<br />
೬೩ ಸಾರ್ಥ -ಭೈರಪ್ಪ. (೩೧೮)<br />
೬೪ ವೆಂಡರ್ ಕಣ್ಣು -ಕೆ ಶಿವು (೧೨೩) <br />
೬೫ ಕನ್ನಡದ ಈ ಲೋಕ- ಭವಾನಿಶಂಕರ್ (೯೪)<br />
೬೬ ಎಣ್ಮಕಜೆ- ಮೂಲ ಅಂಬಿಕಾಸುತನ್, ಅನು: ಬಾಲಕೃಷ್ಣ. (೨೪೩)<br />
೬೭ ಹಾವು ನಾವು- ಗುರುರಾಜ ಸನೀಲ್ (೧೯೪)<br />
೬೮ The curious incident of the dog in the night time- Mark Haddon (272)<br />
೬೯ Slum dog millionaire (Q &A)- Vikas Swaroop (382)<br />
೭೦ ಮಿತ್ತಬೈಲು ಯಮುನಕ್ಕ -ಡೆ.ಕೆ.ಚೌಟ (೩೦೪)<br />
೭೧ ಜರಾಸಂಧ-ಜೋಗಿ (೧೧೮)<br />
೭೨ ಜೀವದನಿ- ಸರ್ಜಾಶಂಕರ ಹರಳೀಮಠ (೧೫೨)<br />
೭೩ ಜೋಗಿಕಾಲಂ (೨೧೬)<br />
೭೪ ಪಾಕಕ್ರಾಂತಿ -ತೇಜಸ್ವಿ (೮೯)<br />
೭೫ ಕಾಸರಗೋಡಿನ ಸಣ್ಣಕತೆಗಳು (೩೫೩)<br />
೭೬ ಕಾಮರಾಜ ಮಾರ್ಗ-ರವಿಬೆಳೆಗೆರೆ (೪೦೨)<br />
೭೭ ರಥಬೀದಿ-ಶ್ರೀಧರ ಬಳೆಗಾರ (೧೫೩)<br />
೭೮ ಗಂಗಾವತರಣ -ದಮಯಂತಿ ನರೇಗಲ್ಲ (೧೫೫)<br />
೭೯ ನನ್ನ ಬದುಕಿನ ಹಾಡು -ಎನ್ಕೆ (೧೦೬)<br />
೮೦ ಸತ್ಯದ ಹುಡುಕಾಟ-ಶ್ರೀಸದಾಶಿವಯೋಗಿ (೨೬೯)<br />
೮೧ ಸಂಗೀತಸಂವಾದ-ಭಾಸ್ಕರ್ ಚಂದಾವರ್ಕರ್, ಅನು:ವೈದೇಹಿ (೨೦೨)<br />
೮೨ ಸಂಗೀತತಪಸ್ಯಾ- ದತ್ತಾತ್ರೇಯ ಸದಾಶಿವಗರುಡ(೨೭೭)<br />
೮೩ ಸಂಗೀತಸಮಯ -ಎಸ್.ಕೃಷ್ಣಮೂರ್ತಿ (೩೪೯)<br />
೮೪ ಸಂಗೀತಸಾಮ್ರಾಜ್ಞಿ ಎಂ.ಎಸ್.ಸುಬ್ಬುಲಕ್ಷ್ಮಿ -ಸಾ.ಕೃ.ರಾಮಚಂದ್ರರಾವ್ (೧೦೬)<br />
೮೫ ನಾ ಕಂಡ ಕಲಾವಿದರು-ವಾಸುದೇವಚಾರ್ಯರು (೧೩೫)<br />
೮೬ ನನ್ನ ರಸಯಾತ್ರೆ-ಮಲ್ಲಿಕಾರ್ಜುನ ಮನ್ಸೂರ್ (೧೧೨)<br />
೮೭, ರಂಗಕೋಗಿಲೆ ಜುಬೇದಾಬಾಯಿ -ವೀಣಾ ಕುಲಕರ್ಣಿ (೮೬)<br />
೮೮.ನೆನಪುಗಳು- ವಾಸುದೇವಾಚಾರ್ಯರು (೧೦೯)<br />
೮೯. ಸಂಗೀತ ರಸನಿಮಿಷಗಳು ;ಜಿ.ಟಿ.ನಾರಾಯಣರಾವ್ (೧೭೬).nagaraja raohttp://www.blogger.com/profile/09150767551244015450noreply@blogger.com0tag:blogger.com,1999:blog-380114554757439625.post-33929470479134905832011-01-09T09:13:00.001-08:002011-01-09T09:13:42.987-08:00ಜಾತ್ರೆಯ ದಿನಗಳುಜಾತ್ರೆಯ ದಿನಗಳು<br />
<br />
ಜಾತ್ರೆ ಮುಗಿದು ಎರಡು ದಿನಗಳು ಕಳೆದಿವೆ. ಊರು ಇನ್ನೂ ಅದರ ಅಮಲಿನಲ್ಲಿಯೇ ಇದೆ. ಸಂಜೆಯ ಹೊತ್ತು ಜನ ಇನ್ನೂ ತಿರುಗಾಡುತ್ತಿದ್ದಾರೆ. ದೋಸೆ ಕ್ಯಾಂಪಿಗೆ ಭರ್ಜರಿ ವ್ಯಾಪಾರ ಆಗುತ್ತಿದೆ. ಇನ್ನು ಒಂದು ವಾರದಲ್ಲಿ ಸಂಕ್ರಮಣದ ರಥೋತ್ಸವವಿದೆ. ಅಲ್ಲಿಯವರೆಗೆ ಬಹುಷಃ ಇದೇ ಗುಂಗಿನಲ್ಲಿ ಜನರು ಇರಬಹುದೇನೋ. ನನ್ನೂರಿನ ಮಕ್ಕಳು ಕಾಯುವುದೆಂದರೆ ಮಳೆಗಾಲದಲ್ಲಿ ಜೋರಾಗಿ ಮಳೆ ಬಂದು ರಾಮಮಂಟಪ ಮುಳಗಬೇಕು. ಅಂದರೆ ರಜೆ ಗ್ಯಾರಂಟಿ. ಮತ್ತು ಎಳ್ಳಾಮಾವಾಸ್ಯೆಯ ಜಾತ್ರೆಗೆ. ಎರಡೂ ಲಾಭದಾಯಕ ದಿನಗಳೇ. ಮಳೆಗಾಲದ ರಜೆ ಸಿಕ್ಕಾಗ ನೆರೆ ಬಂದಕಡೆಯಲ್ಲಿ ತಿರಬಹುದು. ನೀರು ಎಷ್ಟು ಬಂದಿದೆ ಎಂದು ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿರಬಹುದು. ಇಂತಹ ದಿನವೂ ಜಾತ್ರೆಯ ದಿನವಿದ್ದಂತೆ. ಊರಿನ ಎಲ್ಲಾ ಜನರೂ ತಮ್ಮ ವಾಹನಗಳನ್ನೇರಿ ತಿರುಗಾಡುತ್ತಿರುತ್ತಾರೆ. ನೆರೆಯಿಂದಾಗಿ ಊರಿನ ಸಂಪರ್ಕರಸ್ತೆಗಳೆಲ್ಲವೂ ಮುಚ್ಚಿಹೋದರೂ ಚಕ್ರವ್ಯೂಹದಲ್ಲಿ ತಿರುಗಿದಂತೆ ನಾವೂ ಊರು ತುಂಬಾ ತಿರುಗುತ್ತಿರುತ್ತೇವೆ. ಈ ಬಾರಿ ಮಳೆಗಾಲ ಕೈಕೊಟ್ಟಿತು. ಮಳೆ ಬಂದರೂ ರಾಮಮಂಟಪ ಮುಳಗಲೇ ಇಲ್ಲ. ಹುಡುಗರ ಬೇಸರಕ್ಕೆ ಮಿತಿಯೇ ಇರಲಿಲ್ಲ.<br />
<br />
ಜಾತ್ರೆ ಈ ಬಾರಿ ಕೈಕೊಡಲಿಲ್ಲ. ಗಾಢವಲ್ಲದ ಆದರೆ ಹಿತವಾದ ಚಳಿಯಿತ್ತು. ಅಮಾವಾಸ್ಯೆಯದಿನ ಪವಿತ್ರ ಸ್ನಾನಕ್ಕಾಗಿ ಜನ ಸಾಲುಸಾಲಾಗಿ ನಿಂತುಕೊಂಡಿದ್ದರು. ನನ್ನೂರಿಗೆ ಒಂದು ಪೌರಾಣಿಕ ಹಿನ್ನೆಲೆಯಿದೆ. ತಂದೆಯ ಆಜ್ಞೆಯಂತೆ ತನ್ನ ತಾಯಿಯ ತಲೆಕಡಿದ ಪರುಶರಾಮನಿಗೆ ಪಾಪಪ್ರಜ್ಞೆ ಬಂದಿತಂತೆ . ಮೇಲಾಗಿ ಅವನ ಕೊಡಲಿಗೆ ಅಂಟಿಕೊಂಡಿದ್ದ ರಕ್ತ ಯಾವ ನದಿಯ ನೀರಿನಿಂದಲೂ ತೊಳೆಯಲಾಗಲಿಲ್ಲವಂತೆ. ತಿರುಗುತ್ತಾ ತಿರುಗುತ್ತಾ ಎಳ್ಳಾಮಾವಾಸ್ಯೆಯ ದಿನ ನನ್ನೂರಿಗೆ ಬಂದು ಅಲ್ಲಿ ಕೊಡಲಿಯನ್ನು ತೊಳೆದಾಗ ಅಂಟಿಕೊಂಡಿದ್ದ ರಕ್ತವೆಲ್ಲಾ ತೊಳೆದುಹೋಗಿ ಶುಭ್ರವಾಗಿ ಹೊಳೆಯಿತಂತೆ. ಅಲ್ಲೇ ಒಂದು ಶಿವಲಿಂಗವನ್ನು ಸ್ಥಾಪಿಸಿ , ಪೂಜೆಮಾಡಿದನಂತೆ ಪರುಶರಾಮ. ಆ ಸ್ಠಳವೀಗ ರಾಮಕುಂಡವೆಂದು ಪ್ರಸಿದ್ಧವಾಗಿದೆ. ಅಲ್ಲೇ ಇರುವ ಶಿವಲಿಂಗಕ್ಕೆ ಒಂದು ಮಂಟಪ ಕಟ್ಟಲಾಗಿದೆ. ರಾಮಮಂಟಪವೆಂದು ಇದರ ಹೆಸರು. ನದಿಯ ದಡದಲ್ಲಿಯೇ ಶ್ರೀ ರಾಮೇಶ್ವರ ದೇವಸ್ಠಾನವಿದೆ. ಈ ದೇವರಿಗೆ ರಥೋತ್ಸವದ ಸಂಭ್ರಮ ಎಳ್ಳಾಮಾವಾಸ್ಯೆಯ ಮರುದಿನ.<br />
ಅಮಾವಾಸ್ಯೆಯದಿನ ಸ್ನಾನ. ಆ ದಿನ ಅಲ್ಲಿ ಸ್ನಾನ ಮಾಡಿದರೆ ಆವರೆಗಿನ ಪಾಪಗಳೆಲ್ಲವೂ ಪರಿಹಾರವಾಗಿ ಹೊಸ ಪಾಪಗಳನ್ನು ಮಾಡಲು ಪ್ರಾರಂಭಿಸಬಹುದಂತೆ. ಮಾರನೆಯ ದಿನ ರಥೋತ್ಸವ. ಮೂರನೇಯ ದಿನ ತೆಪ್ಪೋತ್ಸವ. ಎರಡು ದೋಣಿಗಳನ್ನು ಕಟ್ಟಿ ಅದರಲ್ಲಿ ದೇವರ ಮೂರ್ತಿಯನ್ನಿಟ್ಟು ಆ ದಡಕ್ಕೆ ಏಳು ಸುತ್ತು ತಿರುಗಿ ಹೋಗುತ್ತದೆ. ಅಲ್ಲಿ ಪೂಜೆ ಸ್ವೀಕರಿಸಿ ಮತ್ತೆ ಏಳು ಸುತ್ತು ತಿರುಗಿ ಮೂಲದಡಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಎರಡೂ ದಡದ ಮೇಲಿರುವ ಗಿಡಮರಗಳಿಗೆಲ್ಲಾ ವಿದ್ಯುತ್ ದೀಪಗಳ ಅಲಂಕಾರ. ಅದರಂತೆ ಸೇತುವೆಗೂ ಕೂಡ. ಜತೆಗೆ ಸುಮಾರು ಒಂದು ಲಕ್ಷರೂಪಾಯಿಗಳಷ್ಟು ಸಿಡಿಮದ್ದುಗಳನ್ನು ಸುಡುತ್ತಾರೆ. ಇದನ್ನು ನೋಡಲು ನದಿಯ ಎರಡೂ ದಡಗಳಲ್ಲಿ ಕಾಲಿಡಲು ಸಾಧ್ಯವಿಲ್ಲದಂತೆ ಜನ ಸೇರಿರುತ್ತಾರೆ. ಊರಿನ ಜನರಷ್ಟೇ ಅಲ್ಲದೆ ಶೃಂಗೇರಿ ಶಿವಮೊಗ್ಗ ಮೊದಲಾದ ಕಡೆಗಳಿಂದ ಸಾವಿರಾರು ಜನ ಬಂದು ಸೇರುತ್ತಾರೆ. ನನ್ನ ರಥಬೀದಿ ರಾತ್ರೆ ಎರಡು ಗಂಟೆಯಾದರೂ ವಿಶ್ರಮಿಸಿಕೊಳ್ಳದೆ ಚಟುವಟಿಕೆಗಳಿಂದ ಕೂಡಿರುತ್ತದೆ.<br />
<br />
ಊರು ಕೆಲವು ಸತ್ ಸಂಪ್ರದಾಯಗಳನ್ನು ರೂಡಿಸಿಕೊಂಡಿದೆ. ಪರಸ್ಠಳದಿಂದ ಬರುವ ಜನರಿಗೆ ಅನುಕೂಲವಾಗಲಿ ಎಂದು ಈ ಮೂರುದಿನಗಳಲ್ಲಿ ಉಚಿತ ಊಟವನ್ನು ದೇವಸ್ಥಾನದ ಬಳಿ ಒದಗಿಸುತ್ತಿದೆ. ಇದಕ್ಕೆ ಜನ ಕೈತುಂಬಾ ಧಾರಾಳವಾಗಿ ದಾನ ನೀಡುತ್ತಾರೆ. ಹೋಟೆಲಿನಲ್ಲಿ ಅಧಿಕ ಹಣಕೊಟ್ಟು ಊಟ ಮಾಡುವುದಕ್ಕಿಂತ ಈ ಊಟ ಎಷ್ಟೋ ಮೇಲಾಗಿರುತ್ತದೆ. ರಥೋತ್ಸವದ ದಿನ ಸುಮಾರು ಆರುಸಾವಿರದಷ್ಟು ಜನ ಊಟ ಮಾಡಿದ್ದಾರೆ. ನಡು ,ಮಧ್ಯಾಹ್ನದ ಹೊತ್ತು ಅಲ್ಲಲ್ಲಿ ಉಚಿತ ಪಾನಕ ಸೇವೆಯನ್ನು ಕೆಲವರು ಏರ್ಪಡಿಸುತ್ತಾರೆ. ಶುದ್ಧವಾದ ನೀರಿನಿಂದ ಬೆಲ್ಲ, ಕಾಳಮೆಣಸು ಹಾಕಿ ಹೊಟ್ಟೆಗೆ ತಂಪಾಗುವ ಹಾಗೆ ರಸ್ತೆಯಲ್ಲಿ ಹೋಗಿಬರುವವರಿಗೆಲ್ಲರಿಗೂ ಒತ್ತಾಯ ಪೂರ್ವಕವಾಗಿ ಕುಡಿಸುತ್ತಾರೆ. ಇಂತಹ ಪಾನಕಸೇವಾ ಕೇಂದ್ರಗಳು ಈ ಬಾರಿ ಮೂರು ಇತ್ತು.<br />
<br />
ದಾರಿಯುದ್ದಕ್ಕೂ ವ್ಯಾಪಾರಿಗಳ ಅರಚಾಟ, ಚಿಕ್ಕಮಕ್ಕಳ ಕೈಯಲ್ಲಿ ಇದ್ದ ಪೀಪಿಗಳ ಶಬ್ದಗಳಿಂದ ಕಿವಿ ಕಿವುಡಾಗಿ ಹೋಗುತ್ತದೆ. ಆದರೆ ಜಾತ್ರೆಯೆಂದರೆ ಇದೇ ಗೌಜಿ ಗದ್ದಲದ ಗೂಡಲ್ಲವೇ. ಇಂತಹ ಸಮಯದಲ್ಲಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯಾ. ನಾನಂತೂ ಮೊಮ್ಮಗನ ಜತೆಯಲ್ಲಿ ಎಷ್ಟು ಬಾರಿ ತಿರುಗಿದ್ದೇನೆ ಎಂದು ಲೆಕ್ಕವಿಟ್ಟಿಲ್ಲ. ಈಗ ರಥ ಮೌನವಾಗಿ ಗಂಭೀರವಾಗಿ ತನ್ನ ಕೊಟ್ಟಿಗೆಯಲ್ಲಿ ನಿಂತುಕೊಂಡಿದೆ. ರಥಬೀದಿಯಲ್ಲಿ ಹರಡಿಕೊಂಡಿದ್ದ ಅಂಗಡಿಗಳು ಬೇರೆ ಊರಿಗೆ ಹೋಗಿವೆ. ಜನಸಂಚಾರ ಮೊದಲಿನ ಹಾಗೆ ಇಲ್ಲದಿದ್ದರೂ ಮಾಮೂಲಿಯಾಗಿಲ್ಲ. ಇನ್ನೂ ಇರುವ ಅಂಗಡಿಗಳಲ್ಲಿ ಜನಸೇರುತ್ತಿದ್ದಾರೆ. ದೋಸೆ ಕ್ಯಾಂಪಿಗೆ ಮುತ್ತಿಕ್ಕುವ ಜನ ಇನ್ನೂ ಕಡಮೆಯಾಗಿಲ್ಲ. ಮತ್ತೆ ನನ್ನ ರಥಬೀದಿ ಮದುವಣಗಿತ್ತಿಯಂತೆ ಸಂಭ್ರಮಿಸಬೇಕಾದರೆ ಇನ್ನೂ ಹನ್ನೊಂದು ತಿಂಗಳು ಕಾಯಬೇಕು. ಈ ಬಾರಿ ಡಿಸೆಂಬರ್ ೨೫ಕ್ಕೆ ಎಳ್ಳಾಮಾವಾಸ್ಯೆ. ಅಲ್ಲಿಯವರೆಗೆ ಮೆಲಕು ಹಾಕುತ್ತಲೇ ಇರಬೇಕು ಮತ್ತು ಇನ್ನೂ ಒಂದು ರಥೋತ್ಸವಕ್ಕೆ ಕಾಯಬೇಕು. ಕಾಯವುದರಲ್ಲಿಯೇ ಸೊಗಸಿದೆ.nagaraja raohttp://www.blogger.com/profile/09150767551244015450noreply@blogger.com0tag:blogger.com,1999:blog-380114554757439625.post-44214753296459186642011-01-01T23:26:00.000-08:002011-01-02T01:16:50.069-08:00ಕುವೆಂಪು -೧೦೬<br />
<br />
ಕಳೆದ ವಾರ ೨೯ರಂದು ಕುವೆಂಪುರವರ ೧೦೬ರ ಜನ್ಮ ದಿನದ ಆಚರಣೆಯ ಸಂಭ್ರಮ ಕುಪ್ಪಳಿಯಲ್ಲಿ ನಡೆಯಿತು. ಬೆಳಿಗ್ಯೆ ಹತ್ತೂವರೆಗೆ ಕುವೆಂಪು ಸಮಾಧಿಗೆ ಪುಷ್ಪಾರ್ಚನೆಯಾದನಂತರ ಹೇಮಾಂಗಣದಲ್ಲಿ ಸಭೆ ನಡೆಯಿತು. ಚಂಪಾ, ಡಾ.ಮೋಹನ ಆಳ್ವ. ಬಾರಿ, ಕುಲಪತಿಗಳು, ಕುವೆಂಪು ವಿವಿ ಮೊದಲಾದವರು ಉಪಸ್ಥಿತರಿದ್ದರು. ಕುವೆಂಪು ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳು ಪ್ರಕಾಶ ಸ್ವಾಗತ ಮಾಡಿದರು. ಕಡಿದಾಳು ಪ್ರಕಾಶ ಮಿತಭಾಷಿ ಮತ್ತು ಜೇನ್ನೊಣದಂತೆ ಕೆಲಸಮಾಡುವವರು. ಸ್ವಾಗತವಾಗಲೀ ಅಥವಾ ಬೇರೆ ಭಾಷಣವಾಗಲೀ ಹೆಚ್ಚು ಮಾತನಾಡುವವರಲ್ಲ. ಹಾಗಾಗಿ ಅವರ ಮಾತು ಕೇಳಲು ಹಿತವಾಗುತ್ತದೆ. ಉದ್ಘಾಟನಾ ಭಾಷಣ ಮಾಡಿದ ಚಂಪಾ ಎಂದಿನ ಶೈಲಿಯಲ್ಲಿ ವ್ಯಂಗ್ಯ ಮೊನಚುಗಳಿಂದಲೇ ಮಾತು ಪ್ರಾರಂಭಿಸಿದರು. ಅನಗತ್ಯವಾಗಿ ಲೋಕದ ಕುರಿತು ಟೀಕೆಗಳನ್ನು ಮಾಡಿದರು. ಜ್ಞಾನಪೀಠ ಪ್ರಶಸ್ತಿ ಪಡೆದವರ ಬಗ್ಗೆ ಪಡೆದವರು ಮತ್ತು ಹೊಡೆದುಕೊಂಡವರು ಎಂದು ವ್ಯಂಗ್ಯದ ಮಾತನ್ನಾಡಿದರು. ಆಳ್ವರು ಶಿಸ್ತಿನಿಂದ ಭಾಷಣವನ್ನು ಬರೆದುಕೊಂಡು ಬಂದಿದ್ದು ಅದನ್ನು ಚೆನ್ನಾಗಿಯೇ ಓದಿದರು. ಪ್ರತಿ ವರ್ಷವೂ ತನ್ನ ವಿದ್ಯಾರ್ಥಿಗಳನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇನೆ ಎಂದು ಆಶ್ವಾಸನೆ ನೀಡಿದರು. ಬಾರಿ, ಕುಲಪತಿಗಳು ಕುವೆಂಪು ವಿವಿ, ಕನ್ನಡದಲ್ಲಿ ಸ್ವಲ್ಪ ಕಷ್ಟದಿಂದ ಮಾತನಾಡಿದರು. ಆದರೆ ಹಿಂದಿನ ಕುಲಪತಿಗಳಿಗಿಂತ ಚೆನ್ನಾಗಿಯೇ ಮಾತನಾಡಿದರು. ಅವರ ಸ್ಥಾನಮಾನಕ್ಕನುಗುಣವಾಗಿ ಅವರಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ಕುವೆಂಪುರವರ ಕುರಿತು ಫ್ರೌಡ ಪ್ರಬಂಧ ಬರೆದ ಸುಮಾರು ೧೭ ಜನರಿಗೆ ಸನ್ಮಾನ ಮಾಡಿ ಗೌರವಿಸಿದರು. ಪ್ರೊ.ಹೆಚ್.ಜೆ.ಲಕ್ಕಪ್ಪ ಗೌಡ, ಮಳಲಿ ವಸಂತ ಕುಮಾರ್ರಿಂದ ಪ್ರಾರಂಭಿಸಿ ಸುಮಾರು ೧೭ ಜನರಿದ್ದರು.<br />
<br />
ಮಧ್ಯಾಹ್ನದ ಗೋಷ್ಠಿ ಮಾತ್ರ ನನಗೆ ಹಿಂಸೆಯನ್ನೇ ನೀಡಿತು. ಬಹುಶಃ ಕಳೆದ ಎರಡು ವರ್ಷಗಳಿಂದ ಇಂತಹ ಸೆಮಿ ನಾರುಗಳಿಗೆ ನಾನು ಹಾಜರಾಗದೇ ಇರುವುದು ಕಾರಣವೇನೋ. ಮನುಶ್ಯರಿಗೆ ಅರ್ಥವಾಗುವ ಹಾಗೆ ಮಾತನಾಡದೇ, ಎಂದಿನ ಸೆಮಿನಾರ್ ಭಾಷೆಯಲ್ಲಿ ಮಾತನಾಡಿದ್ದು ಮತ್ತೂ ಒಂದು ಕಾರಣ. ಇದು ನನ್ನ ದೋಷವೂ ಇರಬಹುದು. ಸಹಜವಾಗಿ ಸರಳವಾಗಿ ಮಾತನಾಡುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲವಲ್ಲ ಎಂದು ಆಶ್ಚರ್ಯವೂ ಆಯಿತು.<br />
<br />
ಮನಸ್ಸಿಗೆ ಬಹಳ ಸಂತೋಷವನ್ನು ನೀಡಿದ ಕಾರ್ಯಕ್ರಮವೆಂದರೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ. ಹೊಸಬಾಳೆ ಸೀತಾರಾಮರಾಯರು ಸುಮಾರು ಹದಿನೈದು ನಿಮಿಷಗಳ ಕಾಲ ರಾಮಾಯಣ ದರ್ಶನಂ ವನ್ನು ಗಮಕ ರೀತಿಯಲ್ಲಿ ಹಾಡಿ ತೋರಿಸಿದರು. ಅವರಿಗೆ ಈಗ ೮೧ರ ಪ್ರಾಯ. ನೆನಪು ಮಾತ್ರ ಗಟ್ಟಿಯಾಗಿದೆ. ಕಣ್ಣೆದುರು ಕೃತಿಯನ್ನು ಇಟ್ಟುಕೊಳ್ಳದೆ ಕೇವಲ ಸ್ಮೃತಿಯಿಂದಲೇ ಹಾಡಿದ್ದು ನನಗೆ ವಿಶೇಷವಾಗಿ ಕಂಡಿತು. ಅನಂತರ ಬೆಂಗಳೂರಿನ ಕಲಾತೀರ ಸಂಸ್ಠೆಯ ಉದಯಕುಮಾರ್ ಶೆಟ್ಟಿಯವರಿಂದ ಕುವೆಂಪು ಗೀತ ನೃತ್ಯ ಕಾರ್ಯಕ್ರಮ ನಡೆಯಿತು. ಸುಮಾರು ಎಂಟು ಹಾಡುಗಳಿಗೆ ನೃತ್ಯವನ್ನು ಅಳವಡಿಸಿದ್ದರು. ಬಹಳ ಚೆನ್ನಾಗಿ ಮೂಡಿಬಂದಿತ್ತು. <br />
<br />
ಈಗ ಈ ವಾರ ನನ್ನ ರಥಬೀದಿಯಲ್ಲಿ ಜಾತ್ರೆಯ ಗೌಜಿ. ಕೊಟ್ಟಿಗೆಯಲ್ಲಿದ್ದ ರಥ ಹೊರಗೆ ಬಂದಿದೆ. ಅದಕ್ಕೆ ಬಾವುಟಗಳನ್ನು ಏರಿಸುತ್ತಿದ್ದಾರೆ. ರಥಬೀದಿಯ ಎರಡೂ ಬದಿಯಲ್ಲಿ ಅಂಗಡಿಗಳನ್ನು ಇಡಲು ಎಲ್ಲಿಂದಲೋ ವ್ಯಾಪಾರಿಗಳು ತುಂಬು ನಿರೀಕ್ಷೆಯನ್ನು ಇಟ್ಟುಕೊಂಡು ತಮ್ಮ ವಸ್ತುಗಳನ್ನು ಹೊಂದಿಸಿ ಇಡುತ್ತಿದ್ದಾರೆ. ಇನ್ನೆರೆಡು ದಿನಗಳಲ್ಲಿ ರಸ್ತೆಯಲ್ಲಿ ಕಾಲಿಡಲು ತೆರಪಿಲ್ಲದಂತೆ ಜನ ಸೇರುತ್ತಾರೆ. ವರ್ಷಕ್ಕೊಮ್ಮೆ ಬರುವ ಜಾತ್ರೆಯಲ್ಲಿ ನಾನೂ ನನ್ನ ಮೊಮ್ಮಗನೂ ತಿರುಗಬೇಕು. ಮಗು ಕಣ್ಣತುಂಬಾ ಆಸೆಯನ್ನಿಟ್ಟುಕೊಂಡು ಕಾಯುತ್ತಿದೆ.<br />
<br />
ವಾರದ ಓದು:೧. ನೆನಪುಗಳು: ವಾಸುದೇವಾಚಾರ್ಯ (ಪು೧೦೯) ಮತ್ತು ಸಂಗೀತ ರಸನಿಮಿಷಗಳು -ಜಿಟಿನಾ(ಪು೧೭೫)nagaraja raohttp://www.blogger.com/profile/09150767551244015450noreply@blogger.com1tag:blogger.com,1999:blog-380114554757439625.post-45462256430539326592010-12-30T00:47:00.000-08:002010-12-30T00:47:14.683-08:00<b>ತಕಿಟ ತಕಿಟ ಧೋಂ </b><br />
<b><br />
</b><br />
<b>ಕಳೆದ ವಾರ ಹೀಗೆ ಸುಮ್ಮನೇ ಕರಗಿಹೋಗಿಲ್ಲವೆನ್ನುವುದೇ ಒಂದು ಸಮಾಧಾನ. ಇಲ್ಲಿ ನನ್ನೂರಿನಲ್ಲಿ ಅಂತಹ ಹೇಳಿಕೊಳ್ಳುವ ಕಾರ್ಯಕ್ರಮಗಳು ನಡೆಯುವುದೇ ವಿರಳ. ಚಾತಕ ಪಕ್ಷಿಯಂತೆ ಎಲ್ಲಿಯಾದರೂ ಯಾವುದಾದರೂ ಒಳ್ಳೆಯ ಕಾರ್ಯಕ್ರಮಗಳು ನಡೆಯಬಹುದೇ ಎಂದು ಕಣ್ಣು ಕಿವಿಗಳು ಹಪಹಪಿಸುತ್ತಿರುತ್ತವೆ. ಏನೂ ಇಲ್ಲದೆಯೂ ಬದುಕಬಹುದು ಎನ್ನುವುದು ಸತ್ಯ. ಆದರೂ ಮನಸ್ಸಿಗೆ ಕೆಲವೊಮ್ಮೆ ಬೇಸರ ಕವಿದುಕೊಂಡಾಗ , ಈ ಮಬ್ಬನ್ನು ಕಳೆಯುವ ಯಾವುದಾದರೂ ಒಂದು ಏನಾದರೂ ಒಂದರ ಅಗತ್ಯವಿರುತ್ತದೆ. ಈ ವಾರ ಅಂತಹದೊಂದು ಅವಕಾಶ ಒದಗಿ ಬಂದಿತು. </b><br />
<b><br />
</b><br />
<b>ಓಡಿಹೋದ ಚಳಿ ಮತ್ತೆ ಕಾಣಿಸಿಕೊಳ್ಳುತ್ತಿದೆ. ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಂತೆ ಅಲ್ಲ .ಮೈಯನ್ನು ಗಡಗಡ ನಡುಗಿಸುವ ಚಳಿ ಕಾಣಿಸಿಕೊಂಡಿಲ್ಲ. ಆದರೆ ಇದೆ. ಸಂಜೆಯಾಗುತ್ತಲೇ ದೇಹವಿಡೀ ತಂಪಾಗುವ ಹಾಗೆ., ಮನೆಯ ನೆಲವೆಲ್ಲಾ ತಣ್ಣಗಾಗುವ ಹಾಗೆ, ಚಳಿ ಕಾಣಿಸಿಕೊಂಡಿದೆ. ಕಂಬಳಿ ಹೊದ್ದು ಮಲಗುವ ಅಭ್ಯಾಸವೇ ಇಲ್ಲದ ನಾನು ಈಗ ಅದನ್ನು ದಿನನಿತ್ಯ ಹೊದ್ದು ಮಲಗಬೇಕಾಗಿದೆ. ಇಬ್ಬನಿ ಮಾತ್ರ ಕಾಣಿಸುತ್ತಿಲ್ಲ. ಇಬ್ಬನಿ ಇಲ್ಲದಿದ್ದರೆ ಮುಂದಿನ ವರುಷ ಮಳೆ ಕಡಮೆಯಾಗುವುದಂತೆ. </b><br />
<b><br />
</b><br />
<b>ಮೊನ್ನೆ ಬುಧವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಒಂದು ಅಪೂರ್ವವಾದ ಕಾರ್ಯಕ್ರಮ ನಡೆಯಿತು. ಇಲ್ಲಿನ ಏಕತಾನತೆಗೆ ಬೇಸತ್ತು ಗೆಳೆಯರೊಡನೆ ಕಾರಿನಲ್ಲಿ ಅಲ್ಲಿಗೆ ಹೊರಟೆವು. ಸುಮಾರು ಇಪ್ಪತ್ತೆರೆಡು ತಬಲಾ ವಾದಕರು ಒಂದೇ ವೇದಿಕೆಯಲ್ಲಿ ತಮ್ಮ ಕಲಾ ಪ್ರದರ್ಶನವನ್ನು ನೀಡುವ ಕಾರ್ಯಕ್ರಮ "ತಬಲಾ ಫೀಲಿಯಾ". ಸದ್ಯಕ್ಕೆ ಅಮೆರಿಕಾದಲ್ಲಿರುವ ಸಮೀರ್ ಚಟರ್ಜಿ ತಮ್ಮ ಎಲ್ಲಾ ಶಿಷ್ಯರನ್ನು ಕರೆದುಕೊಂಡು ಬಂದು ಈ ಕಾರ್ಯಕ್ರಮ ನೀಡಿದ್ದರು. ಇವರಲ್ಲಿ ಎಂಟು ಜನ ವಿದೇಶಿಯರು, ಎಂಟು ಜನ ಪಶ್ಚಿಮ ಬಂಗಾಳದವರು ಮತ್ತು ಉಳಿದ ಆರು ಜನ ನಮ್ಮ ಕನ್ನಡಿಗರು. ಮೂರು ಸಾಲಿನಲ್ಲಿ ಕುಳಿತು ವಿಶಿಷ್ಟವಾದ ಸಂಗೀತ ಸಂಯೋಜನೆಯಿಂದ ಅದ್ಭುತವಾದ ಕಾರ್ಯಕ್ರಮ ನೀಡಿದರು. ಪ್ರಾರಂಭದಲ್ಲಿ ಶ್ರೀ ಅಶೋಕ ಹುಗ್ಗಣ್ಣವರ್ರವರ ಮತ್ತು ಶ್ರೀಮತಿ ಪಿಯು ಚಟರ್ಜಿಯವರ ಸಂಗೀತ ಕಾರ್ಯಕ್ರಮವಿತ್ತು. ನಂತರ ಒಂದು ಗಂಟೆಯ ಕಾಲ ತಬಲಾ ವಾದನ. ಮನುಷ್ಯನ ಬದುಕಿನ ನಾಲ್ಕು ಅವಸ್ಥೆಗಳಾದ -ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸವೆಂಬ ಈ ನಾಲ್ಕು ಅವಸ್ಥೆಗಳನ್ನು ಸಂಗೀತದಲ್ಲಿ ಅಳವಡಿಸಿಕೊಂಡು ವಿಭಿನ್ನ ಸ್ವರಗಳಿಂದ ಅದನ್ನು ಮನದಟ್ಟಾಗುವಂತೆ ಕಾರ್ಯಕ್ರಮವನ್ನು ರೂಪಿಸಿದ್ದರು. ಆಶ್ಚರ್ಯವೆಂದರೆ ಪ್ರತಿಯೊಬ್ಬರ ಬಳಿಯಿದ್ದ ಒಂದೊಂದು ತಬಲಾವೂ ಒಂದೊಂದು ರೀತಿಯ ನಾದವನ್ನು ಹೊರಡಿಸುತ್ತಿತ್ತು. ಹಿನ್ನಲೆಯಲ್ಲಿ ಇಬ್ಬರು ಗಾಯಕಿಯರು ಮತ್ತು ಇಬ್ಬರು ಗಾಯಕರು ಸಹಕರಿಸಿದ್ದರು. ಉಪನಿಷತ್ತಿನ ಕೆಲವು ಶ್ಲೋಕಗಳನ್ನು ಮತ್ತು ಆಲಾಪನೆಯನ್ನು ಹಿತವಾಗಿ ಹಾಡುತ್ತಿದ್ದರು. ಅಲ್ಲಿ ಕಳೆದ ಮೂರುಗಂಟೆ ವ್ಯರ್ಥವಾಗಲಿಲ್ಲವೆಂದೆನಿಸಿತು. </b><br />
<b><br />
</b><br />
<b>ಮುಂದಿನ ವಾರ ನಮ್ಮ ಕುಪ್ಪಳ್ಳಿಗೆ ಹೋಗಬೇಕು. ಕುವೆಂಪು ಹಬ್ಬವಿದೆ. (ಡಿ.೨೯ ಮತ್ತು ೩೦)</b><br />
<b><br />
</b><br />
<b>ಕಳೆದವಾರದ ಓದು. :೧. ಸಂಗೀತ ಜೀವನ ತಪಸ್ಯಾ: ದ.ಸ.ಗರುಡ .(೨೭೭ಪು). ೨. ಸಂಗೀತ ಸಮಯ : ಎಸ್.ಕೃಷ್ಣಮೂರ್ತಿ. (೩೪೯ಪು) . ೩. ಸಂಗೀತ ಸಾಮ್ರಾಜ್ಞಿ ಎಂ.ಎಸ್-ಸಾಕೃರಾಮಚಂದ್ರರಾವ್ (೧೦೬) ೪, ನಾ ಕಂಡ ಕಲಾವಿದರು-ವಾಸುದೇವಾಚಾರ್ಯ (೧೩೫ಪು) ೫, ನನ್ನ ರಸಯಾತ್ರೆ- ಮಲ್ಲಿಕಾರ್ಜುನ್ ಮನ್ಸೂರ್ (೧೧೨ಪು)</b>nagaraja raohttp://www.blogger.com/profile/09150767551244015450noreply@blogger.com0tag:blogger.com,1999:blog-380114554757439625.post-49883815158454557902010-12-17T07:26:00.000-08:002010-12-17T07:26:35.377-08:00ಕಾಣದಂತೆ ಮಾಯವಾಯಿತು- ಚಳಿ<b><span class="Apple-style-span" style="color: red;">ಕಾಣದಂತೆ ಮಾಯವಾಯಿತು- ಚಳಿ</span>.</b><br />
<b><br />
</b><br />
<b>ಈಗ ಹತ್ತು ಹನ್ನೆರೆಡು ದಿನಗಳಿಂದ ನನ್ನೂರಿಗೆ ಮಳೆಯಿಂದ ಮುಕ್ತಿ ಸಿಕ್ಕಿದೆ. ಕೃಷಿಕರೆಲ್ಲರೂ ನೆಮ್ಮದಿಯಿಂದ ತಮ್ಮ ಅಡಿಕೆ ಮತ್ತು ಗದ್ದೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಚಳಿಗಾಲದ ಆರಂಭದ ದಿನಗಳಲ್ಲಿ ಬೆಳಿಗ್ಗೆ ಎಂಟರವರೆಗೆ ಊರನ್ನು ಆವರಿಸಿಕೊಂಡಿದ್ದ ಚಳಿ ಮಾತ್ರ ಈಗ ಎರಡು ದಿನಗಳಿಂದ ಕಾಣೆಯಾಗಿದೆ. ಬೆಳಿಗ್ಗೆ ಆರರವರೆಗೆ ಮಾತ್ರ ಸ್ವಲ್ಪ ಇಬ್ಬನಿ ಕಾಣಿಸಿಕೊಂಡರೂ ನಂತರ ಪೂರ್ಣವಾಗಿ ಮಾಯವಾಗಿ ಹೋಗಿಬಿಡುತ್ತದೆ. ಚಳಿ ಕಡಮೆಯಾದರೆ , ಇಬ್ಬನಿ ಸುರಿಯುವುದು ಕಡಮೆಯಾದರೆ ಮುಂದಿನ ವರ್ಷ ಮಳೆ ಕಡಮೆ ಎಂಬ ನಂಬಿಕೆ ಇಲ್ಲಿಯವರದು. ಕಳೆದ ವರ್ಷ ಚಳಿಗಾಲವೇ ಇರಲಿಲ್ಲ. ಕೇವಲ ಐದು ದಿನ ಮಾತ್ರ ಚಳಿ ಕಾಡಿತ್ತು. ಜಾತ್ರೆಯ ಸಮಯ ಕಂಬಳಿಯ ರಾಶಿ ಹೊತ್ತು ಕೊಂಡು ಬಂದವರು ನಿರಾಶರಾಗಿ ಹಾಗೆಯೇ ಆ ರಾಶಿಯನ್ನು ಹೊತ್ತುಕೊಂಡು ಮರಳಿ ತಮ್ಮೂರಿಗೆ ಹೋಗಿದ್ದರು. ಈ ಬಾರಿಯೂ ಹೀಗೇ ಆಗಬಹುದು ಎಂಬ ನಿರೀಕ್ಷೆ ಎಲ್ಲರದೂ. </b><br />
<b><br />
</b><br />
<b>ಜಾತ್ರೆ ಬರುತ್ತಿದೆ. ಎಳ್ಳಮಾವಸ್ಯೆಯ ಸ್ನಾನ ಮಾಡಲು ಎಲ್ಲಾ ಪಾಪಿಗಳೂ ಸಿದ್ಧರಾಗುತ್ತಿದ್ದಾರೆ. ಆ ದಿನ ರಾಮಕುಂಡದಲ್ಲಿ ಮುಳುಗಿದರೆ ಸರ್ವ ಪಾಪವೂ ಪರಿಹಾರವಾಗುತ್ತದೆ ಎಂಬ ವಿಶ್ವಾಸ ಊರಜನರಲ್ಲಿದೆ. ಹಾಗಾಗಿ ಬೆಳಿಗ್ಯೆ ಎಲ್ಲರೂ ಸರದಿಯಲ್ಲಿ ಒಂದು ಮುಳುಗು ಹಾಕಲು ನಿಂತಿರುತ್ತಾರೆ. ಒಂದೇ ಮುಳುಗು ಮಾತ್ರ. ಏಕೆಂದರೆ ಉಳಿದ ಪಾಪಿಗಳಿಗೂ ಅವಕಾಶ ಸಿಗಬೇಕಲ್ಲ. ಪೋಲಿಸ್ ಆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಇತ್ತ ಹರಿಯುವ ನದಿಯಲ್ಲಿ ನೀವು ಎಷ್ಟು ಹೊತ್ತು ಈಜಾಡಿದರೂ ಚಿಂತಿಲ್ಲ. ಆದರೆ ರಾಮಕುಂಡದಲ್ಲಿ ಆ ದಿನ ಒಂದೇ ಮುಳುಗು. ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ನಾನೂ ಕಾಯುತ್ತಿದ್ದೇನೆ -ಮನೆಯ ಚಿಕ್ಕ ಮಕ್ಕಳ ಜತೆಯಲ್ಲಿ ಸೇರಿ ಬೀದಿ ತುಂಬಾ ತಿರುಗಬೇಕು. ರಸ್ತೆ ಬದಿಯಲ್ಲಿ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರು ಈಗಲೇ ತಮ್ಮ ತಮ್ಮ ವ್ಯಾಪಾರದ ಸ್ಥಳಗಳನ್ನು ಗುರುತಿಸಿಕೊಂಡು ಗಡಿ ನಿರ್ಧರಿಸಿ ತಮ್ಮ ಪತಾಕೆಯಂತೆ ಒಂದು ಹಗ್ಗವನ್ನು ಕಟ್ಟಿ ಹೋಗಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ತಮ್ಮ ವಸ್ತುಗಳನ್ನು ತಂದು ಅಲ್ಲಿ ಹರಡಿ ಬಾಯಿಗೆ ಕೆಲಸಕೊಡುತ್ತಾರೆ. ಅವರ ಅಂಗಡಿಗೆ ವ್ಯಾಪಾರಕ್ಕೆ ಬರುವ ಹಳ್ಳಿಗರ ಚೌಕಾಶಿ ನೋಡಲು ಬಹಳ ಖುಷಿಯಾಗುತ್ತದೆ. ವ್ಯಾಪಾರಿ ಹೇಳಿದ ಬೆಲೆಯನ್ನು ಯಾರೂ ಕೊಡುವುದೇ ಇಲ್ಲ. ಹಾಗೆ ಕೊಟ್ಟರೆ ಅವನು ಮಂಗ . ಅವನು ಹೇಳಿದ್ದಕ್ಕಿಂತ ಕಡಮೆ ಕೊಟ್ಟರೆ ಮಾತ್ರ ಅವನು ಬುದ್ಧಿವಂತನೆನಿಸಿಕೊಳ್ಳುತ್ತಾನೆ. </b><br />
<b><br />
</b><br />
<b>ಕಳೆದ ವರ್ಷ ಹೀಗಾಯಿತು. ನನ್ನ ಗೆಳೆಯರೊಬ್ಬರ ಅಂಗಡಿಯ ಎದುರು ಒಬ್ಬ ವ್ಯಾಪಾರಿ ದೊಡ್ಡದೊಡ್ಡ ಪೋಸ್ಟರ್ಗಳನ್ನು ಹರಡಿಕೊಂಡು ಕುಳಿತುಕೊಂಡಿದ್ದ. ಅವನ ವ್ಯಾಪಾರದ ರೀತಿಯನ್ನು ನೋಡುತ್ತಾ ನಾನೂ ಅಲ್ಲಿ ನನ್ನ ಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದೆ. ಸಂಜೆಯ ವೇಳೆ ಕಾಲೇಜು ಹುಡುಗಿಯರ ದಂಡು ಒಂದು ಬಂದಿತು. ಆ ಪೋಸ್ಟರ್ಗಳನ್ನು ನೋಡುತ್ತಲೇ ಅಯ್ಯೋ ಹೃತಿಕ್, ಶಾರೂಕ್ ಎಂದು ಸಂಭ್ರಮಿಸಿತ್ತಿರುವಾಗಲೇ ರಾಮಚಂದ್ರಾಪುರ ಮಠದ ಇಬ್ಬರು ಮಾಣಿಗಳೂ ಅಲ್ಲಿಗೆ ಬಂದರು. ಆದರೆ ಅವರು ಅಪ್ಪಿ ತಪ್ಪಿಯೂ ಸಿನಿಮಾನಟರ ಪೋಸ್ಟರ್ಗಳನ್ನು ನೋಡಲೇ ಇಲ್ಲ. ಐಶ್ವರ್ಯಾ, ಕರೀನಾ ಪೋಸ್ಟರ್ ಅವರನ್ನು ಸೆಳೆಯಲೇ ಇಲ್ಲ. ಅಲ್ಲಿದ್ದ ದೇವರ ಪೋಸ್ಟರ್ಗಳ ಮೇಲೆಯೇ ಅವರ ಗಮನ. ಅದರಲ್ಲಿ ಎರಡು ಪೋಸ್ಟರ್ಗಳನ್ನು ಆರಿಸಿ ದುಡ್ಡುಕೊಟ್ಟು ಹೊರಟುಹೋದರು. ಒಂದು ಲೋಕಕ್ಕೆ ಪೂರ್ಣ ಕುರುಡರಾದ ಇವರ ವರ್ತನೆ ಕಂಡ ನನಗೆ ಅನಿಸಿದ್ದು- ಹೀಗೂ ಉಂಟೇ? ಇಂತಹ ಜಾತ್ರೆ ಜನವರಿ ೪ ರಂದು. ನಾನೂ ನನ್ನ ಮೊಮ್ಮಕ್ಕಳೂ ಕಾದು ಕುಳಿತಿದ್ದೇವೆ. </b><br />
<b><br />
</b><br />
<b>ಕಳೆದವಾರ ಊರಿನ ನಟಮಿತ್ರರು ಕಾರ್ನಾಡರ ಯಯಾತಿಯನ್ನು ಪ್ರದರ್ಶಿಸಿದರು. ಸಾಗರದ ಎಸ್. ಮಾಲತಿಯ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ತೃಪ್ತಿಕರವಾಗಿತ್ತು. ಮುಖ್ಯಪಾತ್ರಗಳಲ್ಲಿ ಸಂದೇಶ್ ಜವಳಿ ಮತ್ತು ನಿಲೇಶ್ ಜವಳಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದರು ಎಂದೇ ಹೇಳಬೇಕು. ಇಬ್ಬರ ಅಭಿನಯ ಪ್ರೇಕ್ಷಕರ ಕರತಾಡನವನ್ನು ಗಳಿಸಿತು. ಆದರೆ ಸ್ತ್ರೀಪಾತ್ರಗಳು ಸೋತು ಹೋದವು. ಒಳ್ಳೆಯ ನಟಿಯರ ಅಭಾವದಿಂದಾಗಿ ನಿರ್ದೇಶಕರು ಕಾಲೇಜಿನ ಎಳೆಯ ವಿದ್ಯಾರ್ಥಿನಿಯರನ್ನು ಆರಿಸಿಕೊಂಡಿದ್ದರು. ಅವರ ಪಾತ್ರಕ್ಕೂ ಪ್ರಾಯಕ್ಕೂ ಹೊಂದಾಣಿಕೆಯಾಗದೇ ಹೋಯಿತು. </b><br />
<b><br />
</b><br />
<b>ವಾರದ ಓದು: ಶ್ರೀ ಸದಾಶಿವ ಯೋಗಿಗಳ "ಸತ್ಯದ ಹುಡುಕಾಟ(೨೬೯ಪು) ಮತ್ತು ಸಂಗೀತ ಸಂವಾದ-ಭಾಸ್ಕರ್ ಚಂದಾವರ್ಕರ್ (೨೦೨ಪು). </b>nagaraja raohttp://www.blogger.com/profile/09150767551244015450noreply@blogger.com0tag:blogger.com,1999:blog-380114554757439625.post-12888134533524810322010-12-10T21:42:00.000-08:002010-12-10T21:42:52.492-08:00ಬಿಟ್ಟೆನೆಂದರೂ ಬಿಡದ ಈ ಮಾಯೆ<b><span class="Apple-style-span" style="color: red;">ಬಿಟ್ಟೆನೆಂದರೂ ಬಿಡದ ಈ ಮಾಯೆ </span></b><br />
<b><br />
</b><br />
<b>ನಿನ್ನೆ ಶುಕ್ರವಾರ ಅನಿವಾರ್ಯವಾಗಿ ಮತ್ತೆ ಮಂಗಳೂರಿಗೆ ಹೋಗಬೇಕಾಯಿತು. ೨೦೦೬ರಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರು ಮಾಡಿ ಮಾರುತ್ತಿದ್ದ ಒಂದು ಗುಂಪನ್ನು ಮಂಗಳೂರು ಪೋಲಿಸರು ಬಂಧಿಸಿದ್ದರು. ಅದರಲ್ಲಿ ನಮ್ಮ ಕಾಲೇಜಿನ ಮುದ್ರೆಯಿರುವ ಒಂದು ಅಂಕಪಟ್ಟಿಯೂ ಇತ್ತು. ಅದರ ಮಹಜರಿಗಾಗಿ ಬಂದ ಪೋಲಿಸರಿಗೆ ಅದು ನಕಲಿ ಎಂದು ಹೇಳಿಕೆ ಕೊಟ್ಟಿದ್ದೆ. ನಾಲ್ಕು ವರುಷದ ನಂತರ ಈಗ ಈ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅದರ ಸಾಕ್ಷಿ ಹೇಳಲು ನಾನು ನ್ಯಾಯಾಲಯಕ್ಕೆ ಹೋಗಬೇಕಾಗಿ ಬಂತು. ಬಹು ಕಾಲದ ನಂತರ ಮತ್ತೆ ಮಂಗಳೂರು ಭೇಟಿ ಹೀಗೆ ಆಯಿತು.</b><br />
<b><br />
</b><br />
<b>ಮಂಗಳೂರು ಪ್ರವೇಶಿಸುತ್ತಲೇ ಏನೋ ಒಂದು ತರದ ಅನುಭವ. ಮೂವತ್ತೇಳು ವರುಷಗಳ ಕಾಲ ಇದ್ದ ಈ ಊರನ್ನು ಬಿಟ್ಟು ಈಗ ಹುಟ್ಟೂರಿಗೆ ಹೋಗಿ ನೆಲೆನಿಂತರೂ, ಮತ್ತೆ ಮಂಗಳೂರು ನನ್ನ ಮೇಲೆ ಮೋಡಿ ಮಾಡಿತು. ಒಂದು ಕ್ಷಣ ನಾನು ಈ ಊರನ್ನು ಬಿಟ್ಟು ತಪ್ಪು ಮಾಡಿದೇನೋ ಎಂದೆನಿಸಿತು. ಅಗಾಧವಾಗಿ ದಿನದಿಂದ ದಿನಕ್ಕೆ ಗುರುತೇ ಸಿಗದಂತೆ ಬದಲಾಗುತ್ತಿರುವ ಮಂಗಳೂರಿನ ಮಾಯೆಯೇ ಅಂತಹದು. ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಮೌಲ್ಯಮಾಪನ ಈಗ ನಡೆಯುತ್ತಿದೆ. ಈ ಕಾರಣದಿಂದ ನನ್ನ ಕನ್ನಡ ಅಧ್ಯಾಪಕರನ್ನು ಹುಡುಕಿ ಎಸ್ಡಿಎಂ ಕಾಲೇಜಿಗೆ ಹೋಗಿ ಮೂರು ಮಾಳಿಗೆಯನ್ನು ಏರಿ ಏದುಸಿರು ಬಿಡುತ್ತಾ ನನ್ನವರನ್ನು ನೋಡುತ್ತಾ ನಿಂತಾಗ ಹತ್ತಿ ಬಂದ ಆಯಾಸವೆಲ್ಲಾ ಕ್ಷಣಮಾತ್ರದಲ್ಲಿ ಪರಿಹಾರವಾಗಿತ್ತು. ಎಲ್ಲರೂ ನನ್ನವರೇ. ಬಾಯಿತುಂಬಾ ಮಾತನಾಡಿಸುವವರು. ಅವರನ್ನೆಲ್ಲಾ ನೋಡಿ ಮಾತನಾಡಿಸಿದಾಗ ನನ್ನ ಊರಿನ ಒಂಟಿತನ ನೆನಪಿಗೆ ಬಂದಿತು. ಇಲ್ಲಿಯೇ ಇದ್ದಿದ್ದರೆ ಇವರೆನ್ನೆಲ್ಲಾ ಆಗಾಗ ನೋಡುತ್ತಾ ಇರಬಹುದಿತ್ತಲ್ಲ ಎಂದೆನಿಸಿತು. </b><br />
<b><br />
</b><br />
<b>ಮಂಗಳೂರಿನ ಮತ್ತೊಂದು ಆಕರ್ಷಣೆಯೆಂದರೆ ನಮ್ಮ ಅಶೋಕರ ಅತ್ರಿ ಪುಸ್ತಕ ಮಳಿಗೆ. ಮಂಗಳೂರಿಗೆ ಹೋದಾಗಲೆಲ್ಲಾ ಅಲ್ಲಿಗೆ ಹೋಗದಿದ್ದರೆ ನನ್ನ ಮಂಗಳೂರು ದರ್ಶನ ಅಪೂರ್ಣವಾಗಿರುತ್ತದೆ. ವ್ರತದಂತೆ ಅಲ್ಲಿಗೆ ಹೋಗಿಯೇ ಹೋಗುತ್ತಿರುತ್ತೇನೆ. ಅವರ ಮಳಿಗೆಯಲ್ಲಿರುವ ಪುಸ್ತಕಗಳ ರಾಶಿ ನೋಡಿದಾಗ ಮಾಲಿಗೆ ಹೋಗಿ ಕಕ್ಕಾಬಿಕ್ಕಿಯಾಗುವ ಮಗುವಿನಂತೆ ನನ್ನ ಮನಸ್ಸು ಗೊಂದಲಕ್ಕೀಡಾಗುತ್ತದೆ. ಯಾವ ಪುಸ್ತಕ ಆರಿಸುವುದು ಎಂಬ ಸಮಸ್ಯೆ ಕಾಡುತ್ತದೆ. ಎಲ್ಲವೂ ಬೇಕೆನಿಸುತ್ತದೆ. ನಿನ್ನೆಯೂ ಅಲ್ಲಿಗೆ ಹೋಗಿ ಹೊಸಪುಸ್ತಕಗಳನ್ನು ಕೊಂಡು ಬಂದೆ. ಮತ್ತೆ ಒಂದು ತಿಂಗಳು ಚಿಂತೆಯಿಲ್ಲ ಎಂಬ ಸಮಾಧಾನ ಈಗ. </b><br />
<b><br />
</b><br />
<b> ಮಂಗಳೂರಿಗೆ ಬಂದಾಕ್ಷಣ ಮನಸ್ಸಿನಲ್ಲಿ ಆವರಿಸಿಕೊಂಡ ಮಾಯೆ ಊರಿನತ್ತ ಹೊರಟಾಗ ನಿಧಾನವಾಗಿ ಕರಗಲಾರಂಭಿಸಿತು. ಮತ್ತೆ ನನ್ನೂರೇ ಒಳ್ಳೆಯದು. ಏನಿದ್ದರೂ ಇದೇ ಸ್ವರ್ಗವೆಂದೆನಿಸಿತು. ಅಲ್ಲಿಗೆ ಬಂದಾಗಲೆಲ್ಲಾ ವಿಶ್ವಾಮಿತ್ರನ ಮುಂದೆ ಕುಣಿದ ಮೇನಕೆಯಂತೆ ಈ ಮಾಯೆ ನನ್ನನ್ನು ಆವರಿಸಿಕೊಳ್ಳುತ್ತಿರುತ್ತದೆ. ಅದರಿಂದ ಪಾರಾಗಿ ಬಂದ ನಂತರ ನನ್ನೂರು ಹೊಸತಾದ ಬಣ್ಣದಿಂದ ಕಂಗೊಳಿಸುತ್ತಿರುತ್ತದೆ.. </b><br />
<b><br />
</b><br />
<b>ಈಗ ನಿನ್ನೆಯ ನೆನಪುಗಳು ಉಳಿದುಕೊಂಡಿವೆ. ಕೈಯಲ್ಲಿ ನಿನ್ನೆ ಕೊಂಡು ತಂದ ಹೊಸ ಪುಸ್ತಕಗಳಿವೆ. ಮನಸ್ಸು ತಳಮಳವನ್ನು ಮೆಟ್ಟಿನಿಂತಿದೆ. ಏನೋ ಲವಲವಿಕೆ ಮೂಡಿದೆ. ಈ ದಿನ ಆಗಸದಲ್ಲಿ ಮೋಡ ಆವರಿಸಿಕೊಂಡು ಹಗಲಿನಲ್ಲಿ ಮಬ್ಬುಗತ್ತಲೆ ತುಂಬಿಕೊಂಡರೂ ಖುಷಿಯಲ್ಲಿದ್ದೇನೆ.</b><br />
<b><br />
</b><br />
<b>ವಾರದ ಓದು.</b><br />
<b>ಗಾನಗಂಗೆಯಾದ ಗಂಗೂಬಾಯಿ ಹಾನಗಲ್ರವರ ಕುರಿತಾದ ಎರಡು ಪುಸ್ತಕಗಳನ್ನು ಓದಿದೆ. ೧, ನನ್ನ ಬದುಕಿನ ಹಾಡು-ಎನ್ಕೆ (೧೦೬) ಮತ್ತು ೨. ಗಂಗಾವತರಣ- ದಮಯಂತಿ ನರೇಗಲ್ಲ. (೧೫೫). ಎರಡೂ ಪುಸ್ತಕಗಳನ್ನು ಸಂಗೀತ ಪ್ರೇಮಿಯಾದ ನನ್ನ ಆತ್ಮೀಯರಾದ ಶ್ರೀ ಮಹಾಲಿಂಗಭಟ್ಟರಿಗೆ ದಾನ ಮಾಡಿದೆ. ಸತ್ಪಾತ್ರರಿಗೆ ಕೊಟ್ಟ ಸಮಾಧಾನ ನನಗೆ. </b>nagaraja raohttp://www.blogger.com/profile/09150767551244015450noreply@blogger.com1tag:blogger.com,1999:blog-380114554757439625.post-22880407813808622622010-12-04T07:47:00.000-08:002010-12-04T07:47:11.038-08:00ಒಮ್ಮೆ ಹಾಡಿದ ಹಾಡು ಮತ್ತೊಮ್ಮೆ<b>ಒಮ್ಮೆ ಹಾಡಿದ ಹಾಡನ್ನು ಮತ್ತೊಮ್ಮೆ ಹಾಡದಿರಲು ನಿರ್ಧರಿಸಿದ್ದೇನೆ. ಅಂದರೆ ನಾನು ಒಬ್ಬ ಗಾಯಕನೆಂಬ ಭ್ರಮೆ ಬೇಡ. ಈ ವಾರದ ನನ್ನ ಬರವಣಿಗೆಯ ಶೀರ್ಷಿಕೆ ಇದು ಅಷ್ಟೇ. ನನ್ನ ಬಳಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಮಿಕ್ಕ ಪುಸ್ತಕಗಳಿವೆ. ವೃತ್ತಿಗೆ ಸೇರಿದ ದಿನದಿಂದ ಪುಸ್ತಕ ಸಂಗ್ರಹಿಸಲು ಪ್ರಾರಂಬಿಸಿದೆ. ನನ್ನ ಗುರುಗಳಾದ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ತರಗತಿಯಲ್ಲಿ ’ ಓದಬೇಕ್ರಯ್ಯಾ. ಪ್ರಪಂಚದಲ್ಲಿ ಪ್ರತಿ ಸೆಕೆಂಡಿಗೆ ಇಷ್ಟು ಪುಸ್ತಕಗಳು ಅಚ್ಚಾಗುತ್ತಿವೆ. ಅಂದರೆ ನಿಮಿಷಕ್ಕೆ ಇಷ್ಟಾಯಿತು. ಗಂಟೆಗೆ ಇಷ್ಟಾಯಿತು. ನೀವು ಇದರಲ್ಲಿ ಎಷ್ಟು ಓದಲು ಸಾಧ್ಯ? ಆದ್ದರಿಂದ ಓದಿ . ಓದಿ ಎಂದು ಪ್ರೊತ್ಸಾಹಿಸುತ್ತಿದ್ದರು. ಯಾವುದೇ ಪಠ್ಯವನ್ನು ಮಾಡುವಾಗ ನಾನು ಅದರ ಮೂಲವನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದೆ. ಅದರ ಕುರಿತಾಗಿ ಬಂದಿರಬಹುದಾದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ಓದುತ್ತಿದ್ದೆ. ಅಲ್ಲಿಂದ ಪ್ರಾರಂಭವಾದ ನನ್ನ ಹವ್ಯಾಸ ಇವತ್ತಿಗೂ ಹೋಗಿಲ್ಲ. ಇಲ್ಲಿ ಸಣ್ಣದಾದ ಊರಲ್ಲಿ ಕುಳಿತುಕೊಂಡರೂ ತಿಂಗಳಿಗೆ ಏಳೆಂಟುಪುಸ್ತಕಗಳನ್ನು ತರಿಸಿಕೊಳ್ಳುತ್ತಿರುತ್ತೇನೆ. ಒಂದು ಊರಿನ ಮಾನಸಿಕ ಸ್ಥಿತಿಯಲ್ಲಿ ಅಳೆಯಬೇಕಾದರೆ ಅಲ್ಲಿನ ಪುಸ್ತಕದ ಅಂಗಡಿಗೆ ಹೋಗಬೇಕು. ಎಷ್ಟೆಷ್ಟು ಪುಸ್ತಕದ ಅಂಗಡಿಗಳು ಇರುತ್ತವೆಯೋ ಅಷ್ಟು ಆರೋಗ್ಯವಂತವಾಗಿ ಆ ಊರು ಸಮಾಜ ಇದೆ ಎನ್ನುವುದು ತಿಳಿಯುತ್ತದೆ. ವ್ಯಾಪಾರವಿಲ್ಲದೆ ಆ ಅಂಗಡಿಗಳು ಸೊರಗುತ್ತಿವೆ ಎಂದಾದರೆ ಊರಿಗೆ ಗ್ರಹಣ ಹಿಡಿಯುತ್ತಿದೆ ಎಂದೇ ಅರ್ಥ ಮಾಡಿಕೊಳ್ಳಬೇಕು. ಗ್ರಹಚಾರಕ್ಕೆ ನನ್ನೂರಿನಲ್ಲಿ ಒಳ್ಳೆಯ ಪುಸ್ತಕ ಭಂಡಾರವಿಲ್ಲ. ಹಾಗಾಗಿ ಮಂಗಳೂರಿನ ಅತ್ರಿಯಿಂದ ತಿಂಗಳಿಗೊಮ್ಮೆ ಪುಸ್ತಕ ತರಿಸಿಕೊಳ್ಳುತ್ತಿರುತ್ತೇನೆ.</b><br />
<b><br />
</b><br />
<b>ಮೂರು ತಿಂಗಳ ಹಿಂದೆ ಹೀಗಾಯಿತು. ಭೈರಪ್ಪನವರ ಕವಲು ಪ್ರಕಟವಾದಾಕ್ಷಣ ತರಿಸಿಕೊಂಡು ಓದಿದೆ. ಅದನ್ನು ಓದಿದನಂತರ ಅವರ ಹಿಂದಿನ ಕಾದಂಬರಿಗಳನ್ನು ಓದುವ ಹುಕ್ಕಿ ಬಂದಿತು. ಸರಿ . ಮತ್ತೆ ಅವರ ಹಳೆಯ ಕಾದಂಬರಿಗಳನ್ನು ಒಂದರ ನಂತರ ಒಂದರಂತೆ ಓದಲು ಪ್ರಾರಂಭಿಸಿದೆ. ಹೀಗೆ ನಾಲ್ಕು ಪುಸ್ತಕ ಓದಿದೆ. ಆಗ ನನ್ನ ಹೊಸ ಓದಿಗೆ ಅಡ್ಡಿಯಾಯಿತು. ಮತ್ತೆ ಮತ್ತೆ ಅವೇ ಎಂದೋ ಓದಿದ ಪುಸ್ತಕಗಳನ್ನು ಓದುತ್ತಿದ್ದೇನೆ. ಇದು ಸರಿಯಲ್ಲವೆಂದೆನಿಸಿತು. ಹಾಗಾಗಿ ಈಗ ಮತ್ತೆ ಹಳೆಯ ಪುಸ್ತಕಗಳನ್ನು ಓದುವುದನ್ನು ಬಿಟ್ಟಿದ್ದೇನೆ. ಒಮ್ಮೆ ಓದಿದ ಪುಸ್ತಕವನ್ನು ಇನ್ನು ಯಾವುದೇ ಕಾರಣಕ್ಕೆ ಮತ್ತೊಮ್ಮೆ ಓದಲಾರೆ ಎಂದು ನಿರ್ಧರಿಸಿದ್ದೇನೆ. ಓದಿಯಾದ ಪುಸ್ತಕಗಳನ್ನು ನಿರ್ಮೋಹದಿಂದ ಕೈಯೆತ್ತಿ ದಾನ ಮಾಡುತ್ತಿದ್ದೇನೆ. ಇದು ನನ್ನ ಅಂತಿಮ ಓದು. ಹಾಗಾಗಿ ಪುನರಾವರ್ತನೆಯಾಗದಂತೆ ಒಮ್ಮೆ ಓದಿ ಮುಗಿಸಬೇಕು. ಒಮ್ಮೆ ಹಾಡಿದ ಹಾಡು ಮತ್ತೆ ಹಾಡಬಾರದು. </b><br />
<b><br />
</b><br />
<b>ಈ ವಾರದ ಓದು. : ರವಿಬೆಳೆಗೆರೆಯವರ ಕಾಮರಾಜಮಾರ್ಗ (೪೦೨ಪು) ಮತ್ತು ರಥಬೀದಿ- ಶ್ರೀಧರ ಬಳೆಗಾರ (೧೫೩ಪು). </b>nagaraja raohttp://www.blogger.com/profile/09150767551244015450noreply@blogger.com1tag:blogger.com,1999:blog-380114554757439625.post-17349458189525357272010-11-28T00:25:00.000-08:002010-11-28T00:25:21.061-08:00ಕಭಿ ಖುಷಿ ಕಭಿ ಗಂ<b>ಕಭಿ ಖುಷಿ ಕಭಿ ಗಂ</b><br />
<b><br />
</b><br />
<b>ಕಳೆದ ವಾರದ ಏಳು ದಿನಗಳಲ್ಲಿ ಐದು ದಿನ ಸಂಜೆ ಮತ್ತೆ ಅದೇ ಮೋಡ ಮತ್ತು ಅದೇ ಮಳೆ. ಉಳಿದ ಎರಡು ದಿನಗಳಲ್ಲಿ ಸಂಜೆ ಕಾಣಿಸಿಕೊಂಡ ಬಿಸಿಲು ಮನಸ್ಸಿಗೆ ಎಷ್ಟು ಸಂತೋಷ ತಂದುಕೊಟ್ಟಿತು ಎಂದರೆ ದಿನಾ ಹೀಗೆ ಇರಬಾರದಾ ಎಂದೆನಿಸಿತು. ಮತ್ತೆ ನಾಳೆ ಹೇಗೋ ಏನೋ ಎಂಬ ಚಿಂತೆ ಕಾಡುತ್ತಿತ್ತು. ಅರ್ಥ ಮಾಡಿಕೊಳ್ಳಲಿಕ್ಕೂ ಸಾಧ್ಯವಿಲ್ಲದ ಹವಾಮಾನ ನಮ್ಮೆಲ್ಲರ ತಲೆಯನ್ನಂತೂ ತಿನ್ನುತ್ತಿದೆ. ಇಂತಹ ವಾತಾವರಣ ಮನಸ್ಸನ್ನು ಮುದುಡಿಸುತ್ತಿದೆ. ಖಿನ್ನತೆ ಆವರಿಸಿಕೊಳ್ಳುತ್ತಿದೆ. ಯಾವ ಕೆಲಸದಲ್ಲಿಯೂ ಉತ್ಸಾಹವಿರುವುದಿಲ್ಲ. ಬೆಳಿಗ್ಯೆ ಏಳುವಾಗಲೇ ಮೋಡ ತುಂಬಿದ ಆಕಾಶ ಕಂಡಾಗ ಯಾರಿಗಾದರೂ ಉತ್ಸಾಹ ಬರುವುದು ಹೇಗೆ?. ಮಳೆಗಾಲವಂತೂ ಅಲ್ಲ. ಈಗ ಯಾವತ್ತೂ ಮಳೆಗಾಲವೇ. ಪ್ರತಿದಿನದ ಪತ್ರಿಕೆಯಲ್ಲಿ ಹವಾಮಾನ ವರದಿ ನೋಡಿದಾಗ ಮತ್ತೆ ಮಳೆ ಬರುವ ಸಂಭವವುಂಟು ಎಂದು ತಿಳಿದಾಗ ಮತ್ತೆ ಮತ್ತೆ ಮನಸ್ಸು ಕುಸಿದುಹೋಗುತ್ತಿದೆ.</b><br />
<b><br />
</b><br />
<b>ಹೇಳಿ ಕೇಳಿ ನನ್ನೂರು ಅಂತಹ ದೊಡ್ಡ ಊರೇನೂ ಅಲ್ಲ. ಸಾಹಿತ್ಯಕ ಕಾರ್ಯಕ್ರಮಗಳಾಗಲೀ ಅಥವಾ ಬೇರೆ ಕಾರ್ಯಕ್ರಮಗಳು ನಡೆಯುವುದೇ ಕಷ್ಟದಲ್ಲಿ. ಸಾಂಸ್ಕೃತಿಕವಾಗಿ ಬಹಳ ಸಂಪನ್ನವಾಗಿರುವ ಊರು ಎಂದು ಒಂದು ಕಾಲದಲ್ಲಿ ಹೆಸರನ್ನು ಪಡೆದಿತ್ತು ನನ್ನೂರು. ಆದರೆ ಈಗ ಕಾಲ ಬದಲಾಗಿದೆ. ತಿಳಿದವರು, ಬುದ್ಧಿವಂತರು, ಓದುಗರು ಸೇರುವುದೇ ವಿರಳವಾಗಿ ಹೋಗಿದೆ. ಬೇರೆಯವರ ಮಾತುಗಳನ್ನು ಕೇಳುವ ಅವಕಾಶವನ್ನೇ ನಾವು ಕಳೆದುಕೊಂಡಿದ್ದೇವೆ. ಊರು ನಿಧಾನವಾಗಿ ಎಚ್ಚತ್ತುಕೊಳ್ಳುತ್ತದೆ ಮತ್ತು ರಾತ್ರಿ ಎಂಟುಗಂಟೆಯೆನ್ನುವಾಗ ನಿದ್ರಿಸಲು ಪ್ರಾರಂಭಿಸುತ್ತದೆ. ಧಾವಂತವಿಲ್ಲದ ನಡೆ ನನ್ನೂರಿನದು. ನಾವು ಹಾಗೇ ಆಗಿಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಬೆಳ್ಳಂಬೆಳಗ್ಗೆ ಎದ್ದು ಚಟುವಟಿಕೆಯಿಂದ ಬದುಕು ನಡೆಸುತ್ತಿದ್ದ ನಾನು ಈಗ ಹೊಂದಿಕೊಂಡಿದ್ದೇನೆ ನನ್ನೂರಿಗೆ. ಗಂಟೆ ಐದೂವರೆ ಎನ್ನುವಾಗ ಬೆಳಗಾಗುತ್ತದೆ. ಹಾಲು ಮತ್ತು ಪೇಪರ್ ತೆಗೆದುಕೊಂಡು ಬಂದರೆ ದಿನದ ವ್ಯವಹಾರ ಮುಗಿದ ಹಾಗೆ. ಮೊದಲಿನ ಪುಟದಿಂದ ಕೊನೆಯ ಪುಟದವರೆಗೆ ಎಲ್ಲಾ ಆರು ಪತ್ರಿಕೆಗಳನ್ನು ಓದುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಬೇರೆ ಯಾವುದೇ ಹೇಳಿಕೊಳ್ಳುವ ಕೆಲಸವಿಲ್ಲದೇ ಇದ್ದುದರಿಂದ ಅದರಲ್ಲಿಯೇ ಸುಖ ಹುಡುಕುತ್ತಿದ್ದೇನೆ.ಇದರ ಜತೆಗೆ ಮತ್ತುಳಿದ ಪುಸ್ತಕಗಳಿವೆ. ಹೊಸತಾಗಿ ಬರುತ್ತಿರುವ ಪುಸ್ತಕಗಳನ್ನು ತರಿಸಿಕೊಂಡು ಓದುವುದು ಮತ್ತು ಅದನ್ನು ಬೇರೆಯವರಿಗೆ ಹೇಳಿ ಅದನ್ನು ಓದುವಂತೆ ಮಾಡುವ ಪ್ರಯತ್ನ ಮಾಡುತ್ತಿರುತ್ತೇನೆ. </b><br />
<b><br />
</b><br />
<b>ಕಳೆದವಾರದ ಓದು:ಜೀವಧ್ವನಿ - ಸರ್ಜಾಶಂಕರ ಹರಳಿಮಠ. (೧೫೨ಪು) ಜೋಗಿಕಾಲಂ-ಜೋಗಿ(೨೧೬ಪು) ಕಾಸರಗೋಡಿನ ಸಣ್ಣಕತೆಗಳು (೩೫೩) ಮತ್ತು ಮರುಓದು ತೇಜಸ್ವಿಯವರ ಪಾಕಕ್ರಾಂತಿ (೮೯ಪು)</b>nagaraja raohttp://www.blogger.com/profile/09150767551244015450noreply@blogger.com0tag:blogger.com,1999:blog-380114554757439625.post-90977640775811869732010-11-17T23:29:00.000-08:002010-11-17T23:29:09.690-08:00ಮತ್ತದೇ ಬೇಸರ, ಅದೇ ಮೋಡ, ಅದೇ ಮಳೆ.<b>ಮತ್ತದೇ ಬೇಸರ, ಅದೇ ಮೋಡ, ಅದೇ ಮಳೆ.</b><br />
<b><br />
</b><br />
<b>ಪ್ರಾಯವಾಗುತ್ತಾ ಹೋದಂತೆ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ "ಹಿಂದೆಲ್ಲಾ ಹೀಗಿರಲಿಲ್ಲ" ಎಂದು ಹಪಹಪಿಸುವುದು ಸಾಮಾನ್ಯ. ಈಗಿನ ವಾತಾವರಣ ನೋಡಿ. ಮಳೆಗಾಲ ಸಾಧಾರಣವಾಗಿ ಅಕ್ಟೋಬರ್ ತಿಂಗಳಿಗೆ ಮುಗಿದು ಹೋಗುತ್ತಿತ್ತು. ನವೆಂಬರ್ ಡಿಸೆಂಬರ್ ತಿಂಗಳೆಂದರೆ ಥರಥರ ನಡುಗಿಸುವ ಚಳಿ ಕಾಣಿಸಿಕೊಳ್ಳಬೇಕಾಗಿತ್ತು. ಈಗ ಏನಾಗಿದೆ ಎಂದರೆ ಇನ್ನೂ ಮಳೆಗಾಲ ಮುಗಿದಿಲ್ಲ. ಪ್ರತಿದಿನವೂ ಮಳೆ ಮಳೆ. ಮನಸ್ಸನ್ನು ಮುದುಡಿಸುವ ಮಳೆ. ಬೇಸರವನ್ನು ಹೆಚ್ಚಿಸುವ ಮಳೆ. ಉತ್ಸಾಹವನ್ನು ಕುಗ್ಗಿಸುವ ಮಳೆ . ಹಗಲಿಡೀ ಮಬ್ಬುಗತ್ತಲೆ. ಮಧ್ಯಾಹ್ನವಾಗುತ್ತಲೇ ಸುರಿವ ಮಳೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆನ್ನುವಂತೆ , ಬೆಳೆದ ಬೆಳೆ ಎಲ್ಲವೂ ಮಳೆಯಲ್ಲಿ ಕರಗಿಹೋಗುತ್ತಿದೆ. ಮುಗ್ಗಲು ವಾಸನೆ ಎಲ್ಲೆಲ್ಲೂ ತುಂಬಿಕೊಂಡಿದೆ. ಹೊರಗಿನ ಮಬ್ಬುಗತ್ತಲೆ ನಮ್ಮ ಮನಸ್ಸನ್ನೂ ಆವರಿಸಿಕೊಂಡಿದೆ. </b><br />
<b><br />
</b><br />
<b>ಓದು ಮಾತ್ರ ಎಲ್ಲವನ್ನೂ ಮರೆಯಿಸುವ ಶಕ್ತಿಯನ್ನು ಪಡೆದುಕೊಂಡಿದೆ ಎಂದೆನಿಸುತ್ತದೆ. ಕುಗ್ಗಿದ ಮನಸ್ಸನ್ನು ಸ್ವಲ್ಪವಾದರೂ ಚೇತೋಹಾರಿಯಾಗಿಸುತ್ತದೆ. ಪ್ರತಿನಿತ್ಯ ಮನೆಗೆ ಬರುವ ಆರು ದಿನಪತ್ರಿಕೆಗಳು ಮನಸ್ಸನ್ನು ಮುದುಡಿಸುತ್ತವೆ. ಒಂದಾದರೂ ಒಳ್ಳೆಯ ಸುದ್ದಿಯಿಲ್ಲದೇ ಕೇವಲ ರಾಜಕೀಯ ಹಗರಣಗಳಿಂದ ಕೂಡಿ ನಾವು ಎಂತಹ ದಿನಗಳಲ್ಲಿ ಬದುಕುತ್ತಿದ್ದೇವೆ. ಇದನ್ನು ಬದಲಾಯಿಸುವುದಾದರೂ ಹೇಗೆ ಎನ್ನುವುದೇ ಅರ್ಥವಾಗುತ್ತಿಲ್ಲ. </b><br />
<b><br />
</b><br />
<b>ಬಹುಶಃ ಆಳುವವರು ಒಳ್ಳೆಯ ಪುಸ್ತಕಗಳನ್ನು ಓದದೇ ಇರುವುದರಿಂದ ಲೋಕದ ಪರಿಜ್ಞಾನವನ್ನು ಪಡೆದುಕೊಳ್ಳದೇ ಹೋದರು.ಸ್ವಾರ್ಥಿಗಳಾಗುತ್ತಾ ಹೋದರು. ಉಳಿದವರ ಬಗ್ಗೆ ಯೋಚಿಸದೇ ಕಲ್ಲುಮನಸ್ಸಿನವರಾಗಿ ಹೋದರು. ಓದುವ ಹವ್ಯಾಸವಿರುವವರು ಬೇರೆಯವರ ಮನಸ್ಸನ್ನು . ಬದುಕನ್ನು ಅರ್ಥಮಾಡಿಕೊಳ್ಳಲು ಸಮರ್ಥರಿರುತ್ತಾರೆ. ಹಾಗಾಗಿಯೇ ನಾನು ನನ್ನ ವಿದ್ಯಾರ್ಥಿಗಳಿಗೆ ದಿನನಿತ್ಯ ಒಂದು ಮೂವತ್ತು ಪುಟಗಳನ್ನಾದರೂ ಓದುವ ಹವ್ಯಾಸವಿಟ್ಟುಕೊಳ್ಳಿ ಎಂದು ಹೇಳುತ್ತಿದ್ದೆ. ನಾನಂತೂ ಆ ಅಭ್ಯಾಸವನ್ನು ಇವತ್ತಿನವರೆಗೂ ಬಿಟ್ಟಿಲ್ಲ. </b><br />
<b><br />
</b><br />
<b>ನಿವೃತ್ತನಾದರೂ ಸಮಯ ಕಳೆಯುವುದು ನನಗೆ ಸಮಸ್ಯೆಯಾಗಿಲ್ಲ. ಮನೆತುಂಬಾ ತುಂಬಿಕೊಂಡಿರುವ ಪುಸ್ತಕಗಳು ಮನಸ್ಸಿಗೆ ಖುಷಿಯನ್ನು ತಂದುಕೊಡುತ್ತಿವೆ. ಅವುಗಳ ಸಂಗದಲ್ಲಿ ಹೊತ್ತು ಹೋಗುತ್ತಿದೆ ನನಗೆ. ಓದುವುದರಲ್ಲಿಯೇ ಸಮಯದ ಪರಿಜ್ಞಾನವನ್ನು ಕಳೆದುಕೊಂಡ ನನ್ನನ್ನು ಹೊರಗೆ ಕವಿದ ಮಬ್ಬುಗತ್ತಲೆ ನಾಳಿನ ಬಗ್ಗೆ ಚಿಂತಿಸುವಂತೆ ಮಾಡುತ್ತಿವೆ. ನೆನೆದ ಪೈರನ್ನು ಉಳಿಸಲು ಹೆಣಗುತ್ತಿರುವ ರೈತನ ಬಗ್ಗೆ ಯೋಚಿಸುವಂತೆ ಮಾಡುತ್ತಿವೆ. ನಾಳೆ ಹೇಗೋ ಏನೋ ಎಂಬ ಭಯ ಕಾಡುತ್ತಿದೆ. ಮತ್ತೆ ಅಕಾಶ ತಿಳಿಯಾಗುವುದು ಯಾವಾಗ. ಮಳೆ ನಿಲ್ಲುವುದು ಯಾವಾಗ? ಒಂದೂ ಅರ್ಥವಾಗುತ್ತಿಲ್ಲ. </b><br />
<b><br />
</b><br />
<b>ವಾರದ ಓದು" ಜೋಗಿಯವರ "ಜರಾಸಂಧ", ವಿಕಾಸ ಸ್ವರೂಪರ Q & A (slumdog millionaire) english ಕಾದಂಬರಿ ಓದಿದೆ. ಜತೆಗೆ ಡಿ.ಕೆ.ಚೌಟರ "ಮಿತ್ತಬೈಲು ಯಮುನಕ್ಕ" ಕಾದಂಬರಿಯನ್ನು ಮರುಓದಿದೆ. </b>nagaraja raohttp://www.blogger.com/profile/09150767551244015450noreply@blogger.com0tag:blogger.com,1999:blog-380114554757439625.post-48864063071347563402010-11-10T20:50:00.000-08:002010-11-10T20:50:37.214-08:00ಒಂದು ಪದ್ಯ ಮತ್ತು ಅನುವಾದ.<br />
<br />
ಯಾವುದೋ ಒಂದು ಪುಸ್ತಕದಲ್ಲಿ ನನಗೆ ಈ ಪದ್ಯ ಸಿಕ್ಕಿತು. ಓದಿದಾಗ ನಾವು ಶಿಕ್ಷಕರು ಇದನ್ನು ಭಗವದ್ಗೀತೆಯಂತೆ ನಿತ್ಯ ಪಠನ ಮಾಡುತ್ತಿರಬೇಕು. ಮತ್ತು ತರಗತಿಗೆ ಹೋಗುವ ಮುನ್ನ ಇದರತ್ತ ಒಮ್ಮೆಯಾದರೂ ಕಣ್ಣು ಹಾಯಿಸುತ್ತಲೇ ಇರಬೇಕು ಎಂದೆನಿಸಿತು. ಅದನ್ನು ಚೆಂದವಾಗಿ ಪ್ರಿಂಟ್ ಮಾಡಿ ನನ್ನ ಟೇಬಲ್ ಮೇಲೆ ಇಟ್ಟುಕೊಂಡಿದ್ದೆ. ಪ್ರತಿಬಾರಿಯೂ ತರಗತಿಗೆ ಹೋಗುವ ಮುನ್ನ ಅದರತ್ತ ಕಣ್ಣು ಹಾಯಿಸಿ ಮತ್ತೆ ತರಗತಿಗೆ ಹೋಗುತ್ತಿದ್ದೆ. ಅದರ ಕನ್ನಡ ಅನುವಾದವನ್ನೂ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ಓದಿದ ನನ್ನ ಗೆಳೆಯರು ಅದರ ಒಂದು ಪ್ರತಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಅದನ್ನು ಇಲ್ಲಿ ಕೊಟ್ಟಿದ್ದೇನೆ.<br />
<br />
<span class="Apple-style-span" style="color: #e06666;"><b>My Prayer.</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b> O God, giver of the gift of Life,</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b>Bless me this day as I go to teach,</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b>I thank you for my career.</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b> And for the health and enthusiasm</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b> You have given me,</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b> I thank you for my teaching skill,</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b> And the joy I find in it.</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b>I thank you for my students,</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b>And friends, in whose company</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b>Joys are doubled, sorrows soothe,</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b>And weakness changed into strength.</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b> Help me to be cheerful to day,</b></span><br />
<span class="Apple-style-span" style="color: #e06666;"><b> </b></span><br />
<span class="Apple-style-span" style="color: #e06666;"><b> Kind and loving to my students,</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b> That they may be happy</b></span><br />
<span class="Apple-style-span" style="color: #e06666;"><b><br />
</b></span><br />
<span class="Apple-style-span" style="color: #e06666;"><b> In my company.</b></span><br />
<br />
<br />
<span class="Apple-style-span" style="color: #38761d;"><b>ಕನ್ನಡ ಅನುವಾದ:</b></span><br />
<span class="Apple-style-span" style="color: #38761d;"><b><br />
</b></span><br />
<span class="Apple-style-span" style="color: #38761d;"><b>ಬದುಕಿನ ದಾನ ನೀಡಿದ ದೈವವೇ,</b></span><br />
<span class="Apple-style-span" style="color: #38761d;"><b>ಪಾಠ ಹೇಳ ಹೊರಟ ನನ್ನನ್ನು ಆಶೀರ್ವದಿಸು.</b></span><br />
<span class="Apple-style-span" style="color: #38761d;"><b>ಈ ವೃತ್ತಿಗಾಗಿ ನಾನು ಸದಾ ಋಣಿ.</b></span><br />
<span class="Apple-style-span" style="color: #38761d;"><b><br />
</b></span><br />
<span class="Apple-style-span" style="color: #38761d;"><b> ನೀ ನೀಡಿದ ಉತ್ಸಾಹ ಮತ್ತು ಆರೋಗ್ಯಕ್ಕಾಗಿ,</b></span><br />
<span class="Apple-style-span" style="color: #38761d;"><b> ಪಾಠ ಹೇಳುವ ಕಲೆಗಾಗಿ</b></span><br />
<span class="Apple-style-span" style="color: #38761d;"><b> ಅದರಿಂದ ನಾ ಪಡೆವ ಆನಂದಕ್ಕಾಗಿ</b></span><br />
<span class="Apple-style-span" style="color: #38761d;"><b> ವಂದನೆಗಳು ನಿನಗೆ. </b></span><br />
<span class="Apple-style-span" style="color: #38761d;"><b><br />
</b></span><br />
<span class="Apple-style-span" style="color: #38761d;"><b>ನನ್ನ ಸಜ್ಜನ ವಿದ್ಯಾರ್ಥಿಗಳಿಗಾಗಿ ಕೃತಜ್ಞತೆಗಳು ನಿನಗೆ.</b></span><br />
<span class="Apple-style-span" style="color: #38761d;"><b> ಮತ್ತು ಗೆಳೆಯರಿಗಾಗಿ, ಯಾರ ಸಹವಾಸದಲ್ಲಿ</b></span><br />
<span class="Apple-style-span" style="color: #38761d;"><b> ಸಂತೋಷ ಇಮ್ಮಡಿಯಾಗಿ, ಕಷ್ಟಗಳು ಕರಗಿ</b></span><br />
<span class="Apple-style-span" style="color: #38761d;"><b> ಬಲಹೀನತೆಯು ಬಲವಾಗಿ ಬದಲಾಗಿದೆಯೊ ಅದಕ್ಕಾಗಿ;.</b></span><br />
<span class="Apple-style-span" style="color: #38761d;"><b><br />
</b></span><br />
<span class="Apple-style-span" style="color: #38761d;"><b>ಇಂದು ನನ್ನ ಮಕ್ಕಳ ಮುಖದಲ್ಲಿ ನಗು ಮಾಸದಿರಲಿ.</b></span><br />
<span class="Apple-style-span" style="color: #38761d;"><b> ಮಕ್ಕಳ ಮೇಲೆ ದಯೆ ಮತ್ತು ಪ್ರೀತಿ ಮಳೆಯಾಗಿ ಸುರಿಯಲಿ.</b></span><br />
<span class="Apple-style-span" style="color: #38761d;"><b> ಮತ್ತು ಅವರು ನನ್ನೊಂದಿಗೆ ಸಂತೋಷದಿಂದಿರಲಿ.</b></span><br />
<span class="Apple-style-span" style="color: #38761d;"><b> ಇದಿಷ್ಟನ್ನು ಮಾತ್ರ ಕರುಣಿಸು ತಂದೆಯೇ. </b></span><br />
<br />
ಇದನ್ನು ಬರೆದವರು ಯಾರು ಎನ್ನುವುದು ತಿಳಿದಿಲ್ಲ ಮತ್ತು ಈಗ ಇದನ್ನು ಯಾವ ಪುಸ್ತಕದಿಂದ ನಾನು ಬರೆದಿಟ್ಟುಕೊಂಡೆ ಎನ್ನುವುದೂ ನೆನಪಿಲ್ಲ.<br />
<br />
ಕಳೆದವಾರ ಉಡುಪಿಅ ಗುರುರಾಜ ಸನೀಲ್ ಇವರು ಬರೆದ "ಹಾವು ನಾವು" ಪುಸ್ತಕ ಓದಿದೆ. ಜತೆಗೆ Mark Haddon ಬರೆದ curious incident of the dog in the night time" ಓದಿದೆ. ಸಮಗ್ರ ಕುಂವೀ ಓದಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದೆನಿಸಿತು. ಸದ್ಯಕ್ಕೆ ನೂರೈವತ್ತು ಪುಟಗಳನ್ನು ಮಾತ್ರ ಓದಿದ್ದೇನೆ.nagaraja raohttp://www.blogger.com/profile/09150767551244015450noreply@blogger.com1tag:blogger.com,1999:blog-380114554757439625.post-46480957918768292442010-11-03T20:28:00.000-07:002010-11-03T20:28:24.851-07:00<b>ಸಂತೆಯಲ್ಲಿ ನಿಂತ ಸಂತ.</b><br />
<b><br />
</b><br />
<b>ಕಳೆದ ವಾರ ಯೋಚಿಸಿದಂತೆ ಮೂಡಬಿದ್ರೆಯ ನುಡಿಸಿರಿಗೆ ಹೋಗಿದ್ದೆ. ದಾರಿಯುದ್ದಕ್ಕೂ ಮೋಡ, ಮಳೆಯ ವಾತಾವರಣ. ಘಟ್ಟ ಇಳಿದು ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡುತ್ತಿದ್ದಂತೆ ಸ್ವಲ್ಪ ಬಿಸಿಲು ಕಾಣಿಸಿಕೊಂಡಿತು. ಮೂಡಬಿದ್ರೆ ಹಿತವಾದ ಬಿಸಿಲಿನಿಂದ, ಜನರ ಓಡಾಟದಿಂದ ತುಂಬಿಕೊಂಡಿತ್ತು. ಚಿತ್ರ ಕಲಾ ಪ್ರದರ್ಶನ ನೋಡಿ ಮತ್ತೆ ಪುಸ್ತಕದಂಗಡಿಗೆ ನುಗ್ಗಿದೆ. ಎಲ್ಲಿಹೋದರೂ ಜನ ಜನ ಜನ.ಶಾಲಾ ಮಕ್ಕಳು ಪ್ರತಿ ಮಳಿಗೆಯಲ್ಲಿ ತುಂಬಿಕೊಂಡಿದ್ದರು. ನನ್ನಲ್ಲಿ ಇಲ್ಲದ ಪುಸ್ತಕಗಳನ್ನು ಹುಡುಕುವುದೇ ಕಷ್ಟವಾಯಿತು. ಆಕೃತಿಯ ಮಳಿಗೆಯಲ್ಲಿ ಸಮಗ್ರ ಕುಂವೀ ಸಿಕ್ಕಾಗ ಸಂಭ್ರಮಗೊಂಡಿದ್ದೆ. ಇನ್ನು ಒಂದು ತಿಂಗಳು ಯೋಚನೆಯಿಲ್ಲ. ಏಕೆಂದರೆ ಸುಮಾರು ಸಾವಿರ ಪುಟಗಳಿಷ್ಟಿರುವ ಪುಸ್ತಕ ಒಂದು ತಿಂಗಳ ಓದಿಗೆ ಸಾಕಾಗುತ್ತದೆ. </b><br />
<b><br />
</b><br />
<b>ಎಲ್ಲಾ ಮಳಿಗೆಯಲ್ಲೂ ಒಂದೇ ರೀತಿಯ ಪುಸ್ತಕಗಳಿದ್ದವು. ವಿಶ್ವೇಶ್ವರ ಭಟ್ರ ಪುಸ್ತಕಗಳು, ಛಂದ ಪ್ರಕಾಶನದ ಪುಸ್ತಕಗಳು ಹೆಚ್ಚಾಗಿ ಎಲ್ಲಾ ಮಳಿಗೆಯಲ್ಲೂ ಕಾಣಿಸಿಕೊಂಡಿದ್ದವು. ಮಂಗಳೂರಿನಲ್ಲಿ ನಡೆದ ಪುಸ್ತಕಮೇಳದಲ್ಲಿ ವ್ಯಾಪಾರವೇ ಇರಲಿಲ್ಲವಂತೆ. ಇಲ್ಲಿ ನುಡಿಸಿರಿಯಲ್ಲಿ ಚೆನ್ನಾಗಿಯೇ ವ್ಯಾಪಾರ ಆಗಿರಬೇಕು. </b><br />
<b><br />
</b><br />
<b>ಮತ್ತೆ ಹೊರಗೆ ಬಂದ ನಾನು ಯಾರಿಗೂ ಕಾಣಿಸಿಕೊಳ್ಳದಂತೆ ಅಡಗಿಕೊಳ್ಳುವುದರಲ್ಲಿಯೇ ಮಗ್ನನಾದೆ. ಗುರುತಿನವರು ಯಾರಾದರೂ ಸಿಕ್ಕರೆ ಮತ್ತೆ ಮಾತು ಮಾತು ಮಾತು . ನನಗಿದು ಬೇಕಿರಲಿಲ್ಲ. ನಾನು ಹೋದದ್ದೇ ಸಂತೆಯಲ್ಲಿ ನಿಂತ ಸಂತನಂತೆ ಇರಲು. ಗದ್ದಲದ ನಡುವೆಯೂ ನಾನು ನಾನಾಗಿರಲು . ಕೊನೆಗೂ ಅಲ್ಲಿಯೇ ಇದ್ದು ಇಲ್ಲದವನಂತೆ ಇರಲು ನನ್ನಿಂದ ಸಾಧ್ಯವಾಯಿತು. </b><br />
<b><br />
</b><br />
<b>ಒಂದು ರೀತಿಯ ಸಂಕೋಚ , ಮುಜುಗರ ಕಾಡುತ್ತಿರುತ್ತದೆ. ನಾಲ್ಕು ಜನರ ನಡುವೆ ಕಾಣಿಸಿಕೊಳ್ಳಲು ಹಿಂಜರಿಕೆಯಾಗುತ್ತದೆ. ನಿವೃತ್ತನಾದ ಕಾರಣದಿಂದಲೋ ಏನೋ. ಎಲ್ಲಿಯೂ ಕಾಣಿಸಿಕೊಳ್ಳಲು ಆಸೆಯಾಗುವುದಿಲ್ಲ. ನನ್ನ ಸುತ್ತ ಇರುವ ಜನರಿಗೆಲ್ಲಾ ತಾವು ಏನಾದರೂ ಮಾಡಿ ಎಲ್ಲಿರ ಕಣ್ಣಿಗೂ ಕಾಣಿಸಿಕೊಳ್ಳುವಂತಿರಬೇಕು ಎಂಬ ಹಪಹಪಿಕೆ ಇದ್ದಂತೆ ಕಾಣುತ್ತದೆ. ಅಂತಹವರಿಗೆ ಚಲಾವಣೆಯಲ್ಲಿರುವ ಪ್ರತಿಷ್ಠಿತರ ಹಿಂದೆ ಮುಂದೆ ಇರಲು ಅವರು ಬಯಸುತ್ತಾರೆ ಶಿವಾಯ್ ನಮ್ಮಂತಹವರು, ಒಂದು ಕಾಲದಲ್ಲಿ ಆತ್ಮೀಯರು ಆಗಿದ್ದ ನಾವು ಕಾಣುವುದಿಲ್ಲ. ನಾನೂ ಅದಕ್ಕೆ ಈಗ ಹೊಂದಿಕೊಂಡಿದ್ದೇನೆ. ಅವರಿಗೂ ಮುಜಗರವಾಗದಂತೆ ಸೈಡ್ವಿಂಗ್ಗೆ ತೆರಳಿದ್ದೇನೆ. </b><br />
<b><br />
</b><br />
<b>ಕಳೆದವಾರದ ಓದು:</b><br />
<b> ಖುಶವಂತ್ ಸಿಂಗ್ನ obslute kushawant ಓದಿದೆ. ಕೇವಲ ೧೮೬ ಪುಟಗಳಷ್ಟಿರುವ ಪುಸ್ತಕ ಮುಗಿಸಲು ವಾರವೇ ಬೇಕಾಯ್ತು. ನಡನಡುವೆ ಏನೇನೋ ಕೆಲಸಗಳು. ಈಗ ಕುಂವೀ ಸಮಗ್ರ ಕೈಗೆತ್ತಿಕೊಂಡಿದ್ದೇನೆ. ಇನ್ನು ಈ ತಿಂಗಳು ಚಿಂತಿಲ್ಲ. </b>nagaraja raohttp://www.blogger.com/profile/09150767551244015450noreply@blogger.com1tag:blogger.com,1999:blog-380114554757439625.post-26159251795138227342010-10-28T10:09:00.000-07:002010-10-28T10:09:05.889-07:00ಎಕ್ಲೊ ಚಲೋರೆ<b>ಎಕ್ಲೊ ಚಲೋರೆ</b><br />
<b><br />
</b><br />
<b><br />
</b><br />
<b>ಕವಿ ರವೀಂದ್ರನಾಥ ಠಾಗೋರರ ಪ್ರಸಿದ್ಧ ಹಾಡಿನ ಮೊದಲ ಸಾಲಿದು. ಪದ್ಯ ಪೂರ್ತಿ ಗೊತ್ತಿಲ್ಲದಿದ್ದರೂ ಈ ಸಾಲು ಮಾತ್ರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದು ಕೊಂಡು ಬಿಟ್ಟಿದೆ. ಏಕಾಂಗಿಯಾಗಿ ಹೋಗು. ಜತೆಯಲ್ಲಿ ಯಾರೂ ಇರುವುದಿಲ್ಲ ಎನ್ನುವ ಮಾತು ಸತ್ಯವೆನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. </b><br />
<b><br />
</b><br />
<b>ನಾಳಿದ್ದು ಭಾನುವಾರ ಮೂಡಬಿದ್ರೆಗೆ ನುಡಿಸಿರಿ ಕಾರ್ಯಕ್ರಮಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೇನೆ. ಸುಮ್ಮನೆ ಅಲ್ಲಿ ಪುಸ್ತಕದ ಅಂಗಡಿಗೆ ಹೋಗಿ ನೋಡಿ ಬರಬೇಕು ಎಂಬಾಸೆ. ಜತೆಯಲ್ಲಿ ಯಾರೂ ಬರಲು ಸಿದ್ಧರಿಲ್ಲ. ಅಡಕೆ ಕೊಯ್ಲು, ಮಳೆ ,ಕೆಲಸ, ಆತಂಕ ಅವರಿಗೆ ಕಾಡುತ್ತಿದೆ. ನನ್ನ ಸ್ವಾರ್ಥಕ್ಕೆ ಅವರಿಗೆ ತೊಂದರೆ ಕೊಡಲು ಬಯಸದೇ ನಾನೊಬ್ಬನೇ ಹೊರಟಿದ್ದೇನೆ. ಅಲ್ಲೂ ಗೆಳೆಯರು ಸಿಕ್ಕಬಹುದು. ಸಿಗದೇ ಹೋಗಬಹುದು. ಒಂಟಿಯಾಗಿ ತಿರುಗುವ ಸುಖವೇ ಬೇರೆಯಾಗಿರುತ್ತದೆ. ಭಾನುವಾರವನ್ನು ನಿರೀಕ್ಷಿಸುತ್ತಿದ್ದೇನೆ. ಮೊನ್ನೆ ಗೆಳೆಯ ಮುರಲೀಧರ ಉಪಾಧ್ಯರು ಮಂಗಳೂರಿನಲ್ಲಿ ನಡೆಯುತ್ತಿರುವ ಪುಸ್ತಕಮೇಳದಲ್ಲಿ ತಿರುಗುತ್ತಿರುವಾಗ ನನ್ನ ನೆನಪಾಯಿತು ಎಂದು ಸಂದೇಶ ಕಳುಹಿಸಿದ್ದರು. ಅವರಿಗೆ ಏನೆಂದು ಉತ್ತರಿಸಬಹುದಿತ್ತು. ಸುಮ್ಮನೆ ಯೋಚಿಸುತ್ತಾ ಕುಳಿತೆ. ಹಳ್ಳಿಯಲ್ಲಿ ಬದುಕುವುದರಿಂದ ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಮತ್ತೆ ಕೆಲವನ್ನು ಗಳಿಸುತ್ತೇವೆ. ಇಲ್ಲಿನ ಶಾಂತಿ, ನಿಧಾನಗತಿಯ ಬದುಕು ಅಲ್ಲಿ ಸಿಗಲು ಸಾಧ್ಯವಿಲ್ಲ. ಪುಸ್ತಕಮೇಳದಂತಹ ಮೇಳಗಳು ಇಲ್ಲಿ ನಡೆಯಲು ಸಾಧ್ಯವಿಲ್ಲ. ಇಲ್ಲಿ ಸರಿಯಾಗಿ ದಿನಪತ್ರಿಕೆಗಳೂ, ವಾರಪತ್ರಿಕೆಗಳೂ ಸಿಗುವುದಿಲ್ಲ. ಆದರೆ ಅವುಗಳ ಮೇಲಿದ್ದ ಮೋಹವನ್ನು ಬಿಟ್ಟುಬಿಟ್ಟಿದ್ದೇನೆ. ನಾನೂ ಈಗ ಪಕ್ಕಾ ಹಳ್ಳಿಗನಾಗಿದ್ದೇನೆ. </b><br />
<b><br />
</b><br />
<b>ನಾನಾಗಿಯೇ ಆರಿಸಿಕೊಂಡ ಬದುಕು ಇದು. ಹಾಗಾಗಿ ಬೇರೆ ಯಾವ ಬೇಸರವೂ ಮನಸ್ಸಿನಲ್ಲಿ ಬೇರೂರದಂತೆ ಇದ್ದುದರಲ್ಲಿಯೇ ಉಳಿದ ಪಯಣವನ್ನು ಸಾಗಿಸಬೇಕು. ಏಕ್ಲೋ ಚಲೋರೆ. </b><br />
<b><br />
</b><br />
<b>ಕಳೆದವಾರ ಹೆಚ್ಚಿನದನ್ನು ಓದಲಾಗಲಿಲ್ಲ. ಕಂಪ್ಯೂಟರ್ ನಲ್ಲಿ ಸಮಸ್ಯೆ ಬಂದಿತ್ತು. ಒಬ್ಬನೇ ಕುಳಿತು ಏನೇನೋ ಪ್ರಯೋಗ ಮಾಡಿ ಸರಿಮಾಡಿಕೊಂಡಿದ್ದೇನೆ. ನನ್ನ ಸಂಗ್ರಹದಲ್ಲಿದ್ದ ಸುಮಾರು ಮೂರುವರೆಸಾವಿರ ಸಂಗೀತದ ಫೈಲ್ಗಳು ನಾಪತ್ತೆಯಾಗಿದ್ದವು. ಅವುಗಳನ್ನು ಮತ್ತೆ ಸ್ಥಾಪಿಸಿಕೊಳ್ಳುವುದರಲ್ಲಿಯೇ ವಾರದ ನಾಲ್ಕುದಿನಗಳು ಕರಗಿದವು. ಈ ವಾರ ಸಲ್ಮಾನ್ ರಶ್ದೀಯ Haroun and the sea of stories ಪುಸ್ತಕ ಮಾತ್ರ ಓದಲು ಸಾಧ್ಯವಾಯಿತು. ಈಗ ಕುಶವಂತ್ ಸಿಂಗ್ರವರ obsolute kushawant ಓದುತ್ತಿದ್ದೇನೆ. </b>nagaraja raohttp://www.blogger.com/profile/09150767551244015450noreply@blogger.com0tag:blogger.com,1999:blog-380114554757439625.post-59238036819098542982010-10-22T09:36:00.001-07:002010-10-22T09:36:58.360-07:00ಎಲ್ಲಿ ಹೋದರು ನನ್ನವರು ?<b><br />
</b><br />
<b><br />
</b><br />
<b>ಎಲ್ಲಿ ಹೋದರು ನನ್ನವರು?</b><br />
<b><br />
</b><br />
<b>ನನ್ನ ವೃತ್ತಿಜೀವನದ ಮೂವತ್ತೈದು ವರ್ಷಗಳಲ್ಲಿ ಕೊನೆಯ ಐದು ವರ್ಷ ಕಾಲೇಜಿನ ಪ್ರಾಂಶುಪಾಲನಾಗಿ ಕೆಲಸಮಾಡಿ ಅದೇ ಹುದ್ದೆಯಲ್ಲಿಯೇ ನಿವೃತ್ತನಾದೆ. ಸಾಧಾರಣವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥನಾದವನು ನಿವೃತ್ತಿಯಾದನಂತರ ತೀರಾ ಒಂಟಿಯಾಗಿರುತ್ತಾನೆ ಎಂದು ಕೇಳಿದ್ದೆ. ಅದು ನನ್ನ ಅನುಭವಕ್ಕೂ ಬಂದಿತು. ಈಗ ನನ್ನದೇ ಊರಿಗೆ ಮರಳಿ ಬಂದನಂತರ ನನ್ನ ಲೋಕ-ಸ್ನೇಹಲೋಕ ಇದ್ದಕ್ಕಿಂದಂತೆ ಕರಗಿ ಹೋಗಿದೆ. ನಿವೃತ್ತನಾದ ಹೊಸತರಲ್ಲಿ ಮತ್ತು ಊರಿಗೆ ಬಂದ ಪ್ರಾರಂಭದಲ್ಲಿ ಸ್ನೇಹಿತರಿಗೆ ಮೊಬೈಲಿನಲ್ಲಿ ಫೋನ್ ಮಾಡುತ್ತಿದ್ದೆ. ಆ ಕಡೆಯಿಂದ ರಿಂಗ್ ಕೇಳಿಸುತ್ತಿತ್ತು. ಕೆಲವು ಕ್ಷಣದ ನಂತರ ಸಂಪರ್ಕ ಕಡಿದು ಹಾಕಲಾಗಿದೆ ಎಂದು ಸಂದೇಶ ಬರುತ್ತಿತ್ತು. ಇವನೆಲ್ಲಿ ಶನಿ ಎಂದು ಅವರು ಅಂದುಕೊಳ್ಳುತ್ತಿದ್ದರೇನೋ. ಎರಡುಬಾರಿ ಇದು ಅನುಭವಕ್ಕೆ ಬಂದ ನಂತರ ಮತ್ತೆ ಯಾರಿಗೂ ಫೋನ್ ಮಾಡಲಿಲ್ಲ. </b><br />
<b><br />
</b><br />
<b>ತಪ್ಪು ನನ್ನದೇ. ನಾನೇನೋ ನಿವೃತ್ತ. ಸಮಯವೆಲ್ಲ ನನ್ನದೇ. ಆದರೆ ನನ್ನ ಸ್ನೇಹಿತರಿಗೆ ಕೆಲಸವಿರುತ್ತದೆ. ಅವರಿಗೆ ಸಮಯ ಅಮೂಲ್ಯವಾಗಿರುತ್ತದೆ. ಹಾಗಾಗಿ ಯಾರಿಗೂ ತೊಂದರೆ ಕೊಡಬಾರದೆಂದು ಸುಮ್ಮನಾದೆ. ಇದರಿಂದ ಒಂದು ರೀತಿಯ ಕೀಳರಿಮೆ ಕೂಡ ನನ್ನಲ್ಲಿ ಬೆಳೆಯಲು ಪ್ರಾರಂಭವಾಯಿತು. ಯಾರಿಗಾದರೂ ಫೋನ್ ಮಾಡಬೇಕಾದರೆ ನೂರು ಬಾರಿ ಯೋಚಿಸಬೇಕಾಯಿತು. ಇದಕ್ಕಿಂತ ಮೌನವೇ ಲೇಸು ಎಂದು ಈಗ ಯಾರಿಗೂ ಫೋನ್ ಮಾಡುತ್ತಿಲ್ಲ. ಅವರ ವಿಷಯಗಳ ಬಗ್ಗೆ ಕುತೂಹಲ ತೋರಿಸುವುದಿಲ್ಲ. </b><br />
<b><br />
</b><br />
<b>ಜನ ಏಕೆ ಹೀಗೆ ವರ್ತಿಸುತ್ತಾರೆ ಎನ್ನುವುದು ತಿಳಿಯುತ್ತಿಲ್ಲ. ನಾನೇನೂ ಅಂತಹ ದುಷ್ಟನಾಗಿರಲಿಲ್ಲ. ಸಂಪರ್ಕಕ್ಕೆ ಬಂದ ಎಲ್ಲರೊಡನೆಯೂ ಸರಿಯಾಗಿ ನಡೆದುಕೊಂಡಿದ್ದೆ. ವಿದ್ಯಾರ್ಥಿಗಳ ಜತೆಯಲ್ಲಿ, ಸಹೋದ್ಯೋಗಿಗಳ ಜತೆಯಲ್ಲಿ ಸರಿಯಾಗಿ ವರ್ತಿಸಿದ್ದೆ. ಯಾರೊಡನೆಯೂ ಜಗಳವನ್ನು ಮಾಡಿರಲಿಲ್ಲ. ನಗುತ್ತಾ, ನಗಿಸುತ್ತಾ ಇದ್ದೆ. ಆದರೂ.....?</b><br />
<b><br />
</b><br />
<b>ನಾನೀಗ ಕೊರಗುತ್ತಿಲ್ಲ. ವೃತ್ತಿಜೀವನದ ಉದ್ದಕ್ಕೂ ಸಂಗ್ರಹಿಸಿದ ಪುಸ್ತಕಗಳು ಇವೆ. ಸಂಗ್ರಹಿಸಿದ ಸಂಗೀತದ ಮುದ್ರಿಕೆಗಳಿವೆ. ಅವೆಲ್ಲವನ್ನೂ ನನ್ನ ಐಪಾಡ್ಗೆ ಹಾಕಿ, ದಿನವಿಡೀ ಕೇಳುತ್ತಾ, ಒಂದು ಕೈಯಲ್ಲಿ ಪುಸ್ತಕ, ಮತ್ತೊಂದರಲ್ಲಿ ಹೊಗೆಬತ್ತಿ ಹಿಡಿದುಕೊಂಡು ಲೋಕ ಮರೆಯುತ್ತಿದ್ದೇನೆ. ಮೂರು ಮತ್ತು ನಾಲ್ಕು ವರ್ಷದ ಇಬ್ಬರು ಮೊಮ್ಮಕ್ಕಳಿದ್ದಾರೆ-ಅಣ್ಣನ ಮೊಮ್ಮಕ್ಕಳು ನನ್ನವೂ ತಾನೇ. ಅವರು ಮನೆಯಿಡೀ ಓಡಾಡಿಕೊಂಡಿರುವಾಗ ಫ್ಯಾನ್ ಕೂಡ ಅಗತ್ಯವಿರುವುದಿಲ್ಲ. ಮನಸ್ಸಿಗೂ ತಂಪು.ಇಂತಹ ಸುಖದ ಸಮಯದಲ್ಲಿ ಕೆಲವೊಮ್ಮೆ ಸ್ವರ್ಗಕ್ಕೆ ಬೆಂಕಿ ಹಚ್ಚಬೇಕೆನಿಸುತ್ತದೆ. ಆದರೂ ಮನದ ಮೂಲೆಯಲ್ಲಿ ಆಗಾಗ ಯಾಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಮನುಷ್ಯರ ವರ್ತನೆಗಳು ಅಚ್ಚರಿಯನ್ನುಂಟುಮಾಡುತ್ತಿದೆ. </b><br />
<b><br />
</b><br />
<b>ಅವಧಿ ಮುಗಿಯುತ್ತಾ ಬಂದಿದೆ ಎಂದೆನಿಸುತ್ತಿದೆ. ಸರದಿಯಲ್ಲಿ ನಿಂತಿದ್ದೇನೆ ಎಂದೂ ಭಾಸವಾಗುತ್ತಿದೆ. ಅದರ ಬಗ್ಗೆ ಭಯವೇನೂ ಕಾಡುತ್ತಿಲ್ಲ. ಹೊತ್ತು ಹೋಗುವ ಮುನ್ನ (ಬಸವಣ್ಣನವರ ಮಾತು) ಓದಿ ಮುಗಿಸಬೇಕು. ಓದಿನ ಕ್ಷಣದಲ್ಲಿ ಸಿಗುವ ಸುಖಕ್ಕಿಂತ ಮಿಗಿಲಾದ ಸುಖವನ್ನು ಕಳೆದುಕೊಂಡ ಸ್ನೇಹಿತರ ಮಾತಿನಲ್ಲಿ ನಾನು ಮತ್ತೆ ಪಡೆಯಲಾರನೇನೋ. </b><br />
<b><br />
</b><br />
<b>ಕಳೆದವಾರ ಓದಿದ ಪುಸ್ತಕಗಳು: ಬಾನಯಾನ-ಕ್ಯಾಪ್ಟನ್ ಗೋಪಿನಾಥ್ ಮತ್ತು ಹೆಚ್.ಎಸ್.ವಿಯವರ ಅನಾತ್ಮ ಕಥನ. </b>nagaraja raohttp://www.blogger.com/profile/09150767551244015450noreply@blogger.com1tag:blogger.com,1999:blog-380114554757439625.post-42031781039516192612010-10-14T05:26:00.000-07:002010-10-14T05:26:33.970-07:00ರಾಘವ-ಓದಿನ ಮನೆ: ಒಡೆದು ಹೋದ ಕನಸು.<span class="Apple-style-span" style="font-family: Arial; font-size: small;"><span class="Apple-style-span" style="font-size: 13px;"><div><b><span class="Apple-style-span" style="font-size: x-large;">"ರಾಘವ-ಓದಿನ ಮನೆ"- ಒಡೆದುಹೋದ ಕನಸು</span>.</b></div><div><b><br />
</b></div><div><b><br />
</b></div><div><b>ನಾನು ನಿವೃತ್ತಿಯಾದ ನಂತರ ಊರಿಗೆ ಮರಳಲು ಸಿದ್ಧನಾಗುವಾಗ ನನ್ನೆಲ್ಲಾ ಪುಸ್ತಕಗಳನ್ನು ಊರಿಗೆ ತಂದು ಒಂದು ಮುಕ್ತ ವಾಚನಾಲಯವನ್ನು ತೆರೆಯುವುದು ಎಂದು ನಿರ್ಧರಿಸಿದ್ದೆ. ಆ ವೇಳೆಗೆ ನನ್ನಣ್ಣ ತೀರಿಹೋಗಿದ್ದರು. ಅವರಿಗೂ ಹೊಸ ಪುಸ್ತಕಗಳ ಹುಚ್ಚು ಇದ್ದಕಾರಣ ಅವರ ಹೆಸರಿನಲ್ಲಿಯೇ ಒಂದು ಊರವರಿಗಾಗಿ ವಾಚನಾಲಯವನ್ನು ತೆರೆಯುವುದು ಎಂದು ನಿರ್ಧರಿಸಿ "ರಾಘವ-ಓದಿನ ಮನೆ" ಎಂದು ನಾಮಕರಣವನ್ನೂ ಮಾಡಿದ್ದೆ. ನನ್ನ ಗೃಹಪ್ರವೇಶದ ದಿನ ಅದರ ಉದ್ಘಾಟನೆ ಮಾಡುವುದು ಎಂದೂ ನಿಶ್ಚಯವಾಗಿತ್ತು. ಅಣ್ಣ ಮನೆಯ ಅಂಗಳದಲ್ಲಿ ಒಂದು ಸಣ್ಣ ಕೊಠಡಿಯನ್ನು ಕಟ್ಟಿಕೊಂಡಿದ್ದರು. ಅವರ ದುರಾದೃಷ್ಟದಿಂದ ಅಲ್ಲಿ ಅವರು ಸರಿಯಾಗಿ ಕುಳಿತುಕೊಳ್ಳಲಿಕ್ಕೂ ಕಾಲ ಅವರಿಗೆ ಅವಕಾಶವನ್ನು ಮಾಡಿಕೊಡಲಿಲ್ಲ. ಹೀಗಾಗಿ ನಾನು ಅದಕ್ಕೆ ಸುಣ್ಣ ಬಣ್ಣವನ್ನು ಹೊಡೆಯಿಸಿ, ವಿದ್ಯುಚ್ಛಕ್ತಿ ಸಂಪರ್ಕವನ್ನು ಸರಿಪಡಿಸಿ, ಹಳೆಯ ಮನೆಯ ಎರಡು ದೊಡ್ಡ ಬೀರುಗಳನ್ನು ತಂದು ಅದರ ತುಂಬಾ ಪುಸ್ತಕಗಳನ್ನು ತುಂಬಿಸಿದ್ದೆ. ನನ್ನ ಬಳಿಯಲ್ಲಿ ಹಿರಿಯ ಲೇಖಕರ (ಅನಕೃ, ತರಾಸು ಮೊದಲಾದವರ) ಪುಸ್ತಕಗಳು ಇಲ್ಲದಿದ್ದರೂ , ಹೊಸ ಲೇಖಕರ(ಕಾಯ್ಕಿಣಿ, ರವಿ ಬೆಳೆಗೆರೆ, ಜೋಗಿ, ಛಂದ ಪ್ರಕಟನೆಗಳು) ಪುಸ್ತಕಗಳು ತುಂಬಾ ಇದ್ದವು. </b></div><div><b>ಗೃಹ ಪ್ರವೇಶದ ದಿನ ನಾನು ಬಹಳ ವಾಗಿ ಮೆಚ್ಚಿಕೊಳ್ಳುವ ಹಿರಿಯರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಂದ ಅದರ ಉದ್ಘಾಟನೆಯನ್ನೂ ಮಾಡಿದೆ ಮತ್ತು ಊರವರಿಗೆ ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಆಹ್ವಾನವನ್ನೂ ನೀಡಿದೆ. ಸದಸ್ಯ ಶುಲ್ಕವೆಂದು ಹಣ ವಸೂಲಿಯಿರಲಿಲ್ಲ. ತೆಗೆದುಕೊಂಡು ಹೋದ ಪುಸ್ತಕಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದರೆ ಸಾಕು ಎಂದು ಹೇಳಿದ್ದೆ. ಸದಸ್ಯರ ಪರಿಚಯವನ್ನು ತಿಳಿಸುವ ಒಂದು ಪರಿಚಯ ಪತ್ರವನ್ನು ಅಚ್ಚುಮಾಡಿಸಿ ಇಟ್ಟುಕೊಂಡಿದ್ದೆ. ನನ್ನ ಗ್ರಹಚಾರವೆನ್ನುವಂತೆ ಅದನ್ನು ಕೇಳಿಕೊಂಡು ಯಾರೂ ಬರಲಿಲ್ಲ. ಈಗ ಎರಡು ವರ್ಷಗಳಾಗುತ್ತಾ ಬಂದಿದೆ. ಪ್ರತಿವಾರವೂ ಎನ್ನುವಂತೆ ನನ್ನ ಸಂಬಂಧಿಕರಿಬ್ಬರು ಮಾತ್ರ ನಿಯಮಿತವಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿರುತ್ತಾರೆ. ಇಬ್ಬರಿಗೂ ಪ್ರಾಯ ಎಪ್ಪತ್ತೆರೆಡು ಆಗಿದೆ. ಪುಸ್ತಕದ ಹುಚ್ಚು ಅತಿಯಾಗಿದೆ ಅವರಿಗೆ. ಹೊಸಪುಸ್ತಕಗಳನ್ನು ಓದುವುದೇ ಸುಖವೆಂದು ಖುಷಿಯಲ್ಲಿದ್ದಾರೆ. ನಿನ್ನಿಂದಾಗಿ ಈ ಲೇಖಕರನ್ನು ಓದಿದಂತಾಯಿತು ಎಂದು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಇವರು ಬಿಟ್ಟರೆ ಮೂರನೆಯವರು ಕಾಣುತ್ತಿಲ್ಲ. </b></div><div><b><br />
</b></div><div><b>ಏಕೆ ಹೀಗೆ? ಓದುಗರು ಎಲ್ಲರೂ ಎಲ್ಲಿ ಹೋದರು. ಅರ್ಥವಾಗುತ್ತಿಲ್ಲ. ನನ್ನೂರು ಸಂಸ್ಕೃತಿ ಸಂಪನ್ನವಾದ ಊರು ಎಂದೇ ಪ್ರಸಿದ್ಧವಾಗಿತ್ತು. ಪುಸ್ತಕದ ಹುಚ್ಚು ಇರುವವರು ತುಂಬಾ ಜನರಿದ್ದರು. ಈಗ ಯಾರಿಗೂ ಪುಸ್ತಕಗಳು ಬೇಡವಾದವೆ? ಒಂದೂ ತಿಳಿಯುತ್ತಿಲ್ಲ. ಹೊಸ ಹೊಸ ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದೇನೆ. ನಾವು ಮೂರು ಜನ ಮಾತ್ರ ಓದುತ್ತಿದ್ದೇವೆ. ಈಗ ನನಗೆ ಸಮಸ್ಯೆ ಬಂದಿರುವುದು ನನ್ನ ಬಳಿ ಇರುವ ಪುಸ್ತಕಗಳ ರಾಶಿಯನ್ನು ಏನು ಮಾಡುವುದು ಎನ್ನುವುದು. ಹಾಗಾಗಿ ನಿಧಾನವಾಗಿ ಆಸಕ್ತರಿಗೆ ನನ್ನ ಬಳಿ ಇರುವ ಮತ್ತು ಓದಿಯಾದ ಪುಸ್ತಕಗಳನ್ನು ನಿರ್ಮೋಹಿಯಾಗಿ ದಾನ ಮಾಡುತ್ತಿದ್ದೇನೆ. ಇನ್ನೈದು ವರ್ಷಗಳಲ್ಲಿ ನನ್ನ ಬಳಿಯಿರುವ ಪುಸ್ತಕಗಳನ್ನೆಲ್ಲವನ್ನೂ ಹೀಗೆ ಕರಗಿಸಬೇಕು ಎಂದು ನಿರ್ಧರಿಸಿದ್ದೇನೆ. </b></div><div><b><br />
</b></div><div><b>ನನ್ನ ಓದಿನ ಮನೆಯ ಕನಸು ಒಡೆದುಹೋಗಿದೆ. ಕಾಲ ಸರಿಯುತ್ತಿದೆ. ಪ್ರಾಯವಾಗುತ್ತಿದೆ. ಪುಸ್ತಕಗಳನ್ನು ಆದಷ್ಟು ಬೇಗ ಓದಿ ಕರಗಿಸಬೇಕು. </b></div></span></span>nagaraja raohttp://www.blogger.com/profile/09150767551244015450noreply@blogger.com1tag:blogger.com,1999:blog-380114554757439625.post-46620900706839046832010-10-09T10:53:00.000-07:002010-10-09T10:53:04.900-07:00ಬದಲಾದ ಗತಿ<b>*ನನ್ನ ಹಿರಿ ಕಿರಿ ಗೆಳೆಯರು ಬ್ಲಾಗ್ನ್ನು ಪ್ರಾರಂಭಿಸಿದನ್ನು ನೋಡಿ ನಾನೂ ಈ ಪ್ರಯತ್ನಕ್ಕೆ ಕೈಹಾಕಿದ್ದೇನೆ. ಕವಿ ಹೇಳಿದಂತೆ ಎಲ್ಲ ಕೇಳಲಿ ಎಂದು ನಾನು ಹಾಡುವುದು ಅಲ್ಲ.ಪ್ರಾರಂಭವೇನೋ ಮಾಡಿದ್ದೇನೆ. ಆದರೆ ಬರೆಯುವುದು ಏನನ್ನು? ಈ ಬೇತಾಳ ಬೆನ್ನ ಮೇಲೆ ಏರಿ ಕುಳಿತಿದ್ದಾನೆ. </b><br />
<b><br />
</b><br />
<b><br />
</b><br />
<b>*ಬ್ಲಾಗ್ ಎಂದರೆ ದಿನಚರಿ ತಾನೆ? ಅಥವಾ ನಾನು ಹಾಗೆ ತಿಳಿದುಕೊಂಡಿದ್ದೇನೆ. ಖಾಸಗಿಯಾದ ವಿಷಯಗಳನ್ನು ಬೇರೆಯವರೆಲ್ಲರೂ ಓದುವಂತೆ ಇದು ಸಹಾಯ ಮಾಡುತ್ತದೆ. ಆರವತ್ತು ದಾಟಿದ ನನ್ನ ಮನಸ್ಸಿನ ನೆನಪುಗಳು ಪೂರ್ಣ ಅಳಿದು ಹೋಗುವ ಮುನ್ನ ದಾಖಲಿಸಬೇಕು ಎಂದು ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ.</b><br />
<b><br />
</b><br />
<b><br />
</b><br />
<b>ಬದಲಾದ ಗತಿ</b><br />
<b><br />
</b><br />
<b><br />
</b><br />
<b>ಸುಮಾರು ಮೂವತ್ತೈದು ವರ್ಷಗಳ ಕಾಲ ಕನ್ನಡ ಪಾಠವನ್ನು ಹೇಳಿಕೊಡುವ ಮಾಸ್ಟ್ರಾಗಿದ್ದೆ. ವೃತ್ತಿಯ ಕೊನೆಯ ಐದು ವರುಷ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡಿ ನಿವೃತ್ತನಾದೆ. ಕೊನೆಕೊನೆಯಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ನನಗೆ ಬದುಕನ್ನು , ವೃತ್ತಿಯನ್ನು ನೀಡಿದ್ದ ನನ್ನ ದಕ್ಷಿಣ ಕನ್ನಡ ನಿಧಾನವಾಗಿ ಬೇಸರವನ್ನುಂಟುಮಾಡಲು ಪ್ರಾರಂಭಿಸಿತ್ತ್ತು. ಈ ಊರೇ ಬೇಡ. ಹುಟ್ಟೂರಿಗೆ ಹೋಗೋಣವೆಂದೆನಿಸಲು ಅನ್ನಿಸಿತ್ತು. ಈ ಯೋಚನೆ ಆಗಲೇ ಬಂದದ್ದಲ್ಲ. ನಿವೃತ್ತನಾಗಲು ಮೂರು ವರ್ಷವಿದೆ ಎನ್ನುವಾಗಲೇ ಈ ಯೋಚನೆ ಬರಲು ಪ್ರಾರಂಭಿಸಿತ್ತು. ಹುಟ್ಟೂರಿನ ಸೆಳೆತ ಬಲವಾಗುವುದಕ್ಕೆ ಇನ್ನೂ ಎರಡು ಕಾರಣಗಳಿವೆ.</b><br />
<b><br />
</b><br />
<b>೨೦೦೪ರಲ್ಲಿ ನನ್ನ ತಾಯಿ ತೀರಿಹೋದಾಗ ಅವರ ಅಪರಕರ್ಮವನ್ನು ಮಾಡಲು ಊರಿಗೆ ಬಂದಿದ್ದೆ. ಸಂಪ್ರದಾಯದಂತೆ ಮೀಸೆ ಮತ್ತು ತಲೆಯ ಕೂದಲುಗಳನ್ನು ತೆಗೆಯಿಸಿಕೊಂಡು ಯಾರಿಗೂ ಗುರುತೇ ಸಿಗದಂತೆ ರೂಪ ಬದಲಾಯಿಸಿಕೊಂಡಿದ್ದೆ. ಒಂದು ದಿನ ನನ್ನಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ನನ್ನ ಸಹಪಾಠಿಯಾಗಿದ್ದ ದಿ.ರವೀಂದ್ರ ಶೆಟ್ಟಿಯ ತಮ್ಮ ಶೆಟ್ಟಿ ಸಿಕ್ಕಿದ್ದ. ನನ್ನ ಮುಖವನ್ನೇ ನೋಡುತ್ತಾ ’ಏಯ್ ,ನಾಗರಾಜ ಅಲ್ವೇನೋ !, ಏನಾಯಿತೋ’ ಎಂದು ವಿಚಾರಿಸಿದ. ವಿಷಯ ತಿಳಿದಾಗ ಸಂತಾಪ ವ್ಯಕ್ತಪಡಿಸಿ, ನನ್ನ ಕೈ ಯನ್ನು ಬಲವಾಗಿ ಹಿಡಿದು ’ ಇನ್ನು ಎಷ್ಟು ವರುಷ ಸರ್ವೀಸ್ ಇದೆ’ ಎಂದು ಕೇಳಿದ. ಮೂರು ವರ್ಷವೆಂದು ನಾನು ಹೇಳಿದಾಗ ಹಿಡಿದ ಕೈ ಯನ್ನು ಬಿಡದೇ, ಇನ್ನೂ ಬಿಗಿಯಾಗಿ ಹಿಡಿದುಕೊಂಡು ’ನಾಗರಾಜಾ, ನಿವೃತ್ತನಾದ ಮೇಲೆ ಊರಿಗೇ ಬಾ. ಒಟ್ಟಿಗೇ ಸಾಯೋಣ’ ಎಂದು ಹೇಳಿದ. ನಾನು ನಕ್ಕು ಹಾಗೇ ಆಗಲಿ ಎಂದು ಹೇಳಿದೆ. ಆಗ ಅವನ ಮಾತು ನನ್ನ ಮನಸ್ಸಿನ ಆಳದಲ್ಲಿ ಇಳಿದಿರಲಿಲ್ಲ. ದಿನ ಕಳೆದಂತೆ ಅವನಾಡಿದ ಮಾತಿನರ್ಥ ಸ್ವಷ್ಟವಾಗಲು ಪ್ರಾರಂಭವಾಯಿತು. ಗೆಳೆಯರೆಂದರೆ ಹೀಗೆ ಇರುತ್ತಾರೆ. ಒಟ್ಟಿಗೆ ಸಾಯಲು ಕಾಯುತ್ತಿರುತ್ತಾರೆ. ಸಾಯಬೇಕಾದರೂ ಸರಿಯೇ. ಸರಿಯಾದ ಸ್ಠಳದಲ್ಲಿಯೇ ಸಾಯಬೇಕು. ಗೆಳೆಯರು ಇದ್ದ ಊರಿನಲ್ಲಿ, ಬಂಧುಗಳು ಇರುವ ಊರಿನಲ್ಲಿ. ಹುಟ್ಟೂರಿನಲ್ಲಿ. ಈಗ ನಾನಿರುವ ಊರು ನನ್ನದಲ್ಲ. ಅಲ್ಲದೆ ನನ್ನ ಬರವಿಗೆ ಕಾಯುತ್ತಿರುವವರು ಹುಟ್ಟೂರಿನಲ್ಲಿದ್ದಾರೆ. ಆದ್ದರಿಂದ ಮತ್ತೆ ಅಲ್ಲಿಗೆ ಹೋಗಬೇಕು ಎಂದು ಬಲವಾಗಿ ಅನ್ನಿಸಲು ಪ್ರಾರಂಭಿಸಿತು. </b><br />
<b><br />
</b><br />
<b>ನಾನಿದ್ದ ಊರಿನ ಬಗ್ಗೆ ಮೋಹ ಕಡಮೆಯಾಗಲು ಮತ್ತು ಮರಳಿ ಮಣ್ಣಿಗೆ ತೆರಳುವ ನನ್ನ ನಿರ್ಧಾರ ಗಟ್ಟಿಯಾಗಲು ಇನ್ನೂ ಒಂದು ಘಟನೆ ನಡೆಯಿತು. ನಾನು ನಿವೃತ್ತನಾಗಲು ಎಂಟು ತಿಂಗಳು ಇತ್ತು. ನನ್ನ ಉತ್ತರಾಧಿಕಾರಿಯಾಗಿ ನಿಯುಕ್ತರಾಗಿದ್ದ ನನ್ನ ಸಹೋದ್ಯೋಗಿಯೊಬ್ಬರು ದಿನನಿತ್ಯ ನಡೆದಾಡುವ ರಸ್ತೆಯಲ್ಲಿ ನಿತ್ಯದಂತೆ ನಡೆದುಕೊಂಡು ಹೋಗುತ್ತಿರುವಾಗ ಅವರಿಗೆ ತಲೆ ಸುತ್ತು ಬಂದು ರಸ್ತೆಯಲ್ಲಿಯೇ ಬಿದ್ದು ಬಿಟ್ಟರು. ಸ್ಮೃತಿ ಕಳೆದುಕೊಂಡರು. ಆ ರಸ್ತೆ ಅಪರಿಚಿತವಾದುದೇನೂ ಅಲ್ಲ. ಸುಮಾರು ಹದಿನೆಂಟು ವರುಷಗಳಿಂದ ದಿನಕ್ಕೆ ನಾಲ್ಕು ಬಾರಿ ಓಡಾಡುತ್ತಿರುತ್ತೇವೆ. ಅಲ್ಲಿ ಅಕ್ಕಪಕ್ಕದಲ್ಲಿರುವ ಅಂಗಡಿಗಳವರಿಗೆ ನಾವು ಯಾರು ಎನ್ನುವುದು ಸರಿಯಾಗಿ ತಿಳಿದಿದೆ. ಆದರೆ ಯಾರೊಬ್ಬರೂ ಸಹಾಯಕ್ಕೆ ಎಂದು ಹತ್ತಿರಕ್ಕೆ ಬರಲಿಲ್ಲ. ಒಂದು ಅಂಗಡಿಯವರು ಹತ್ತಿರಕ್ಕೆ ಬಂದು ಸ್ಮೃತಿ ಕಳೆದುಕೊಂಡು ಬಿದ್ದಿದ್ದ ನನ್ನ ಗೆಳೆಯರ ಕೈಯಲ್ಲಿದ್ದ ಚೀಲವನ್ನು ಮಾತ್ರ ಸುರಕ್ಷಿತವಾಗಿ ತೆಗೆದಿರಿಸಲು ಅದನ್ನು ಎತ್ತಿಕೊಂಡು ಅವರ ಅಂಗಡಿಗೆ ಹೋದರು. ಶಿವಾಯ್ ಅವರ ಸಹಾಯಕ್ಕೆ ಯಾರೂ ಹತ್ತಿರಕ್ಕೆ ಸುಳಿಯಲಿಲ್ಲ. ಆ ವೇಳೆಯಲ್ಲಿ ಆಪದ್ಭಾಂಧವನಂತೆ ಸಹಾಯಕ್ಕೆ ಬಂದವರು ಒಬ್ಬರು ಸಾಮಾನ್ಯ ಜನವೆಂದು ನಾವು ಗುರುತಿಸುವ ಗ್ಯಾರೇಜಿನಲ್ಲಿ ಕೆಲಸ ಮಾಡುವ ಒಬ್ಬ ಸಹೃದಯಿ. ಅವರು ರಿಕ್ಷಾವನ್ನು ನಿಲ್ಲಿಸಿ ಆಸ್ಪತ್ರೆಗೆ ಅವರನ್ನು ಸೇರಿಸಿದರು. ವಿಷಯ ತಿಳಿದು ನಾವೆಲ್ಲ ಆಸ್ಪತ್ರೆಗೆ ಧಾವಿಸಿದಾಗ ಆ ವ್ಯಕ್ತಿ ಇನ್ನೂ ಅಲ್ಲಿಯೇ ಇದ್ದರು. ಅವರು ನಮ್ಮನ್ನು ನೋಡಿ ’ ಎಂತಹ ಊರು ಸ್ವಾಮಿ ಇದು. ಮಾಸ್ಟ್ರು ಎಚ್ಚರ ತಪ್ಪಿ ಬಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಗುರುತೇ ಇಲ್ಲದವರ ಹಾಗೇ ಎಲ್ಲರೂ ನಡೆದು ಕೊಂಡರು. ಇಂತಹ ಊರಿನಲ್ಲಿ ಬದುಕುವುದು ಕಷ್ಟ’ ಎಂದು ಉದ್ಗರಿಸಿದರು. ಕೇಳಿದ ನಮಗೂ ಇದು ಹೃದಯಹೀನ ಊರು, ಆತ್ಮವಿಲ್ಲದ ಊರು ಎಂದೆನಿಸಿತು. ಅಲ್ಲಿದ್ದ ಅಂಗಡಿಯವರಿಗೆ ನಾವು ಅಪರಿಚಿತರೇನೂ ಅಲ್ಲ. ರಸ್ತೆ ದಾಟಿದರೆ ನಮ್ಮ ಕಾಲೇಜು ಇದೆ. ಅಲ್ಲಿ ಸಾಲಾಗಿ ಇರುವ ಅಂಗಡಿಗಳಲ್ಲಿ ನಾವು ಎಷ್ಟೋ ಬಾರಿ ವ್ಯಾಪಾರವನ್ನು ಮಾಡಿದ್ದೇವೆ. ಹೀಗೆ ಇದ್ದೂ ಇಂತಹ ಪರಿಸ್ಠಿತಿ ಬಂದಿತೆಂದರೆ ಈ ಊರೇ ಬೇಡವೆಂಬ ಹೇವರಿಕೆ ಬಲವಾಗಿ ಮನಸ್ಸಿನಲ್ಲಿ ಬೇರು ಬಿಟ್ಟಿತು.</b><br />
<b><br />
</b><br />
<b>ಅದಕ್ಕಾಗಿ ನೆಮ್ಮದಿಯನ್ನು ಅರಸಿಕೊಂಡು , ಸಾಯಲು ಒಳ್ಳೆಯ ಸ್ಠಳವೆಂದು , ಗೆಳೆಯರೊಡನೆ ನಗೆಯಾಡುತ್ತಾ ಕೊನೆಯ ದಿನಗಳನ್ನು ಕಳೆಯಲು ಹುಟ್ಟೂರಿಗೆ ಬಂದಿದ್ದೇನೆ. ನಿಜವಾಗಲೂ ನೆಮ್ಮದಿಯಿಂದ ಇದ್ದೇನೆ. </b>nagaraja raohttp://www.blogger.com/profile/09150767551244015450noreply@blogger.com3